ಬೆಳಗಾವಿ:ಶಾಂತಿ ಕದಡುವವರ ವಿರುದ್ಧ ನಿರ್ಧಾಕ್ಷನೀಯ ಕ್ರಮ : ಸಹಕಾರ ಸಚಿವ ರಮೇಶ್
ಶಾಂತಿ ಕದಡುವವರ ವಿರುದ್ಧ ನಿರ್ಧಾಕ್ಷನೀಯ ಕ್ರಮ : ಸಹಕಾರ ಸಚಿವ ರಮೇಶ್
ಬೆಳಗಾವಿ ಡಿ 25 : ಶಾಂತಿ ಕದಡುವವರ ವಿರುದ್ಧ ನಿರ್ಧಾಕ್ಷನೀಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು. ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಬೆಳಗಾವಿಯಲ್ಲಿ ಕಲ್ಲು ತೂರಾಟ ಪ್ರಕರಣ ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ.
ನಗರದ ಖಡಕ ಗಲ್ಲಿ, ಖಂಜರ ಗಲ್ಲಿ, ಜಾಲಗಾರ ಗಲ್ಲಿ ಪ್ರದೇಶಗಳಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ ಕೆಲ ಸಿಬ್ಬಂಧಿ ಮೇಲೆ ಕರ್ತವ್ಯ ಲೋಪ ಪ್ರಕರಣದಡಿ ಕ್ರಮ ಕೈಗೊಳ್ಳಲಾಗಿದೆ ಎಂದರು. ಶಾಂತಿ ಕದಡಲು ಯಾರೇ ಯತ್ನ ಮಾಡಿದರು ಅವರನ್ನು ಜಿಲ್ಲಾಡಳಿತ ಬಿಡಲ್ಲ. ಅಂತಹವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು. ಚುನಾವಣೆ ಸಂದರ್ಭದಲ್ಲಿ ಗಲಭೆ ಹೆಚ್ಚಾಗಲಿದೆ ಎಂಬ ಮಾಹಿತಿ ಅನ್ವಯ ಗಲಭೆ ಪಿಡೀತ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸಲು ಸೂಚನೆ ನೀಡಲಾಗಿದೆ. ಗಲಭೆ ಮಾಡಿದ ಜನರು ಪರಾರಿಯಾಗಿದ್ದಾರೆ ಎಂಬ ಗುಪ್ತಚರ ಇಲಾಖೆಯಿಂದ ಮಾಹಿತಿ ಸಂಗ್ರಹವಾಗಿದೆ. ಕೆಲವರು ಬೇಕು ಎಂದೇ ಶಾಂತಿ ಕದಡುತ್ತಿದ್ದಾರೆ. ಅದಕ್ಕಾಗಿ
ಗಲಭೆ ಪೀಡಿತ ಪ್ರದೇಶಗಳಲ್ಲಿ ಇನ್ಮುಂದೆ ಹೈಮಾಸ್ಕ್ ಲೈಟ್ ಗಳನ್ನು ಹಾಕಲು ಸೂಚನೆ ನೀಡಲಾಗಿದೆ ಎಂದರು.
ಡಿಸಿ ಎಸ್. ಜಿಯಾವುಲ್ಲಾ, ಡಿಸಿಪಿ ಸೀಮಾ ಲಾಟಕರ, ಶಾಸಕ ಫಿರೋಜ್ ಸೇಠ್ ಹಾಜರಿದ್ದರು.