ಗೋಕಾಕ:ಕೊಲ್ಲಾಪೂರ- ಸವದತ್ತಿ ಹೊಸ ರೈಲು ಮಾರ್ಗಕ್ಕೆ ದಳವಾಯಿ ಆಗ್ರಹ
ಕೊಲ್ಲಾಪೂರ- ಸವದತ್ತಿ ಹೊಸ ರೈಲು ಮಾರ್ಗಕ್ಕೆ ದಳವಾಯಿ ಆಗ್ರಹ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜ 27 :
ಕೊಲ್ಲಾಪೂರ-ಸವದತ್ತಿ ಹೊಸ ರೈಲು ಮಾರ್ಗವನ್ನು ನಿರ್ಮಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಹಿರಿಯ ಮುಖಂಡರಾದ ಡಿ.ಎಂ.ದಳವಾಯಿ ಹೇಳಿದರು.
ಮಂಗಳವಾರ ಸಂಜೆ ಪಟ್ಟಣದ ಮೃತ್ಯುಂಜಯ ಸಭಾ ಭವನದಲ್ಲಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಮಿಗಳ ಸಾನಿಧ್ಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲ್ಲಾಪೂರ-ಮಹಾಲಕ್ಷ್ಮೀ ದೇವಸ್ಥಾನ ಸವದತ್ತಿ ವಾಯಾ ಘಟಪ್ರಭಾ ರೈಲು ಮಾರ್ಗವು ಮಹಾರಾಷ್ಟ್ರದಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನ ಸೇರಿದಂತೆ ಉತ್ತರ ಕರ್ನಾಟಕ ಭಾಗದ ತೀಥರ್À ಕ್ಷೇತ್ರಗಳಿಗೆ ಬರುವ ಲಕ್ಷಾಂತರ ಭಕ್ತಾಧಿಗಳ ಕನಸಾಗಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಘಟಪ್ರಭಾ ನಾಗರಿಕರಿಂದ ಕಳೆದ ದಿ.18-01-2020 ರಂದು ಮನವಿ ಸಲ್ಲಿಸಲಾಗಿತ್ತು, ಇದಕ್ಕೆ ಸ್ಪಂದಿಸಿರುವ ಪ್ರಧಾನಿಗಳು ದಿ.07-02-2020 ರಂದು ನನಗೆ ಕಳುಸಿರು ತಮ್ಮ ಪತ್ರದಲ್ಲಿ ಕೇಂದ್ರ ರೈಲ್ವೆ ಇಲಾಖೆ ಕಾರ್ಯದರ್ಶಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಆದ್ದರಿಂದ ಕಳೆದ ದಿ.12-01-2021 ರಂದು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಯೋಜನೆಯನ್ನು ಕೈಗೆತ್ತಕೊಳ್ಳಬೇಕೆಂದು ಆಗ್ರಹಿಸಲಾಗಿದೆ. ಅದಲ್ಲದೇ ಈ ಕುರಿತು ನಮ್ಮ ರಾಜ್ಯದ ಅನೇಕ ಸಂಸದರು ಮತ್ತು ಶಾಸಕರಿಗೂ ಕೂಡಾ ಪತ್ರಗಳನ್ನು ಬರೆಯಲಾಗಿದೆ. ಈ ವಿಷಯವನ್ನು ಸಚಿವ ರಮೇಶ ಜಾರಕಿಹೊಳಿ ಅವರ ಗಮನಕ್ಕೆ ತರಲಾಗಿದ್ದು, ಅವರು ಕೂಡಾ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ. ರಮೇಶ ಜಾರಕಿಹೊಳಿಯವರು ಕರ್ನಾಟಕದ ಮುಖ್ಯ ಮುಂತ್ರಿ ಯಡಿಯೂರಪ್ಪಯವರಿಗೆ ಲಿಖಿತ ಶಿಫಾರಸು ಪತ್ರ ಸಲ್ಲಿಸಿದ್ದಾರೆ ಕೇಂದ್ರ ಸರಕಾರದ ರೈಲ್ವೆ ಸಚಿವ ಪಿಯೂಷ ಗೋಯಲಯವರಿಗೆ ಲಿಖಿತ ಪತ್ರ ನೀಡಿದ್ದಾರೆ.
ಈ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆಗೆ ಮಹಾರಾಷ್ಟ್ರರ ಸರ್ಕಾರದ ಸಹಕಾರ ಕೂಡ ಬೇಕಿರುವದರಿಂದ ಮಹಾರಾಷ್ಟ್ರರ ಸರ್ಕಾರಕ್ಕೂ ಪತ್ರ ಬರೆಯಲಾಗಿದೆ. ದಿ.ಸುರೇಶ ಅಂಗಡಿಯವರು ನನ್ನ ಮನವಿಗೆ ಸ್ಪಂದಿಸಿ ಈ ಕಾರ್ಯ ಒಳ್ಳೆ ಕಾರ್ಯ ಕೇಂದ್ರದಲ್ಲಿ ಇದನ್ನು ಮನವರಿಕೆ ಮಾಡಿ ಯಶಸ್ವಿಗೊಳಿಸೋಣ ಎಂದಿದರು.
ಈ ಯೋಜನೆಯನ್ನು ಕಾರ್ಯ ಕೂಪಕ್ಕೆ ತರುವುದಕ್ಕಾಗಿ ಒಂದು ಯೋಜನಾಭದ್ದ ಹೋರಾಟ ಜೊತೆಗೆ ಕೆಳ ಮಟ್ಟದಿಂದ ಪ್ರಯತ್ನಗಳು ನಡೆಯಬೇಕಾಗಿದೆ. ಘಟಪ್ರಭಾ ಮತ್ತು ಸುತ್ತ ಮುತ್ತಲಿನ ಸಾರ್ವಜನಿಕರ ಜೊತೆಗೆ ರಾಜ್ಯದ ಶಾಸಕ-ಸಚಿವರ ಸಹಕಾರದ ಜೊತೆ ಮಾಧ್ಯಮಗಳ ಸಹಕಾರ ಕೂಡಾ ಮಹತ್ವದಾಗಿದೆ. ಆದ್ದರಿಂದ ಎಲ್ಲರೂ ಈ ಕಾರ್ಯಕ್ಕೆ ಕೈಜೋಡಿಸಬೇಕೆಂದು ವಿನಂತಿಸಿಕೊಂಡರು. ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಅವರು ಕೂಡಾ ಈ ಮಹತ್ವವಾದ ಯೋಜನೆಗೆ ಸಹಕರಿಸುವದಾಗಿ ಭರವಸೆ ನೀಡಿದ್ದಾರೆ.
ಸಾನಿಧ್ಯ ವಹಿಸಿದ್ದ ಸ್ಥಳೀಯ ಗುಬ್ಬಲಗುಡ್ಡ ಕೆಂಪಯ್ಯಾ ಸ್ವಾಮಿಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಡಿ.ಎಂ.ದಳವಾಯಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಈ ಘಟಪ್ರಭಾ ನಗರಕ್ಕೆ ನೀಡಿದ್ದು ನಮಗಿಂತ ನಿಮಗೆ ಬಹಳಷ್ಟು ಗೊತ್ತಿರುವ ವಿಷಯ ಇಂಥಹ ಅಭಿವೃದ್ಧಿ ಕೆಲಸಗಳಿಗೆ ದಳವಾಯಿ ಮಾಡುತ್ತಿರುವ ಕಾರ್ಯ ಅದ್ಭುತ ಆ ಶ್ರೆಯಷ್ಟು ಅವರಿಗೆ ಸಲ್ಲಬೇಕು. ಕೊಲ್ಲಾಪೂರ-ಸವದತ್ತಿ ಹೊಸ ರೈಲು ಮಾರ್ಗದ ಅತ್ಯಂತ ಅವಶ್ಯಕತೆಯಿದೆ. ಇದಕ್ಕೆ ಸಾಕಷ್ಟು ಹೋರಾಟದ ಜೊತೆಗೆ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ಈ ಭಾಗದ ರಾಜಕಾರಣಿಗಳು ಭಕ್ತಾಧಿಕಾರಿಗಳ ಅನುಕೂಲಕ್ಕಾಗಿ ಈ ಯೋಜನೆಯನ್ನು ಆದಷ್ಟು ಬೇಗನೆ ಕಾರ್ಯರೂಪಕ್ಕೆ ತರಬೇಕೆಂದು ಒತ್ತಾಯಿಸಿದರು.
ವೇದಿಕೆ ಮೇಲೆ ಅಕ್ಕಲಕೋಟದ ಶ್ರೀ ಚನ್ನಬಸವ ದೇವರು, ಹಿರಿಯರಾದ ಡಾ.ವಿಲಾಸ ನಾಯಿಕವಾಡಿ, ಎಸ್.ಐ.ಬೆಣವಾಡಿ, ಕೆ.ಡಿ.ವಾಲಿಕರ ಇದ್ದರು.