RNI NO. KARKAN/2006/27779|Monday, June 16, 2025
You are here: Home » breaking news » ಬೆಳಗಾವಿ:ಮತದಾರರ ಮನಸ್ಥಿತಿ ಅರಿತ ಇಂದಿನ ರಾಜಕಾರಣಿಗಳು ಜನರನ್ನು ಹೇಗೆ ಬೇಕು ಹಾಗೇ ಉಪಯೋಗಿಸುತ್ತಿದ್ದಾರೆ : ಚಿತ್ರನಟ ಉಪೇಂದ್ರ

ಬೆಳಗಾವಿ:ಮತದಾರರ ಮನಸ್ಥಿತಿ ಅರಿತ ಇಂದಿನ ರಾಜಕಾರಣಿಗಳು ಜನರನ್ನು ಹೇಗೆ ಬೇಕು ಹಾಗೇ ಉಪಯೋಗಿಸುತ್ತಿದ್ದಾರೆ : ಚಿತ್ರನಟ ಉಪೇಂದ್ರ 

ಮತದಾರರ ಮನಸ್ಥಿತಿ ಅರಿತ ಇಂದಿನ ರಾಜಕಾರಣಿಗಳು ಜನರನ್ನು ಹೇಗೆ ಬೇಕು ಹಾಗೇ ಉಪಯೋಗಿಸುತ್ತಿದ್ದಾರೆ :  ಚಿತ್ರನಟ ಉಪೇಂದ್ರ 

ಬೆಳಗಾವಿ ಡಿ 11:  ವಿಧಾನಸೌಧದಿಂದ ಸುವರ್ಣಸೌಧಕ್ಕೆ ಯಾತ್ರೆ ಮುಕ್ತಾಯವಾಗುತ್ತಿದೆ ಪ್ರಜಾಕಾರಣ ಪ್ರಜೆಗಳ ರಾಜಕಾರಣ ಆಗಬೇಕೆಂದು ಚಿತ್ರನಟ ಉಪೇಂದ್ರ ತಿಳಿಸಿದ್ದಾರೆ.

ಸೋಮವಾರದಂದು ನಗರದ ಮೀಲನ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು  ರಾಜಕಾರಣ ನಮ್ಮೆಲ್ಲರ ಮನಸ್ಸಿನಲ್ಲಿದೆ. ಹಣ, ಜಾತಿ ವ್ಯವಸ್ಥೆಯ ಒಡೆದಾಳುವ ನೀತಿ ನಾವು ನೋಡುತ್ತಿದ್ದೇವೆ. ಹಾಲಿನಂತಹ ಮನಸ್ಸಿನ ಜನರನ್ನು, ಇಂದು ಮಜ್ಜಿಗೆ ಮಾಡಿ, ಆ ನಂತರ ಪನ್ನೀರ ಮಾಡಿ ಕೊನೆಗೆ ಫ್ರಿಜ್ ನಲ್ಲಿ ಇಟ್ಟಿದ್ದಾರೆ. ಜನರ ಸೂಕ್ಷ್ಮ ಮನಸ್ಥಿತಿ ಅರಿತ ಇಂದಿನ ರಾಜಕಾರಣಿಗಳು ಜನರನ್ನು ಹೇಗೆ ಬೇಕು ಹಾಗೇ ಉಪಯೋಗಿಸುತ್ತಿದ್ದಾರೆ ಎಂದರು.

ರಾಜ್ಯದ 226 ಸ್ಥಾನಗಳಿಗೆ ಶ್ರೀ ಸಾಮಾನ್ಯ ಜನ ಚುನಾವಣೆಗೆ ನಿಲ್ಲಲು ನಮ್ಮದು ವೇದಿಕೆ. ಬರೀ 20% ಜನರ ಬಳಿ ಮಾತ್ರ ಇಂದು ಅಧಿಕಾರ, ದುಡ್ಡು ಇದೆ. ಅದು ಉಳಿದ 80% ಶ್ರೀ ಸಾಮಾನ್ಯ ಜನರಿಗೆ ಹಂಚಬೇಕು‌. ಎಲ್ಲರಿಗೂ ಅಧಿಕಾರ, ಹಣ, ಅಂತಸ್ತು ಬರಬೇಕು. ರಾಜಕಾರಣ ಖಂಡಿತವಾಗಿ ಬಿಸಿನೆಸ್ ಆಗಬಾರದು. ಆದರೆ ಬುಸಿನೆಸ್ ಆಗಿದೆ. ಬಹುಹಿಂದೆ ರಾಜರು ಇದ್ದರು ಮತ್ತು ಹೋದರು, ಅವರ ಜಾಗಕ್ಕೆ ರಾಜಕಾರಣಿಗಳು ಬಂದರು. ರಾಜಕಾರಣಿಗಳು ಬರೀ ರಾಜರಾಗಿ ಮೆರೆಯುತ್ತಿದ್ದಾರೆ ಎಂದು ಖೇದ ವ್ಯಜ್ತಪಡಿಸಿದರು. ಜನರ ಬಳಿಯೂ ಸಾಕಷ್ಟು ಉತ್ತಮ ಯೋಜನೆ, ಯೋಚನೆ ಅಭಿರುಚಿಗಳು ಇವೆ ಎಂದು ಹರ್ಷ ವ್ಯಕ್ತಪಡಿಸಿದರು.

ರಾಜ್ಯದ ಪ್ರತಿಕ್ಷೇತ್ರದಿಂದ ಬರುವ ಪ್ರಮಾಣಿಕ ಮತ್ತು ಸೂಕ್ತ ಯೋಜನೆ ಹೊಂದಿದ ಅಭ್ಯರ್ಥಿಯ ಕೌನ್ಸಿಲಿಂಗ್ ಮಾಡಿ ಚುನಾವಣಾ ಸ್ಥಾನ ಕೊಡಲಾಗುವುದು. ಎಲ್ಲರಿಗೂ ಕ್ಷೇತ್ರ ಕೊಟ್ಟ ನಂತರ ಉಳಿದ ಕ್ಷೇತ್ರಕ್ಕೆ ನಾನು ನಿಲ್ಲುವೆ. ನಮಗೆ ಗೆಲ್ಲಲೇಬೇಕೆಂದೇನಿಲ್ಲ, ಪಕ್ಷಕ್ಕೆ ಹಣವೂ ಇರುವುದಿಲ್ಲ, ಜಾತಿ, ಮತ, ಜನಸಂಪರ್ಕದ ಹಂಗು ಬೇಕಿಲ್ಲ. ಎಲೆಕ್ಷನ್ ಒಂದು ಸಮಾಜ ಸೇವೆ ಅದಕ್ಕಾಗಿ ಬರುವ ಜನರಿಗೆ ದೇಶವಾಸಿಗಳು ಓಟ್ ಹಾಕಿ ತಮ್ಮ ಅಭ್ಯರ್ಥಿಯನ್ನು ಆರಿಸಬೇಕು. ಅದಕ್ಕೆ ಜನರಿಗೆ ಆಸೆ- ಆಮೀಷ ಒಡ್ಡುವ, ರ್ಯಾಲಿ ಮಾಡುವ ಅವಶ್ಯಕತೆ ನಮಗಿಲ್ಲ. ಆಧುನಿಕ ಸಂಪರ್ಕ ತಂತ್ರಜ್ಞಾನದ ಮೂಲಕ ಜನರನ್ನು ತಲುಪುತ್ತೇವೆ. ಪ್ರಜಾರಾಜಕೀಯ ಸಾಕಷ್ಟು ಯಶಸ್ಸು ಸಾಧಿಸುತ್ತದೆ ಎಂದರು. ಅನ್ಯಪಕ್ಷಗಳನ್ನು ಮತ್ತು ರಾಜಕಾರಣಿಗಳನ್ನು ನಾವು ತೆಗಳುವುದಿಲ್ಲ. ಧನಾತ್ಮಕವಾಗಿ ಮುಂದುವರೆಯುವುದು ನಮಗಿಷ್ಟ ಎಂದರು.

ಎಸ್. ಆರ್. ಹಿರೇಮಠ ಆರೋಪ ನಿರಾಧಾರ: ನಾನು ನನ್ನ ಅಣ್ಣ ಸೇರಿ ರೆಸಾರ್ಟ್ ಕಟ್ಟಿದ್ದೇವೆ. ಆದರೆ ಆ ರೆಸಾರ್ಟ್ ಬೇರೆಯೇ ಇದೆ, ಅದರ ಹಿಂದೆ ನಮ್ಮ ಜಮೀನು ಬೇರೆ ಇದೆ. ಕೃಷಿ ಭೂಮಿಯಲ್ಲಿ ನಾವು ರೆಸಾರ್ಟ್ ಕಟ್ಟಿಲ್ಲ. KSTDC ಯಿಂದ ನಾವು ಅನುಮತಿ ತೆಗೆದುಕೊಂಡಿದ್ದೇವೆ ಎಂದರು. ನ್ಯಾಯಾಲಯದ ತೀರ್ಪಿನ ನಂತರವೂ ಹಿರೇಮಠ ಅವರ ಆರೋಪ ಅನಾವಶ್ಯಕ ಎಂದರು

ಜನಜಂಗುಳಿ: ಮಿಲನ್ ಹೊಟೇಲ್ ನಲ್ಲಿ ಪ್ರೆಸ್ ಮೀಟ್ ನಡೆದಿದ್ದರೆ, ಹೊರಗೆ ನೂರಾರು ಅಭಿಮಾನಿಗಳು ಅವರ ಭೇಟಿಗೆ ಕಾಯ್ದಿದ್ದರು.

Related posts: