ಗೋಕಾಕ:ಶ್ರೀ ಮುರಘೇಂದ್ರ ಶಿವಯೋಗಿಗಳು ಸಮಾನತೆಯ ಹರಿಕಾರರಾಗಿದ್ದರು : ಮುರಘರಾಜೇಂದ್ರ ಶ್ರೀ
ಶ್ರೀ ಮುರಘೇಂದ್ರ ಶಿವಯೋಗಿಗಳು ಸಮಾನತೆಯ ಹರಿಕಾರರಾಗಿದ್ದರು : ಮುರಘರಾಜೇಂದ್ರ ಶ್ರೀ
ಗೋಕಾಕ ಡಿ 5: ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನೀರಾಪಕ್ಷೆ, ಭಾವ ಹೊಂದಿದ ಅಥಣಿಯ ಶ್ರೀ ಮುರಘೇಂದ್ರ ಶಿವಯೋಗಿಗಳು 22 ವರ್ಷ ದೇಶ ಸಂಚಾರ ಮಾಡಿ, ಧಾರ್ಮಿಕ ಜಾಗೃತಿಯನ್ನು ಮೂಡಿಸಿದರೆಂದು ನದಿ ಇಂಗಳಗಾಂವದ ಶ್ರೀ ಗುರುಲಿಂಗದೇವ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ರವಿವಾರದಂದು ಸಂಜೆ ನಗರದ ಶೂನ್ಯ ಸಂಪಾದನಾ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಹಾಗೂ ವೀರಶೈವ ಜಾಗೃತ ಮಹಿಳಾ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಹುಣ್ಣಿಮೆ ನಿಮಿತ್ಯ ಹಮ್ಮಿಕೊಂಡ 118ನೇ ಶಿವಾನುಭಗೋಷ್ಠಿಯಲ್ಲಿ ಅಥಣಿಯ ಶ್ರೀ ಮುರಘೇಂದ್ರ ಶಿವಯೋಗಿಗಳು ನಿಜಾಚರಣೆ ಕುರಿತು ಮಾತನಾಡುತ್ತಾ ಬಸವಾದಿ ಶರಣ ವಚನಗಳನ್ನು ಆಚರಣೆಗೆ ತರುವಂತೆ ಸರ್ವಭಕ್ತರಲ್ಲೂ ಸಮಭಾವದಿಂದ ಕಾಣುವುದರೊಂದಿಗೆ ಭಕ್ತಾಧಿಗಳನ್ನು ಪ್ರೇರಿಪಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಶ್ರೀ ಮುರಘೇಂದ್ರ ಶಿವಯೋಗಿಗಳು ಜನರ ಪಾಪ ತೊಳೆಯಲು ಭೂಮಿಗೆ ಅವತರಿಸಿ, ಭಕ್ತರ ಪಾಲಿಗೆ ಕಾಶಿ ವಿಶ್ವನಾಥರಾಗಿದ್ದರು, ಎಲ್ಲ ಸಮುದಾಯಗಳನ್ನು ಸಮಾನ ದೃಷ್ಟಿಯಲ್ಲಿ ನೋಡುವುದರೊಂದಿಗೆ ಸಮಾನತೆಯ ಹರಿಕಾರರಾಗಿದ್ದರು ಎಂದು ಹೇಳಿದರು.
ವೇದಿಕೆ ಮೇಲೆ ಬಸನಗೌಡ ಪಾಟೀಲ, ಡಾ|| ಸಿ.ಕೆ.ನಾವಲಗಿ, ಸುಜಾತಾ ಮುಚ್ಚಂಡಿಹಿರೇಮಠ, ಮಹಾಲಿಂಗಪ್ಪ ನೇಗಿನಾಳ ಇದ್ದರು.