RNI NO. KARKAN/2006/27779|Sunday, June 15, 2025
You are here: Home » breaking news » ಮೂಡಲಗಿ:ನ 18 ರಪರಿವರ್ತನಾ ಯಾತ್ರೆಯು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ : ಶಾಸಕ ಬಾಲಚಂದ್ರ

ಮೂಡಲಗಿ:ನ 18 ರಪರಿವರ್ತನಾ ಯಾತ್ರೆಯು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ : ಶಾಸಕ ಬಾಲಚಂದ್ರ 

ನ 18 ರಪರಿವರ್ತನಾ ಯಾತ್ರೆಯು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ : ಶಾಸಕ ಬಾಲಚಂದ್ರ

ಮೂಡಲಗಿ ನ 10: ಅರಭಾವಿ ಮತಕ್ಷೇತ್ರದ ಮೂಡಲಗಿಯಲ್ಲಿ ನ.18 ರಂದು ಮ.3 ಗಂಟೆಗೆ ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯು ಅತೀ ಅದ್ಧೂರಿಯಿಂದ ಜರುಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ಪುರಸಭೆ ಆವರಣದಲ್ಲಿ ಸಂಜೆ ನಡೆದ ಬಿಜೆಪಿ ಕಾರ್ಯಕರ್ತರ ಪೂರ್ವಸಿದ್ಧತಾ ಸಭೆಯಲ್ಲಿ ತಿಳಿಸಿದ ಅವರು, ಅಂದು ಮೂಡಲಗಿಯಲ್ಲಿ ಬಿಜೆಪಿ ಜಾತ್ರೆಯಾಗಿ ಪರಿವರ್ತನೆಯಾಗಲಿದೆ. ಇದೊಂದು ನವ ಇತಿಹಾಸ ಸೃಷ್ಠಿಸಲಿದೆ ಎಂದು ಅವರು ಹೇಳಿದರು.

ಮೂಡಲಗಿಯ ಎಸ್‍ಎಸ್‍ಆರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಅರಭಾವಿ ಮತಕ್ಷೇತ್ರದ ಸುಮಾರು 50 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. ಈ ಪರಿವರ್ತನಾ ಯಾತ್ರೆಯು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಹಿತ ಹಲವು ನಾಯಕರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಬಿಜೆಪಿ ಬಿಡುವುದಿಲ್ಲ : ಮುಂದಿನ 2018ರಲ್ಲಿ ಅರಭಾವಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಕೆಲವರು ಜೆಡಿಎಸ್ ಸೇರುತ್ತಾರೆಂದು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಅಂತಹ ಯಾವುದೇ ವದಂತಿಗಳನ್ನು ನಂಬಬಾರದು. ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಕಾರ್ಯಕರ್ತರು ಗೊಂದಲಕ್ಕೊಳಗಾಗಬಾರದು. ಒಂದು ವೇಳೆ ಬಿಜೆಪಿ ಬಿಡುತ್ತೇನೆಂದರೆ ಕ್ಷೇತ್ರದಲ್ಲಿ ಹಿಂದೆಂದೂ ಕಂಡಿರದ ಬಿಜೆಪಿ ಕಾರ್ಯಕ್ರಮವನ್ನು ಆಯೋಜಿಸುತ್ತಿರಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ತಾಕತ್ ಇದ್ದರೆ ಚರ್ಚೆಗೆ ಬನ್ನಿ : ಅಭಿವೃದ್ಧಿ ವಿಷಯ ಕುರಿತಂತೆ ತಾಕತ್ ಇದ್ದರೆ ಒಂದೇ ವೇದಿಕೆಯಲ್ಲಿ ಬಂದು ಚರ್ಚೆ ನಡೆಸುವಂತೆ ವಿರೋಧಿಗಳಿಗೆ ಆಹ್ವಾನ ನೀಡಿದರು. ಇದಕ್ಕಾಗಿ ವೇದಿಕೆ ಸಿದ್ಧಪಡಿಸುತ್ತೇನೆ. ಅಭಿವೃದ್ಧಿ ಕುರಿತಂತೆ ಕಿರು ಪುಸ್ತಕವನ್ನು ಅಂಕಿ-ಅಂಶಗಳ ಸಹಿತ ಪ್ರಕಟಿಸುತ್ತೇನೆ. ತಾಕತ್ತು ಇದ್ದರೇ ಚರ್ಚೆಗೆ ಬನ್ನಿ ಎಂದು ವಿರೋಧಿಗಳಿಗೆ ಸವಾಲು ಹಾಕಿದರು.

ಕಳೆದ 2004 ರಿಂದ ಇಲ್ಲಿಯವರೆಗೆ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಅಭಿವೃದ್ಧಿ ಸಹಿಸದ ಕೆಲ ವಿರೋಧಿಗಳು ಅಭಿವೃದ್ಧಿ ಕಾಮಗಾರಿಗಳು ನಡದೇ ಇಲ್ಲವೆಂಬ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕೆಲ ವಿರೋಧಿಗಳು ಕ್ಷೇತ್ರದ ಕೆಲವೆಡೆ ಸುತ್ತುತ್ತಾ ಸುಳ್ಳು ಪ್ರಚಾರ ಮಾಡುತ್ತಾ ಹೊರಟಿದ್ದಾರೆ. ಕೇವಲ ಸುಳ್ಳು ಭಾಷಣದಿಂದ ಜನರ ಮನಸ್ಸನ್ನು ಗೆಲ್ಲಲಿಕ್ಕೆ ಆಗುವುದಿಲ್ಲ. ನಾಲಿಗೆಯನ್ನು ಬಿಗಿಹಿಡಿತದಲ್ಲಿ ಇಟ್ಟುಕೊಳ್ಳಿ. ನನಗೂ ಮಾತಾಡೋಕೆ ಬರುತ್ತೆ. ಆದರೆ ಅದು ನನ್ನ ಸಂಸ್ಕøತಿಯಲ್ಲ. ಜನರ ಪ್ರೀತಿ ವಿಶ್ವಾಸವೇ ನನ್ನ ಜೀವನಕ್ಕೆ ದಾರಿದೀಪವಾಗಿದೆ. ಮುಂದಿನ ಚುನಾವಣೆಯಲ್ಲಿ ವಿರೋಧಿ ಗುಂಪಿನ ಯಾರಾದರೊಬ್ಬರೂ ನನ್ನ ವಿರುದ್ಧ ಸ್ಪರ್ಧಿಸಲಿ. ಅವರು ತಮ್ಮ ಠೇವಣಿ ಉಳಿಸಿಕೊಳ್ಳಲು ಪ್ರಯತ್ನಿಸಲಿ ಎಂದು ವ್ಯಂಗ್ಯವಾಡಿದರು.

ಮೂಡಲಗಿ ಅಭಿವೃದ್ಧಿಗೆ ಪಣ : ಮೂಡಲಗಿ ಪಟ್ಟಣದಲ್ಲಿ ತಾಲೂಕಾ ಮಟ್ಟದ ಕಛೇರಿಗಳು ಜನೇವರಿಯಿಂದ ಪ್ರಾರಂಭಗೊಳ್ಳಲಿವೆ. ಜ.1 ರಿಂದ ಮೂಡಲಗಿ ಹೊಸ ತಾಲೂಕು ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ವಿಕಾಸಕ್ಕೆ ಸದಾ ಸಿದ್ಧರಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ನ.18 ರಂದು ಎಸ್‍ಎಸ್‍ಆರ್ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯ ಸ್ಥಳ ಪರಿಶೀಲನೆ ನಡೆಸಿದರು.

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪುರಸಭೆ ಅಧ್ಯಕ್ಷೆ ಕಮಲವ್ವ ಹಳಬರ, ಪುರಸಭೆ ಮಾಜಿ ಅಧ್ಯಕ್ಷ ಈರಣ್ಣಾ ಹೊಸೂರ, ಡಿ.ಬಿ. ಪಾಟೀಲ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ರವೀಂದ್ರ ಸಣ್ಣಕ್ಕಿ, ಪುರಸಭೆ ಸದಸ್ಯರಾದ ರಾಮಣ್ಣಾ ಹಂದಿಗುಂದ, ರಮೇಶ ಸಣ್ಣಕ್ಕಿ, ಈರಣ್ಣಾ ಬನ್ನೂರ, ಡಾ.ಎಸ್.ಎಸ್.ಪಾಟೀಲ, ಪ್ರಕಾಶ ಈರಪ್ಪನವರ, ಲಕ್ಷ್ಮಣ ಹಳ್ಳೂರ, ಮಲ್ಲಪ್ಪ ಢವಳೇಶ್ವರ, ರಾಮಣ್ಣಾ ನೇಮಗೌಡರ, ಶಾಬವ್ವಾ ಪಾಟೀಲ, ಸೇವಂತಾ ಹೊಸಮನಿ, ಹುಸೇನಸಾಬ ಶೇಖ, ಮುಖಂಡರಾದ ಅಜೀಜ ಡಾಂಗೆ, ರೆಹಮಾನ ಝಾರೆ, ಶರೀಫ ಪಟೇಲ್, ಪ್ರಭಾಕರ ಬಂಗೆನ್ನವರ, ಅರಭಾವಿ ಮಂಡಲದ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ ಮಾದರ ಸ್ವಾಗತಿಸಿದರು. ಅರಭಾವಿ ಮಂಡಲ ಅಧ್ಯಕ್ಷ ಸುಭಾಸ ಪಾಟೀಲ ವಂದಿಸಿದರು.

Related posts: