ಘಟಪ್ರಭಾ:ಮಲ್ಲಾಪೂರ ಪಿ.ಜಿ ಪ.ಪಂ ವ್ಯಾಪ್ತಿಯಲ್ಲಿ ಮನೆ ಮನೆಗೆ ಕಾಂಗ್ರೇಸ ಕಾರ್ಯಕ್ರಮ
ಮಲ್ಲಾಪೂರ ಪಿ.ಜಿ ಪ.ಪಂ ವ್ಯಾಪ್ತಿಯಲ್ಲಿ ಮನೆ ಮನೆಗೆ ಕಾಂಗ್ರೇಸ ಕಾರ್ಯಕ್ರಮ
ಘಟಪ್ರಭಾ ಅ 26: ಕೆ.ಪಿ.ಸಿ.ಸಿ ಕಾರ್ಯದರ್ಶಿ ಹಾಗೂ ಗೋಕಾಕ ವಿಧಾನ ಸಭಾ ಕ್ಷೇತ್ರದ ವೀಕ್ಷಕರಾದ ಶಿವಾನಂದ ಪಾಚಂಗಿ ಅವರ ನೇತೃತ್ವದಲ್ಲಿ ಕಾಂಗ್ರೇಸ ಕಾರ್ಯಕರ್ತರು ಮಲ್ಲಾಪೂರ ಪಿ.ಜಿ ಪ.ಪಂ ವ್ಯಾಪ್ತಿಯಲ್ಲಿ ಮನೆ ಮನೆಗೆ ಕಾಂಗ್ರೇಸ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಂಡಿದರು.
ಮನೆ ಮನೆಗೆ ಕಾಂಗ್ರೇಸ ಕಾರ್ಯಕ್ರಮದ ಅಂಗವಾಗಿ ಮನೆಗಳಿಗೆ ತೆರಳಿ ಐದು ವರ್ಷಗಳ ರಾಜ್ಯದ ಕಾಂಗ್ರೇಸ ಸರ್ಕಾರ ತಮ್ಮ ಅಧಿಕಾರ ಅವಧಿಯಲ್ಲಿ ಅನ್ನಭಾಗ್ಯ. ಕ್ಷೀರಭಾಗ್ಯ, ಕೃಷಿಭಾಗ್ಯ, ಪಶುಭಾಗ್ಯ, ವಿದ್ಯಾಸಿರಿ, ನಮ್ಮ ಮೆಟ್ರೋ, ಸೌರಭಾಗ್ಯ, ಕ್ಷೀರಧಾರೆ, ನಿರ್ಮಲ ಭಾಗ್ಯ, ಶುದ್ಧನೀರು, ವಸತಿ ಭಾಗ್ಯ, ರಾಜೀವ ಆರೋಗ್ಯ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿ ಕೈಪಿಡಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಗಂಗಾಧರ ಬಡಕುಂದ್ರಿ, ಪ್ರವೀಣ ಮಟಗಾರ, ಸಲೀಮ ಕಬ್ಬೂರ, ಮಲ್ಲು ಕೋಳಿ, ಇಂಬ್ರಾನ ಬಟಕುರ್ಕಿ, ಮಾರುತಿ ಹುಕ್ಕೇರಿ, ಈರಣ್ಣ ಕಲಕುಟಗಿ, ನಾಗರಾಜ ಚಚಡಿ, ಕಾಂಗ್ರೇಸ ಮುಖಂಡರಾದ ಡಿ.ಎಂ.ದಳವಾಯಿ, ಸುಧೀರ ಜೋಡಟ್ಟಿ, ಕುಮಾರ ಹುಕ್ಕೇರಿ, ಶಿವಪುತ್ರ ಕೋಗನೂರ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಶೇಖರ ಕುಲಗೋಡ, ಗೋದಂಳಿ ಸಮಾಜದ ಮುಖಂಡ ಅರ್ಜುನ ಬೋಸಲೆ, ಗೋಕಾಕ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೇಸ ಅಧ್ಯಕ್ಷ ನವೀನ ಉಪ್ಪಾರ, ಉಪಾಧ್ಯಕ್ಷ ಜುವೇದ ಡಾಂಗೆ, ಕಾರ್ಯದರ್ಶಿ ವಿನಾಯಕ ಸಂಪಗಾವಿ, ಸದ್ದಾಮ ಕಬ್ಬೂರ, ನಾಗರಾಜ ಜಂಬರಿ ಸೇರಿದಂತೆ ಕಾರ್ಯಕರ್ತರು ಇದ್ದರು.