RNI NO. KARKAN/2006/27779|Tuesday, March 18, 2025
You are here: Home » breaking news » ಗೋಕಾಕ:ರಾಜಕಾರಣ ಯಾರ ಮನೆಯ ಸ್ವತ್ತಲ್ಲ, ಇಂದು ನಮ್ಮ ದಾಗಿರುತ್ತದೆ , ನಾಳೆ ಬೇರೆಯವರ ದಾಗಿರುತ್ತದೆ : ಗೋಕಾಕದಲ್ಲಿ ಸಚಿವೆ ಹೆಬ್ಬಾಳಕರ ಅಭಿಮತ

ಗೋಕಾಕ:ರಾಜಕಾರಣ ಯಾರ ಮನೆಯ ಸ್ವತ್ತಲ್ಲ, ಇಂದು ನಮ್ಮ ದಾಗಿರುತ್ತದೆ , ನಾಳೆ ಬೇರೆಯವರ ದಾಗಿರುತ್ತದೆ : ಗೋಕಾಕದಲ್ಲಿ ಸಚಿವೆ ಹೆಬ್ಬಾಳಕರ ಅಭಿಮತ 

ರಾಜಕಾರಣ ಯಾರ ಮನೆಯ ಸ್ವತ್ತಲ್ಲ, ಇಂದು ನಮ್ಮ ದಾಗಿರುತ್ತದೆ , ನಾಳೆ ಬೇರೆಯವರ ದಾಗಿರುತ್ತದೆ : ಗೋಕಾಕದಲ್ಲಿ ಸಚಿವೆ ಹೆಬ್ಬಾಳಕರ ಅಭಿಮತ

ಗೋಕಾಕ ಜು 11 : ರಾಜಕಾರಣ ಯಾರ ಮನೆಯ ಸ್ವತ್ತಲ್ಲ, ಇಂದು ನಮ್ಮ ದಾಗಿರುತ್ತದೆ , ನಾಳೆ ಬೇರೆಯವರ ದಾಗಿರುತ್ತದೆ. ಗೆದ್ದಾಗ ಬೀಗುವುದು, ಸೋತಾಗ ಕುಗ್ಗುವುದು ಮನುಷ್ಯನ ಸಹಜವಾದ ಸ್ವಭಾವ. ಆದರೆ ಸೋಲು- ಗೆಲುವು ಯಾವುದೂ ಶಾಶ್ವತವಲ್ಲ ಎನ್ನುವ ಪ್ರಣವ ಮಂತ್ರ ಸದಾ ನಮ್ಮ ಮನಸ್ಸಿನಲ್ಲಿ ಜಾಗೃತವಾಗಿರಬೇಕು. ನಾವು ಪ್ರತಿ ಬಾರಿ ಸೋತಾಗಲೂ ಒಂದು ಅನುಭವದ ಪಾಠವನ್ನಂತೂ ಖಂಡಿತ ಕಲಿಯುತ್ತೇವೆ ಅದನ್ನು ನನ್ನ ಮಗನಿಗೆ ಹೇಳಿಕೊಟ್ಟಿದ್ದೇನೆ. ನಿರಂತರವಾಗಿ ನಿಮ್ಮ ಸೇವೆ ಮಾಡಲು ನಾವು ಸದಾ ಸದಾಸಿದ್ದ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು .

ಗುರುವಾರದಂದು ನಗರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿದ ಗೋಕಾಕ ಮತ್ತು ಅರಭಾವಿ ವಿಧಾನಸಭೆ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಿಜೆಪಿಯವರೆ ಬೆಳಗಾವಿಗೆ ಅನ್ಯಾಯ ಮಾಡಿದರವರಿಗೆ ಮತ ನೀಡೋದಿಲ್ಲ ಕಾಂಗ್ರೆಸಗೆ ಮತನೀಡುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಯಾವ ಕಾರಣಕ್ಕೆ ಗೋತ್ತಿಲ್ಲ ನಮ್ಮಗೆ ಸೋಲಾಗಿದೆ. ಆ ಕಾರಣವನ್ನು ನಾನು ಹುಡುಕುತ್ತಿದ್ದೇನೆ . ನೇಹಾ ಹತ್ಯೆಯಾಗಿರಬಹುದು, ಮೋದಿ ಅಲ್ಲೆ ಇರಬಹುದು. ಹಲವು ಕಾರಣಗಳಿಂದ ನಾವು ಸೋತ್ತಿರಬಹುದು ಆದರೆ ಇದನ್ನು ನಾನು ಚಾಲೆಂಜ್ ಆಗಿ ತಗೆದುಕೊಂಡು ಮುಂದಿನ ದಿನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ದಿನಗಳು ನಮಗೆ ಒಳ್ಳೆಯ ದಿನಗಳು ಬರುತ್ತವೆ. ಜನ ಮನಸ್ಸು ಮಾಡಿದರು ಮನೆಯಲ್ಲಿ ಕೂರಿಸುತ್ತಾರೆ.ಮನಸ್ಸು ಮಾಡಿದರೆ ಗೆಲ್ಲಿಸುತ್ತಾರೆ. ಸೋಲು ಮತ್ತು ಗೆಲುವು ಪ್ರಜಾತಂತ್ರ ದಲ್ಲಿ ನಿರಂತರ ಪ್ರಕ್ರಿಯೆ ಮುಂದೆ ಹೋರಾಟ ಮಾಡಿ ಗೆಲ್ಲೋಣ ಎಂದ ಅವರು ಸತೀಶ ಜಾರಕಿಹೊಳಿ ಅವರು ಲೋಕಸಭೆ ಚುನಾವಣೆಯಲ್ಲಿ ನಿಂತ ಸಂದರ್ಭದಲ್ಲಿ ಪಡೆದ ಮತಗಳಿಂದ ಮೃಣಾಳ ಹೆಬ್ಬಾಳಕರ ಅವರಿಗೆ ಮತದಾರರು ಹೆಚ್ಚು ಮತಗಳನ್ನು ನೀಡಿದ್ದಾರೆ ಗೋಕಾಕದಲ್ಲಿ ಮೃಣಾಳಗೆ 83 ಸಾವಿರ ಮತ ನೀಡಿದರೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ 59 ಸಾವಿರ ಮತ ನೀಡಿದ್ದರು ಎಂದು ಸಚಿವ ಸತೀಶ ಜಾರಕಿಹೊಳಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು ಮತ್ತೆ ಸಂಘತರಾಗೋಣ, ಸಂಘಟನೆ ಗಟ್ಟಿಮಾಡೋಣ ಎಂದು ಹೇಳಿದರು.

ಮೃಣಾಳ ಹೆಬ್ಬಾಳಕರ ಮಾತನಾಡಿ ಚುನಾವಣೆಯಲ್ಲಿ ಸೋಲಾಗಿದೆ ಜನಸೇವೆಯಲ್ಲಿ ಸೋಲಾಗಿಲ್ಲ. ಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ನಿಮ್ಮ ಪರವಾಗಿ ನಿಂತು ಪಕ್ಷವನ್ನು ಗಟ್ಟಿಗೊಳಿಸುವ ಕಾರ್ಯಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅರಭಾವಿ ಮತ್ತು ಗೋಕಾಕ ಮತಕ್ಷೇತ್ರದ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: