ಗೋಕಾಕ:ಶಿಕ್ಷಣ , ಆರೋಗ್ಯ , ಸಂಸ್ಕಾರ , ಪರಿಸರ ಹಾಗೂ ಸಹಕಾರ ಎಂಬ ಐದು ತತ್ವದಡಿ ಫೌಂಡೇಶನ್ ಕಾರ್ಯಮಾಡುತ್ತಿದೆ : ಮಹಾಂತೇಶ ಕವಟಗಿಮಠ

ಶಿಕ್ಷಣ , ಆರೋಗ್ಯ , ಸಂಸ್ಕಾರ , ಪರಿಸರ ಹಾಗೂ ಸಹಕಾರ ಎಂಬ ಐದು ತತ್ವದಡಿ ಫೌಂಡೇಶನ್ ಕಾರ್ಯಮಾಡುತ್ತಿದೆ : ಮಹಾಂತೇಶ ಕವಟಗಿಮಠ
ಗೋಕಾಕ ಫೆ 29 : ಶಿಕ್ಷಣ , ಆರೋಗ್ಯ , ಸಂಸ್ಕಾರ , ಪರಿಸರ ಹಾಗೂ ಸಹಕಾರ ಎಂಬ ಐದು ತತ್ವದಡಿ ಸಮಾಜಕ್ಕೆ ಏನಾದರೂ ನೀಡಬೇಕು ಎಂಬ ಉದ್ದೇಶದಿಂದ ಮಹಾಂತೇಶ ಕವಟಗಿಮಠ ಫೌಂಡೇಶನ್ ಹುಟ್ಟಿಕೊಂಡಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಗುರುವಾರದಂದು ನಗರದ ಕೆಎಲ್ಇ ಶಾಲಾ ಆವರಣದಲ್ಲಿ ಮಹಾಂತೇಶ ಕವಟಗಿಮಠ ಫೌಂಡೇಶನ್ ವತಿಯಿಂದ ಹಾಗೂ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಕಟ್ಟಕಡೆಯ ಮನುಷ್ಯನಿಗೆ ಆರೋಗ್ಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಆಯುಷ್ಯಮಾನ ಭಾರತ ಯೋಜನೆ ತಂದಿದ್ದಾರೆ ಅವರ ಯೋಜನೆಗೆ ಸಹಕಾರ ನೀಡುವ ಉದ್ದೇಶದಿಂದ ಕವಟಗಿಮಠ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ.
ಇಲ್ಲಿಯ ವರಗೆ 17 00 ಜನರಿಗೆ ಆಯುಷ್ಯಮಾನ ಕಾರ್ಡಗಳನ್ನು ಮಾಡಿವಿತರಿಸಿದ್ದೇವೆ. ಗೋಕಾಕನಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರದಲ್ಲಿಆರೋಗ್ಯ ತಪಾಸಣೆ ಮಾಡಿಕೊಳ್ಳಲು ಈಗಾಗಲೇ 8 ಸಾವಿರ ಜನ ನೊಂದಣಿ ಮಾಡಿಕೊಂಡಿದ್ದಾರೆ.
ತಾಯಂದಿರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಲು ಈ ಉಚಿತ ಆರೋಗ್ಯ ಶಿಬಿರವನ್ನು ಸಹಕಾರಿಯಾಗಿಲಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ಮಾಡುವ ಕಾರ್ಯವನ್ನು ಸಹ ಮಹಾಂತೇಶ ಕವಟಗಿಮಠ ಫೌಂಡೇಶನ್ ಮಾಡುತ್ತಿದೆ. ಯಾವುದೇ ರೋಗ ಬಂದರೆ ಅದಕ್ಕೆ ಚಿಕಿತ್ಸೆ ನೀಡುವ ಸೌಲಭ್ಯಗಳು ಭಾರತದಲ್ಲಿ ಇವೆ ಯಾರು ಹೆದರದೆ ಆಸ್ಪತ್ರೆಗಳಿಗೆ ಹೋಗಿ ಔಷಧ ಉಪಚಾರ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಗ್ಯ ಇಲ್ಲಾ ಎಂದರೆ ಏನು ಇಲ್ಲಾ ಇಂದಿನ ಆಧುನಿಕ ಯುಗದಲ್ಲಿ ಜನರು ಆರೋಗ್ಯವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಾಜ ಸೇವಾ ಸಂಘಟನೆಗಳು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮತ್ತು ಬಟಕುರ್ಕಿಯ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ, ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ, ಡಾ.ಧರೆಪ್ಪ ಚೌಗಲಾ ,ಎಂ.ಡಿ.ಚುನಮರಿ, ಮಲ್ಲಿಕಾರ್ಜುನ ಈಟಿ, ರಾಮಣ್ಣ ಹುಕ್ಕೇರಿ, ನಾರಾಯಣ ಮಠಾಧೀಕಾರಿ, ಆನಂದ ಪಾಟೀಲ, ಡಾ.ಕಿರಣಕುಮಾರ ಪೂಜಾರ, ಡಾ.ನವೀನ ಅಂಗಡಿ, ಡಾ.ವಿಶ್ವನಾಥ್ , ಡಾ.ಮಹಾದೇವಿ ಸವಣೂರು, ಡಾ.ಅಮೂಲ ಎಸ್.ಡಾ.ವೀಣಾ, ಡಾ.ಪ್ರೀತಿ ಶೆಟ್ಟಿ, ಡಾ.ಭಾಗ್ಯಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.