ಗೋಕಾಕ:ಡಾ: ಸಂಜೀವ ಟೊಣ್ಣಿಗೆ ಪಿಎಚ್ಡಿ

ಡಾ: ಸಂಜೀವ ಟೊಣ್ಣಿಗೆ ಪಿಎಚ್ಡಿ
ಗೋಕಾಕ ಜ 25: ಬೆಳಗಾವಿಯ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದ ಸ್ವಸ್ಥವೃತ್ತ ಮತ್ತು ಯೋಗ ವಿಭಾಗದ ಸಹ ಪ್ರಾಧ್ಯಾಪಕ ಡಾ: ಸಂಜೀವ ಟೊಣ್ಣಿರವರಿಗೆ ಇತ್ತೀಚಿಗೆ ಜರುಗಿದ ಕಾಹೆರ (ಕೆಎಲ್ಇ ಅಕ್ಯಾಡೆಮಿ ಆಫ್ ಹಾಯರ್ ಎಜ್ಯುಕೇಶನ್) ಘಟಿಕೋತ್ಸವದಲ್ಲಿ ಪಿಎಚ್ಡಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದ ಅಗದ ತಂತ್ರವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ: ರುದ್ರಮ್ಮಾ ಆರ್.ಹಿರೇಮಠ ಹಾಗೂ ಕೆಎಲ್ ಇ ಸಂಸ್ಥೆಯ ಫಾರ್ಮಸಿ ಕಾಲೇಜಿನ ಔಷಧಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ: ನಯೀಮ್ ಖಾತಿಬ್ ಅವರ ಮಾರ್ಗದರ್ಶನದಲ್ಲಿ “ನವೀನ ಮಾದರಿಯ ಆಯುರ್-ಪ್ರೊಬಯಾಟಿಕ್ ತಯಾರಿಕೆ ಹಾಗೂ ಅದರ ಪರಿಣಾಮವನ್ನು ಆಂಟಿಬಯೊಟಿಕ್ ನಿಂದ ಉಂಟಾಗುವ ಅತಿಸಾರವನ್ನು ಪ್ರಯೋಗಶಾಲಿಯ ಪ್ರಾಣಿಗಳಲ್ಲಿ ಸಂಶೋಧನಾ ಅಧ್ಯಯನ ಮಾಡುವಿಕೆ” ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು.
ಡಾ: ಸಂಜೀವ ಟೊಣ್ಣಿರವರ ಸಾಧನೆಗೆ ಕಾಹೆರ್ ಸಿಬ್ಬಂದಿ ವರ್ಗ, ಪ್ರಾಚಾರ್ಯ ಡಾ: ಸುಹಾಸ ಕುಮಾರ ಶೆಟ್ಟಿ,ಕಾಲೇಜಿನ ಡೀನ್ ಹಾಗೂ ಉಪ ಪ್ರಾಂಶುಪಾಲರಾದ ಡಾ: ಪ್ರಶಾಂತ ಜಾಡರ ಮತ್ತು ಸಿಬ್ಬಂದಿ ವರ್ಗ,ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.