RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಸತೀಶ ಶುರ್ಗಸ್ಸ್ ಆವಾರ್ಡ್ಸ ಕಾರ್ಯಕ್ರಮ ಗೋಕಾಕ ನಾಡಿನ ಸಂಸ್ಕೃತಿ ಉತ್ಸವವಾಗಿ ಹೊರಹೊಮ್ಮಿದೆ : ಡಿ.ಡಿ.ಪಿ.ಐ ಹಂಜಾಟೆ

ಗೋಕಾಕ:ಸತೀಶ ಶುರ್ಗಸ್ಸ್ ಆವಾರ್ಡ್ಸ ಕಾರ್ಯಕ್ರಮ ಗೋಕಾಕ ನಾಡಿನ ಸಂಸ್ಕೃತಿ ಉತ್ಸವವಾಗಿ ಹೊರಹೊಮ್ಮಿದೆ : ಡಿ.ಡಿ.ಪಿ.ಐ ಹಂಜಾಟೆ 

ಸತೀಶ ಶುರ್ಗಸ್ಸ್ ಆವಾರ್ಡ್ಸ ಕಾರ್ಯಕ್ರಮ ಗೋಕಾಕ ನಾಡಿನ ಸಂಸ್ಕೃತಿ ಉತ್ಸವವಾಗಿ ಹೊರಹೊಮ್ಮಿದೆ : ಡಿ.ಡಿ.ಪಿ.ಐ ಹಂಜಾಟೆ
ಗೋಕಾಕ ಜ 19 : ಸತೀಶ ಶುರ್ಗಸ್ಸ್ ಆವಾರ್ಡ್ಸ ಕಾರ್ಯಕ್ರಮ ಗೋಕಾಕ ನಾಡಿನ ಸಂಸ್ಕೃತಿ ಉತ್ಸವವಾಗಿ ಹೊರಹೊಮ್ಮಿದೆ ಎಂದು ಚಿಕ್ಕೋಡಿ ..ಡಿ.ಡಿ.ಪಿ.ಐ ಮೋಹನಕುಮಾರ್ ಹಂಜಾಟೆ ಹೇಳಿದರು.

ಶುಕ್ರವಾರದಂದು ನಗರದ ಮಹರ್ಷಿ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸತೀಶ್ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಜರುಗಿದ 20ನೇ ಸತೀಶ ಶುರ್ಗಸ್ಸ್ ಆವಾರ್ಡ್ಸ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳು ಅನಾವರಣ ಗೊಳಿಸಲಿಕ್ಕೆ ಈ ವೇದಿಕೆ ಬಹಳಮುಖ್ಯವಾಗಿದ್ದು,ಸತೀಶ್ ಶುರ್ಗಸ್ಸ್ ಆವಾರ್ಡ್ಸ ಕಾರ್ಯಕ್ರಮದ ಅಂತಿಮ ಹಂತದಲ್ಲಿ 800 ವಿದ್ಯಾರ್ಥಿಗಳು ಭಾಗವಹಿಸಿ ನಾಡಿನ ಕೀರ್ತಿಯನ್ನು ಹೆಚ್ಚಿಸುವ ಜೊತೆಗೆ ರಾಜ್ಯ, ರಾಷ್ಟ್ರ ಮಟ್ಟಕ್ಕೆ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ತೋರ್ಪಡಿಸಿ ಗೋಕಾಕ ನಗರದ ಹೆಸರನ್ನು ಉತ್ತಂಗಕ್ಕೆ ಏರಿಸಿದ್ದಾರೆ ಎಂದ ಅವರು ಸಚಿವ ಸತೀಶ ಜಾರಕಿಹೊಳಿ ಅವರು ಎಲ್ಲಾ ರಂಗದಲ್ಲಿ ಕಾರ್ಯಮಾಡಿ ರಾಜ್ಯವನ್ನು ಮುನ್ನಡೆಸುತ್ತಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ 27 ಲಕ್ಷರೂ ಬಹುಮಾನದ ರೂಪದಲ್ಲಿ ನೀಡಲಾಗುತ್ತಿದ್ದು ಗೋಕಾಕ ಭಾಗದ ನಾವೆಲ್ಲರೂ ಇದರ ಸದುಪಯೋಗ ಪಡೆದುಕೊಂಡು ಈ ಕಾರ್ಯಕ್ರಮದ ಹಿರಿಮೆ ,ಗಿರಿಮೆಯನ್ನು ಹೆಚ್ಚಿಸೋಣ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ, ಸತೀಶ್ ಶುರ್ಗಸ್ಸ್ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ, ತಹಶೀಲ್ದಾರ್ ಡಾ.ಮೋಹನ ಭಸ್ಮೆ, ಡಿ.ಡಿ.ಪಿ .ಯು ಪಾಂಡುರಂಗ ಭಂಡಾರಿ, ಡಿ.ವಾಯ್.ಎಸ.ಪಿ.ಡಿ.ಎಚ್.ಮುಲ್ಲಾ , ಬಿಇಒಗಳಾದ ಅಜೀತ ಮನ್ನಿಕೇರಿ, ಜಿ.ಬಿ‌.ಬಳಗಾರ , ಪ್ರಾಚಾರ್ಯ ಪಿ.ಎಂ ಲಕ್ಕಶೆಟ್ಟಿ, ಉಪಸ್ಥಿತರಿದ್ದರು.

Related posts: