RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ: ನೂತನ ಜಿಲ್ಲಾ ಹೋರಾಟ ತೀವ್ರ ಗೋಳಲ್ಲಿ :ಗೋಕಾಕದಲ್ಲಿ ಜಿಲ್ಲಾ ವಿಭಜನೆಯ ಸದ್ದೆ ಇಲ್ಲಾ ಬರೀ ಗದ್ದಲಗಳದ್ದೆ ಕಾರುಬಾರು.

ಗೋಕಾಕ: ನೂತನ ಜಿಲ್ಲಾ ಹೋರಾಟ ತೀವ್ರ ಗೋಳಲ್ಲಿ :ಗೋಕಾಕದಲ್ಲಿ ಜಿಲ್ಲಾ ವಿಭಜನೆಯ ಸದ್ದೆ ಇಲ್ಲಾ ಬರೀ ಗದ್ದಲಗಳದ್ದೆ ಕಾರುಬಾರು. 

ನೂತನ ಜಿಲ್ಲಾ ಹೋರಾಟ ತೀವ್ರ ಗೋಳಲ್ಲಿ :ಗೋಕಾಕದಲ್ಲಿ ಜಿಲ್ಲಾ ವಿಭಜನೆಯ ಸದ್ದೆ ಇಲ್ಲಾ ಬರೀ ಗದ್ದಲಗಳದ್ದೆ ಕಾರುಬಾರು.

ಗೋಕಾಕ ಡಿ 9 : ಕಳೆದ ಐದು ದಿನಗಳಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸರಕಾರ ಚಳಿಗಾಲದ ಅಧಿವೇಶನ ನಡೆಸುತ್ತಿದ್ದು ,ಉತ್ತರ ಕರ್ನಾಟಕದ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಆದಷ್ಟು ಬೇಗ ಅವುಗಳನ್ನು ಪೂರ್ಣ ಗೋಳಿಸುವಂತೆ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ.

ಕಳೆದ ದಶಕಗಳಿಂದ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹೋರಾಟಗಾರರು, ಚಿಂತಕರು, ವಿದ್ವಾಂಸರು , ಜನಪ್ರತಿನಿಧಿಗಳು ಸೇರಿದಂತೆ ಸಹಸ್ರಾರು ಜನ ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಬರೀ ಪ್ರವಾಸ, ಕೊನೆಯ ಎರಡು ದಿನ ನಾಮಕೆವಾಸ್ತೆ ಎಂದು ಬಣ್ಣಿಸಿದರು ಇದರ ಪ್ರತಿಫಲವೋ ಏನೋ ಸರಕಾರ ಎಚ್ಚೆತ್ತುಕೊಂಡು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಚರ್ಚೆ ಮಾಡಿ ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಕನಸು ಸಾರ್ವಜನಿಕರಿಗೆ ಕೊಟ್ಟಿದೆ.
ಇದು ಸರಕಾರದ ಧೋರಣೆ ಯಾದರೆ ಸಾರ್ವಜನಿಕರು, ಹೋರಾಟಗಾರರು ತಮ್ಮ ತಮ್ಮ ಪ್ರದೇಶದ ಸಮಸ್ಯೆಗಳು, ವೈಯಕ್ತಿಕ ಸಮಸ್ಯೆಗಳು, ಸಾರ್ವಜನಿಕ ಸಮಸ್ಯೆಗಳು ಅಥವಾ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ತಗೆದುಕೊಂಡು ಅಧಿವೇಶನ ನಡೆಸಿದ್ದಾರೆ. ಸರಕಾರ ಆದಷ್ಟು ಮಟ್ಟಿಗೆ ಅವುಗಳನ್ನು ಪರಿಹರಿಸುವ ಭರವಸೆಯನ್ನು ಕೊಡುತ್ತಿದ್ದೆ. ಅದರಲ್ಲಿ ಬಹು ಮುಖ್ಯವಾಗಿ ಬೆಳಗಾವಿ ಅಖಂಡ ಜಿಲ್ಲೆ ಒಡೆದು ಎರಡು ಹೊಸ ಜಿಲ್ಲೆಗಳನ್ನಾಗಿ ಮಾಡಲು ಹೋರಾಟಗಳು ಇಂದು ನಿನ್ನೆಯದಲ್ಲ ಮೂರ್ನಾಲ್ಕು ದಶಕಗಳಿಂದ ಹೋರಾಟ ನಡೆಯುತ್ತಲೇ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರ.
ಅದರಲ್ಲಿ ಪ್ರಮುಖವಾಗಿ ಗೋಕಾಕ ತಾಲೂಕು ಸಹ ಮುಂಚೂಣಿಯಲ್ಲಿ ಇದು ಹೋರಾಟ ಮಾಡುತ್ತಾ ಬಂದಿದೆ ಆದರೆ ಸದರಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂಧರ್ಭದಲ್ಲಿ ಗೋಕಾಕ ನೂತನ ಜಿಲ್ಲಾ ಮಾಡಲು ಹೋರಾಟದ ನೇತೃತ್ವ ವಹಿಸಿಕೊಂಡಿರುವ ಜಿಲ್ಲಾ ಹೋರಾಟ ಚಾಲನಾ ಸಮಿತಿ ಹೋರಾಟವನ್ನು ತೀವ್ರ ಗೋಳಿಸಿ ಸರಕಾರದ ಗಮನ ಸೆಳೆಯಲು ಕಾರ್ಯಪ್ರವೃತ್ತರಾಗಬೇಕು.
ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ಅವರು ಅಧಿವೇಶನದ ಸಂಧರ್ಭದಲ್ಲಿ ಹೋರಾಟಗಳನ್ನು ಸಂಘಟಿಸಿ ಸರಕಾರದ ಅದರಲ್ಲೂ ಜಿಲ್ಲಾ ಮಂತ್ರಿ ಸತೀಶ ಜಾರಕಿಹೊಳಿ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಭೇಟಿಯಾಗಿ ಸದನದಲ್ಲಿ ಇದರ ಬಗ್ಗೆ ಧ್ವನಿ ಎತ್ತಿ ಬೆಳಗಾವಿ ಜಿಲ್ಲಾ ವಿಭಜನೆಗೆ ಪೂರಕವಾದ ಹೋರಾಟ ನಡೆಸುವಂತೆ ಒತ್ತಾಯಿಸುದನ್ನು ಮರೆತು ಕೈಕಟ್ಟಿ ಕೂಳಿತುಕೊಂಡಿದೆ.
ಚಿಕ್ಕೋಡಿ ಜನರು, ಅಥಣಿ ಜನರು ಹಾಗೂ ಬೈಲಹೊಂಗಲ ಜನರು ತಮ್ಮ ,ತಮ್ಮ ತಾಲೂಕುಗಳನ್ನು ಜಿಲ್ಲೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸಿವೆ. ಗೋಕಾಕದಲ್ಲಿ ಜಿಲ್ಲಾ ವಿಭಜನೆ ಇದರ ಸದ್ದು ಇಲ್ಲಾ ಬರೀ ಗದ್ದಲಗಳದ್ದೆ ಕಾರುಬಾರು ಆಗಿ ಬಿಟ್ಟಿದೆ.
ಮೊನ್ನೆಯಷ್ಟೇ ಕಾಂಗ್ರೆಸ್ ಮುಖಂಡ ಸುದ್ದಿಗೋಷ್ಠಿ ಮಾಡಿ ಗೋಕಾಕ ಜಿಲ್ಲೆ ಆಗಬೇಕು ಎಂದು ಗುಡಿಗಿದನ್ನು ಬಿಟ್ಟರೆ ಗೋಕಾಕ ನಗರದ ಸಾರ್ವಜನಿಕರು ಅಷ್ಟೊಂದು ಉತ್ಸಾಹದಿಂದ ಅಧಿವೇಶನದ ಸಂಧರ್ಭದಲ್ಲಿ ಗೋಕಾಕ ನೂತನ ಜಿಲ್ಲೆಯನ್ನಾಗಿ ಸರಕಾರ ಘೋಷಿಸಬೇಕು ಎಂದು ಹೋರಾಟ ಕೈಗೊಳ್ಳದೆ ನೇಪತ್ಯಕ್ಕೆ ಸರಿದಿವೆ. ಇದರ ಬಗ್ಗೆ ಜಿಲ್ಲಾ ಹೋರಾಟದಲ್ಲಿ ಸತತವಾಗಿ ಭಾಗವಹಿಸುತ್ತಾ ಬಂದ ಹೋರಾಟಗಾರರಲ್ಲಿ ಪ್ರಮುಖರಾದ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಅವರನ್ನು ಪ್ರಶ್ನಿಸಿದರೆ ನಾವು ಹೋರಾಟ ಸಂಘಟಿಸಲ್ಲಿಕೆ ಸಮಯ ಹತ್ತುವದಿಲ್ಲ .ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿಯ ನಡೆಯನ್ನು ಕಾದು ನೋಡುತ್ತಿದ್ದೇವೆ. ಈಗಾಗಲೇ ಚಾಲನಾ ಸಮಿತಿಯ ಅಧ್ಯಕ್ಷರಾದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ಸರ್ವರ ಸಭೆ ಕರೆದು ಹೋರಾಟದ ಬಗ್ಗೆ ಒಂದು ನಿರ್ಧಾರ ತಗೆದುಕೊಳ್ಳಿ ಎಂದು ಮನವಿ ಮಾಡಿ ವಿನಂತಿಸಲಾಗಿದೆ ಆದರೆ ಅವರು ಇನ್ನೂ ಇದರ ಬಗ್ಗೆ ಚಿಂತನೆ ಮಾಡಿಲ್ಲಾ ಇಂದು ನಾಳೆ ಕಾದುನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂಧರ್ಭದಲ್ಲಿ ಜಿಲ್ಲಾ ಹೋರಾಟದ ಕೂಗು ಎಬ್ಬಿಸಿದ ಜಿಲ್ಲಾ ಹೋರಾಟ ಚಾಲನಾ ಸಮಿತಿ ವತಿಯಿಂದ ಗೋಕಾಕ ನೂತನ ಜಿಲ್ಲೆ ಆಗಲು ಸಾಧ್ಯವೇ? ಎಂಬ ಪ್ರಶ್ನೆಗಳು ತಾಲೂಕಿನಾದ್ಯಂತ ಹರಿದಾಡುತ್ತಿವೆ. ಹಾಗಾಗಿ ಗೋಕಾಕ ನೂತನ ಜಿಲ್ಲಾ ಹೋರಾಟಕ್ಕೆ ಬರುರಬರುತ್ತಾ ಗ್ರಹಣ ಹಿಡಿಯುತ್ತಿದ್ದೆ ಎಂದು ಗೋಕಾಕಕಿನ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ.

Related posts: