ಗೋಕಾಕ:ಪೌರಕಾರ್ಮಿಕರು ನಗರದ ಬೆನ್ನೆಲಬು : ಮೌಲಾನಾ ಅಹೆಮದ ಶಿರಾಜಸಾಬ ಕಾಶ್ಮೀ

ಪೌರಕಾರ್ಮಿಕರು ನಗರದ ಬೆನ್ನೆಲಬು : ಮೌಲಾನಾ ಅಹೆಮದ ಶಿರಾಜಸಾಬ ಕಾಶ್ಮೀ
ಗೋಕಾಕ ಅ 16 : ಸ್ವಚ್ಚ ಸುಂದರ ನಗರ ಎಂದು ಹೆಸರು ಗಳಿಸಲು ಪೌರ ಕಾರ್ಮಿಕರ ಕೊಡುಗೆ ಮಹತ್ತರವಾದುದು. ಪೌರಕಾರ್ಮಿಕರು ನಗರದ ಬೆನ್ನೆಲಬು ಎಂದು ಜಮಿಯತ ಉಲಮಾ ಧಾರವಾಡ ಜಿಲ್ಲಾಧ್ಯಕ್ಷ ಮೌಲಾನಾ ಅಹೆಮದ ಶಿರಾಜಸಾಬ ಕಾಶ್ಮಿ ಹೇಳಿದರು.
77 ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಂಗಳವಾರದಂದು ಇಲ್ಲಿನ ಜಮಿಯತ ಉಲಮಾ ಗೋಕಾಕ ತಾಲೂಕು ಘಟಕದ ವತಿಯಿಂದ ಉಪನ್ಯಾಸ ಹಾಗೂ ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ತಮ್ಮ ವೈಯಕ್ತಿಕ ಸಂಕಷ್ಟಗಳನ್ನು ಬದಿಗಿರಿಸಿ ನಗರವನ್ನು ಪ್ರತಿದಿನ ಸ್ವಚ್ಚಗೊಳಿಸುತ್ತಾರೆ. ಎಲೆಮರೆಕಾಯಿಯಂತೆ ಕೆಲಸ ಮಾಡುವ ಅವರನ್ನು ಗುರುತಿಸುವುದು ನ್ಯಾಯಯುತವಾದುದು ಎಂದು ಹೇಳಿದ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ವಿಭಿನ್ನ ಹಂತಗಳಿಗೆ ಮುಸ್ಲಿಂ ನಾಯಕತ್ವವು ಅಪಾರ ಕೊಡುಗೆ ನೀಡಿದೆ. ಅವರು ಜೀವಕ್ಕಿಂತ ದೊಡ್ಡ ಪಾತ್ರವನ್ನು ವಹಿಸಿದರು ಮತ್ತು ಸ್ವಾತಂತ್ರ್ಯಕ್ಕಾಗಿ ಈ ಹೋರಾಟದಲ್ಲಿ ಗಮನಾರ್ಹ ತ್ಯಾಗ ಮಾಡಿದರು. ಕೊನೆಯ ಮೊಘಲ್ ದೊರೆ ಬಹದ್ದೂರ್ ಷಾ ಜಾಫರ್ನಿಂದ ಹಿಡಿದು ನವಾಬರು, ರಾಜಕುಮಾರರು, ಎಲ್ಲಾ ಗಾತ್ರದ ಜಮೀನ್ದಾರರು, ಪಾದ್ರಿಗಳು, ಉಲೇಮಾಗಳು ಮತ್ತು ಸಾಮಾನ್ಯ ಜನರು ಅಗಾಧವಾದ ಸವಾಲುಗಳನ್ನು ಸ್ವೀಕರಿಸಿದರು ಮತ್ತು ಅತ್ಯುನ್ನತ ತ್ಯಾಗ ಮಾಡಿದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಮುಸ್ಲಿಂ ನಾಯಕರಾದ ಖಾನ್ ಅಬ್ದುಲ್ ಗಫಾರ್ ಖಾನ್, ಮೌಲಾನಾ ಅಬುಲ್ ಕಲಾಂ ಆಜಾದ್ ಸೇರಿದಂತೆ ಅನೇಕ ನಾಯಕರು ಭಾರತ ಸ್ವಾತಂತ್ರ್ಯಕ್ಕಾಗಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ಅವರ ತ್ಯಾಗ, ಬಲಿದಾನವನ್ನು ನೆನೆಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಿಯತ ಉಲಮಾನ ಉಪಾಧ್ಯಕ್ಷ ಬೆಳಗಾವಿಯ ಮೌಲಾನ ಮೊಹಮ್ಮದ್ ಸಾಜೀದ ವಹಿಸಿದ್ದರು,
ಈ ಸಂದರ್ಭದಲ್ಲಿ ಜಮಿಯತ ಉಲಮಾ ಬೆಳಗಾವಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಮೊಹಮ್ಮದ್ ಆರೀಪಸಾಬ ಇನಾಮಿ, ಗೋಕಾಕ ತಾಲೂಕು ಅಧ್ಯಕ್ಷ ಮೌಲಾನಾ ಅಬ್ದುಲಾಸಾಬ ರಹೆಮಾನಿ, ಮೌಲಾನಾ ಇಜಾಜ್ , ಹಾಪೀಜಿ ಅತ್ತಾಉಲ್ಲಾ , ಹಾಪೀಜಿ ಮೋಶೀನ ಪಠಾಣ, ನಗರಸಭೆ ಸದಸ್ಯ ಅಬ್ಬಾಸ ದೇಸಾಯಿ, ಸಂತೋಷ ಮಂತ್ರಣ್ಣವರ, ಹರೀಶ್ ಬೂದಿಹಾಳ, ಯೂಸುಫ್ ಅಂಕಲಗಿ, ದುರ್ಗಪ್ಪಶಾಸ್ತ್ರಿ ಗೋಲ್ಲರ, ಅಂಜುಮನ್ ಕಮಿಟಿ ಅಧ್ಯಕ್ಷ ಜಾವೇದ್ ಗೋಕಾಕ, ಅಂಜುಮನ್ ಕಮಿಟಿ ಉಪಾಧ್ಯಕ್ಷ ಇಲಾಹಿ ಖೈರದಿ, ಮುಖಂಡರುಗಳಾದ ಮಲಿಕ್ ಪೈಲವಾನ, ಹುಸೇನ ಫನಿಬಂಧ, ಇಮ್ತಿಯಾಜ ಪೀರಜಾದೆ ಜಾಕೀರ ಕುಡಚಿಕರ, ಖಾದಿಮ ಅಬ್ದುಸಸಮಿ ತೇರದಾಳ , ರಿಯಾಜ ಚಟ್ನಿ, ಮುಸ್ತಾಕ ಖಂಡಾಯತ, ಸೈಯದ ಪಾಶ್ಚಾಪೂರ, ಇಕ್ಬಾಲ್ ಬಸ್ಸಾಪೂರ, ಶರೀಫ ಮುಧೋಳ, ದಾದಾಪೀರ ಇಮಾರತವಾಲೆ, ಹಿದಾಯಉಲ್ಲಾ ಬಾಗವಾನ, ಇರ್ಷಾದ್ ಪಟೇಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.