ಗೋಕಾಕ:ಮುಸ್ಲಿಂ ಮತ್ತು ಹಿಂದೂ ಸಮಾಜಗಳನ್ನು ಒಂದು ಮಾಡಿ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸುತ್ತೇನೆ : ರಮೇಶ ಜಾರಕಿಹೊಳಿ

ಮುಸ್ಲಿಂ ಮತ್ತು ಹಿಂದೂ ಸಮಾಜಗಳನ್ನು ಒಂದು ಮಾಡಿ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸುತ್ತೇನೆ : ರಮೇಶ ಜಾರಕಿಹೊಳಿ
ಗೋಕಾಕ ಜ 23 : ಮುಸ್ಲಿಂ ಮತ್ತು ಹಿಂದೂ ಸಮಾಜಗಳನ್ನು ಒಂದು ಮಾಡಿ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸುತ್ತೇನೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು
ಸೋಮವಾರದಂದು ನಗರದ ಗಾಂಧಿ ಮೈದಾನದಲ್ಲಿ ವ್ಯಾಪಾರಸ್ಥರು ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಾಕಿಸ್ತಾನ ದೇಶದ ಮುಸಲ್ಮಾನರು ಆ ದೇಶದ ವ್ಯವಸ್ಥೆಗೆ ನೊಂದು ಭಾರತ ದೇಶದ ವಿಶ್ವಾಸವಿಟ್ಟು ನಮ್ಮ ದೇಶಕ್ಕೆ ಬರಲು ಸಿದ್ಧರಾಗಿದ್ದು ನಮ್ಮ ಪ್ರಧಾನಿಯ ಆಡಳಿತ ವೈಖರಿಯೆ ಕಾರಣವಾಗಿದೆ ಎಂದರು.
ನನ್ನ ಅಧಿಕಾರವಧಿಯಲ್ಲಿ ಕ್ಷೇತ್ರದ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೆನೆ. ಗೋಕಾಕ ಮತ್ತು ಅರಭಾಂವಿ ಮತಕ್ಷೇತ್ರದಲ್ಲಿ ಹಿಂದು, ಮುಸ್ಲಿಂ ಭಾಂದವರು ಪರಸ್ಪರ ಪ್ರೀತಿ ವಿಶ್ವಾಸದಿಂದ ನಮ್ಮ ಪಕ್ಷದೊಂದಿಗೆ ಇದ್ದಾರೆ. ಇಂದಿನ ಯುವ ಪೀಳಿಗೆ ಇದನ್ನು ಅರಿತು ಶಾಂತಿಯುತ ನಗರವನ್ನಾಗಿಸಲು ಕೈಜೋಡಿಸಬೇಕು. ಎಲ್ಲ ಹಿರಿಯರು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಕರೆ ನೀಡಿದರು.
ಚುನಾವಣೆ ಸಮೀಪ ಬರುತ್ತಿದ್ದು ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಹಬ್ಬಿಸುವ ವದಂತಿಗಳಿಗೆ ಕಿವಿಗೊಡಬೇಡಿ. ಇವರು ಮೂರು ತಿಂಗಳು ಮಾತ್ರ ಪ್ರತ್ಯಕ್ಷರಾಗಿ ನಾಲಕುವರೆ ವರ್ಷ ಕಾಣೆಯಾಗಿರುತ್ತಾರೆ. ಚುನಾವಣೆ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಅಪಪ್ರಚಾರ ಮಾಡುವ ಇಂತಹ ಷಡ್ಯಂತ್ರಿಗಳಿಂದ ದೂರವಿದ್ದು ಅಭಿವೃದ್ಧಿ ಹಾಗೂ ಶಾಂತಿಯುತ ನಗರವನ್ನಾಗಿಸಲು ನಮ್ಮನ್ನು ಬೆಂಬಲಿಸಿ. ನಿಮ್ಮ ಆಶೀರ್ವಾದವೆ ನನ್ನಗೆ ದೊಈ ಶಕ್ತಿಯಾಗಿದ್ದು ಅದು ಸದಾ ನಮ್ಮ ಮೇಲೆ ಇರಲಿ ಎಂದರು.
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬರಲಿದ್ದು. ಅದನ್ನು ಅಧಿಕಾರಕ್ಕೆ ತರಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ನಾನು ಎಂದೂ ಬಿಜೆಪಿ ಪಕ್ಷವನ್ನು ಬಿಡುವದಿಲ್ಲ ಈ ಪಕ್ಷದಲ್ಲಿಯೇ ನನ್ನ ರಾಜಕೀಯ ಜೀವನ ಕೊನೆ ಮಾಡುತ್ತೇನೆ . ಜಿಲ್ಲೆಯಾಧ್ಯಂತ ಹಿಂದು, ಮುಸ್ಲಿಂ, ದಲಿತ ಸೇರಿದಂತೆ ಎಲ್ಲ ಸಮುದಾಯಗಳನ್ನು ಸಂಘಟಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುವದಾಗಿ ತಿಳಿಸಿದ ಅವರು ಕಾಂಗ್ರೆಸ್ ಪಕ್ಷ ದಲಿತ ವಿರೋಧಿ ಪಕ್ಷವಾಗಿದ್ದು, ಮುಸ್ಲಿಂರನ್ನು ಬರಿ ಮತಕ್ಕಾಗಿ ಬಳಿಸಿಕೊಳ್ಳುತ್ತದೆ ಎಂದು ಹೇಳಿದರು .