ನೇಗಿನಹಾಳ : ಹಳ್ಳಿಯ ಪ್ರತಿಭೆಗಳು ಬೆಳಕಿಗೆ ಬರಲಿ ಜಿ.ಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಸಲಹೆ
ಹಳ್ಳಿಯ ಪ್ರತಿಭೆಗಳು ಬೆಳಕಿಗೆ ಬರಲಿ ಜಿ.ಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಸಲಹೆ
ನೇಗಿನಹಾಳ ಅ 11: ಗ್ರಾಮೀಣ ಭಾಗದಲ್ಲಿ ಸಾಂಸ್ಕøತಿಕ ಮತ್ತು ಸಾಮಾಜಿಕ ಕಲೆ, ಸಾಹಿತ್ಯ ಉಳಿಸಿ ಬೆಳೆಸಲು ಯುವಕರು ಪ್ರಮುಖ ಪಾತ್ರವಹಿಸಬೇಕು ಹಳ್ಳಿಗಳಲ್ಲಿನ ಕಲಾವಿದರಿಗೆ ಸರಕಾರ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕೆಂದು ಕಾಂಗ್ರೇಸ್ ಮುಖಂಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಹೇಳಿದರು.
ಸಮೀಪದ ಪುಲಾರಕೋಪ್ಪ ಗ್ರಾಮದಲ್ಲಿ ಅಖಿಲ ಕರ್ನಾಟಕ ಜೈ ಭೀಮ ಹಿತರಕ್ಷಣಾ ಹಾಗೂ ಸರ್ವ ಸಮುದಾಯ ಕಲಾವಿದರ ಸಂಘದ ಶಾಖೆಯ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು. ಹಿಂದುಳಿದ ಸಮಾಜದ ನಮ್ಮ ಯುವ ಪ್ರತಿಭೆಗಳು ಹಳ್ಳಿಗಳಲ್ಲಿಯೇ ಕೊನೆಗೊಳ್ಳುತ್ತಿವೆ ಯುವಕರು ತಮ್ಮ ಕೇಂದ್ರ ಸಮಿತಿಯ ಮಾರ್ಗದರ್ಶನದಲ್ಲಿ ಕನ್ನಡ ಮತ್ತು ಸಾಂಸ್ಕøತಿಕ ಇಲಾಖೆಯಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳ ಆವಕಾಶಗಳನ್ನು ಸರಿಯಾದ ಇಂದು ಸದುಪಯೋಗ ಪಡಿಸಿಕೊಳ್ಳಬೆಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಾದ್ಯಕ್ಷರಾದ ರಾಜಕುಮಾರ ಸುರ್ಯವಂಶಿ, ಗೌರವ ಅದ್ಯಕ್ಷ ಭರಮಣ್ಣ ಸತ್ತನ್ನವರ, ಖಜಾಂಚಿ ಶಂಕರ ತಪಸಿ, ಮಹಿಳಾ ಘಟಕದ ಮುಖ್ಯಸ್ಥೆ ಸ್ವಪ್ನಾ ಕಾಂಬಳೆ, ಜಿಲ್ಲಾದ್ಯಕ್ಷ ಎಲ್. ಎಸ್ ಸೂರ್ಯವಂಶಿ, ತಾಲೂಕಾದ್ಯಕ್ಷ ಫಕೀರಪ್ಪ ನಾಗಮೆತ್ರಿ, ಡಿ.ಎಸ್.ಎಸ್ ಪ್ರಮುಖರಾದ ರಮೇಶ ರಾಯಪ್ಪಗೊಳ, ಸೀತಾ ಹರಿಜನ, ತಿಗಡಿ ಗ್ರಾ.ಪಂ ಅದ್ಯಕ್ಷ ಮುನ್ನಾ ಬಾಹದ್ದೂರ್ಶಿ, ಸಂತೋಷಗೌಡ ಪಾಟೀಲ, ಕಲಾವಿದರಾದ ಮಾನಪ್ಪ ಬಡಿಗೇರ, ಫಕೀರಪ್ಪ ಬಡಿಗೇರ, ನಾಗಪ್ಪ ಬೋರಕ್ಕನವರ ಮತ್ತಿತ್ತರರು ಉಪಸ್ಥಿತರಿದ್ದರು. ಪ್ರಕಾಶ ಮಾದಿಗರ ಸ್ವಾಗತಿಸಿದರು, ರೇಣುಕಾ ಕಾರ್ಯದರ್ಶಿ ನಿರೂಪಿಸಿ ವಂದಿಸಿದರು.