RNI NO. KARKAN/2006/27779|Thursday, April 25, 2024
You are here: Home » breaking news » ಗೋಕಾಕ:ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಡಿ.ಚುನಮರಿಗೆ ಸತ್ಕಾರ

ಗೋಕಾಕ:ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಡಿ.ಚುನಮರಿಗೆ ಸತ್ಕಾರ 

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಡಿ.ಚುನಮರಿಗೆ ಸತ್ಕಾರ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 22 : 

ಕರ್ನಾಟಕ ಸರಕಾರದ ಸಹಕಾರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ.ಬೆಂಗಳೂರು ಇವರ ಸಹಯೋಗದೊಂದಿಗೆ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ  69 ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ದಿ.ಗೋಕಾಕ ಅರ್ಬನ್ ಕೋ-ಆಪರೇಟಿವ್ಹ ಕ್ರೆಡಿಟ್ ಬ್ಯಾಂಕಿನ ಹಿರಿಯ ದಿಗ್ದರ್ಶಕರಾದ ಮಲ್ಲಿಕಾರ್ಜುನ ದಾನಪ್ಪಾ ಚುನಮರಿ ಇವರಿಗೆ   ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾದ  ಪ್ರಯುಕ್ತ ಸೋಮವಾರದಂದು ನಗರದ ಅರ್ಬನ್ ಬ್ಯಾಂಕಿನ ಸಭಾಂಗಣದಲ್ಲಿ ಬ್ಯಾಂಕಿನ  ಆಡಳಿತ ಮಂಡಳಿ ವತಿಯಿಂದ ಚುನಮರಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ  ಬ್ಯಾಂಕಿನ ಅಧ್ಯಕ್ಷ  ಬಸವರಾಜ ಕಲ್ಯಾಣಶೆಟ್ಟಿ,  ಉಪಾಧ್ಯಕ್ಷ ಡಿ.ಸಿ.ಬಿದರಿ, ದಿಗ್ದರ್ಶಕರಾದ ವ್ಹಿ.ಎಸ್.ಬಿದರಿ, ಆರ್.ಸಿ.ತಾರಳಿ, ಶ್ರೀಮತಿ ಎಸ್.ಎಮ್.ಕುರಬೇಟ, ಶ್ರೀಮತಿ  ಎಸ್.ವ್ಹಿ.ಘೋಡಗೇರಿ,        ಸಿ.ಎಮ್.ಕುರಬೇಟ, ಎಸ್.ಬಿ.ಅಂಕಲಿಪಿ.ಎಮ್.ಮಡ್ಡೆಪ್ಪಗೋಳ, ಪಿ.ಎಸ್.ಸೊಲ್ಲಾಪೂರಮಠ,  ಪ್ರಧಾನ ವ್ಯವಸ್ಥಾಪಕ  ಎಸ್.ಎಸ್.ಪಾಟೀಲ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts: