ಗೋಕಾಕ:ಬಕ್ರೀದ್ ಹಬ್ಬ: ಮುಸ್ಲಿಂ ಸಮಾಜ ಬಾಂಧವರು ಸಡಗರದಿಂದ ಆಚರಣೆ

ಬಕ್ರೀದ್ ಹಬ್ಬ: ಮುಸ್ಲಿಂ ಸಮಾಜ ಬಾಂಧವರು ಸಡಗರದಿಂದ ಆಚರಣೆ
ಗೋಕಾಕ ಜೂ 29 : ತ್ಯಾಗ ಬಲಿದಾನದ ಶ್ರದ್ದೆ,ಭಕ್ತಿ ಶಾಂತಿ ಪ್ರತೀಕವಾದ ಬಕ್ರೀದ್ ಹಬ್ಬವನ್ನು ನಗರದಲ್ಲಿ ಗುರುವಾರ ಮುಸ್ಲಿಂ ಭಾಂದವರು ವಿಜೃಂಭಣೆಯಿಂದ ಆಚರಿಸಿದರು.ಬೆಳಿಗ್ಗೆ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು.
ನಗರದ ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳಾದ ಮೌಲಾನಾ ಸಲಾಹಸಾಬ ಹಬ್ಬದ ಸಂದೇಶ ಸಾರಿ, ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ-ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು.ಪ್ರಾರ್ಥನೆಯ ಬಳಿಕ ಮುಸ್ಲಿಂ ಭಾಂದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಮಳೆಗಾಗಿ ಅಲ್ಲಾಹನಲ್ಲಿ ಪ್ರಾರ್ಥನೆ : ಮುಂಗಾರು ವೈಫಲ್ಯದಿಂದ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಜನರು ಮಳೆಗಾಗಿ ದೇವರ ಸಹಾಯ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಕ್ರೀದ್ ಹಬ್ಬದ ಪ್ರಾರ್ಥನೆ ಆದ ಬಳಿಕ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಂ ಸಮುದಾಯ ಮಳೆಗಾಗಿ ಕಣ್ಣೀರು ಪ್ರಾರ್ಥನೆ ಸಲ್ಲಿಸಿ, ಬೇಗನೆ ಮಳೆ ಕರುಣಿಸುವಂತೆ ಅಲ್ಲಾಹನಲ್ಲಿ ಬೇಡಿಕೊಂಡರು.
ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಜಾವೇದ್ ಗೋಕಾಕ, ಹಿರಿಯ ನಗರಸಭೆ ಸದಸ್ಯ ಅಬ್ದುಲರಹೆಮಾನ ದೇಸಾಯಿ, ಕುತಬುದ್ದೀನ ಗೋಕಾಕ, ಯೂಸುಫ್ ಅಂಕಲಗಿ, ಅಮೀರಸಾಬ ಕುತಬುದ್ದೀನ ಬಸ್ಸಾಪೂರಿ,ರಿಯಾಜ ದೇಸಾಯಿ, ಇಲಾಹಿ ಖೈರದಿ, ಇಸ್ಮಾಯಿಲ್ ಜಮಾದಾರ, ಆರೀಫ ಪೀರಜಾದೆ ಸೇರಿದಂತೆ ಅನೇಕ ಮುಸ್ಲಿಂ ಸಮುದಾಯದ ಮುಖಂಡರುಗಳು ಭಾಗವಹಿಸಿದ್ದರು.