ಗೋಕಾಕ:ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಕುಂದು ಕೊರತೆ ಸಭೆ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಕುಂದು ಕೊರತೆ ಸಭೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 19 :
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗೋಕಾಕ ತಾಲೂಕಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರ ಯೋಗಕ್ಷೇಮ ಹಾಗೂ ಹಿತರಕ್ಷಣಾ ಕುಂದು ಕೊರತೆ ಸಭೆ ಮಂಗಳವಾರದಂದು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಎಲ್ಲಾ ಇಲಾಖೆಗಳು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ತಲುಪಿಸಬೇಕು. ಶಿಕ್ಷಣ ,ಆರೋಗ್ಯ ಕೃಷಿ ಸೇರಿದಂತೆ ಇತರ ಇಲಾಖೆಗಳು ಪಾರದರ್ಶಕವಾಗಿ ಅನುದಾನಗಳನ್ನು ಕಲ್ಪಿಸಿ ಈ ಜನರ ಅಭಿವೃದ್ಧಿಗೆ ಸಹಕರಿಸಬೇಕು. ಗ್ರಾಮೀಣ ಭಾಗದಲ್ಲಿ ಸ್ಮಶಾನ ಹಾಗೂ ಶೌಚಾಲಯಗಳ ಸಮಸ್ಯೆಗಳು ಬಗೆ ಹರಿಸಿಬೇಕು. ಜನತೆಗೆ ರಕ್ಷಣೆ ನೀಡಬೇಕು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಚರ್ಚಿಸಲಾಯಿತು.
ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ.ವ್ಹಿ ಕಲ್ಲಪ್ಪನವರ, ಉಪ ತಹಶೀಲ್ದಾರ ಎಲ್.ಎಚ್.ಬೋವಿ, ಬಿಇಒ ಜಿ.ಬಿ.ಬಳಗಾರ, ಪೌರಾಯುಕ್ತ ಶಿವಾನಂದ ಹಿರೇಮಠ , ಪಿಎಸ್ಐ ಎನ್.ಆರ್.ಕಿಲಾರೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಎಸ್.ಕೆ ಹಸಂಗಿ, ಮುಖಂಡರಾದ ಗೋವಿಂದ ಕಳ್ಳಿಮನಿ, ಓಂಕಾರಪ್ಪ ಬಂಡಿವಡ್ಡರ, ವಿರಭದ್ರ ಮೈಲನ್ನವರ, ರಾಮಪ್ಪ ರಾಯಪ್ಪಗೋಳ, ಅಜೀತ ಹರಿಜನ, ಬಾಳೇಶ ಸಂತುಗೋಳ, ಲಕ್ಷ್ಮಣ ತಳಗಡೆ, ಕಾಡಪ್ಪ ಮೇಸ್ತ್ರಿ, ವಿಠಲ ಸಣ್ಣಕ್ಕಿ, ತಳದಪ್ಪ ಅಮ್ಮಣಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .