ಗೋಕಾಕ:ಪೆಟ್ರೋಲ್ ಡೀಸೆಲ್ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಪೆಟ್ರೋಲ್ ಡೀಸೆಲ್ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್
ಕಾರ್ಯಕರ್ತರ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಕೌಜಲಗಿ ಏ 7 :
ಅಚ್ಚೇ ದಿನ್ ಆಯೇಗಾ ಎಂದು ಹೇಳುತ್ತಿರುವ ಬಿಜೆಪಿ ಕೇಂದ್ರ ಸರ್ಕಾರ, ದೇಶದ ಸಾಮಾನ್ಯ ಜನರ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿ ಜನರ ಬದುಕನ್ನು ದೊಡ್ಡ ಕಂದಕಕ್ಕೆ ನೂಕುತ್ತಿದೆಂದು ಅರಭಾವಿ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಬಿಜೆಪಿ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು.
ಸಮೀಪದ ತಪಸಿ-ಉದಗಟ್ಟಿ ಕ್ರಾಸ್ ಬಳಿ ಗುರುವಾರದಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನಿರ್ದೇಶನದ ಮೇರೆಗೆ ಅರಭಾವಿ ಕಾಂಗ್ರೆಸ್ ಸಮಿತಿ ಕೌಜಲಗಿ ಮತ್ತು ಅರಭಾವಿ ಬ್ಲಾಕ್ ಕಾಂಗ್ರೆಸ್ ಸಹಯೋಗದಲ್ಲಿ ಅಗತ್ಯ ವಸ್ತುಗಳಾದ ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಅದರ ಅಂಗವಾಗಿ ಮೋಟಾರ್ ಬೈಕ್, ಗ್ಯಾಸ್, ಗಾಣದ ಎಣ್ಣೆ ಡಬ್ಬಿ ಮುಂತಾದವುಗಳಿಗೆ ಮಾಲೆ ಹಾಕಿ ಸರ್ಕಾರಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ವಿನೂತನವಾಗಿ ಜರುಗಿದ ಪ್ರತಿಭಟನೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ದಳವಾಯಿ ಅವರು, ದೇಶದಲ್ಲಿ ಬಡವರು, ದಲಿತರು, ಹಿಂದುಳಿದ ಅಲ್ಪಸಂಖ್ಯಾತರು ಈ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜೀವನ ನಡೆಸುವುದು ಕಷ್ಟವಾಗಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ರೈತರಿಗೆ ಸಾಮಾನ್ಯ ಜನರಿಗೆ ಮೋಸ ಮಾಡುತ್ತಿವೆ. ಜನ ಎಲ್ಲಿಯವರೆಗೆ ಮೌನವಾಗಿರುವರೋ ಅಲ್ಲಿವರೆಗೆ ಬಿಜೆಪಿ ಸರ್ಕಾರ ಜನತೆಗೆ ದ್ರೋಹ ಎಸಗುತ್ತಿರುತ್ತದೆ. ಜನರ ಕಣ್ಣೀರು ಒರೆಸಲು ಮುಂದಿನ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆಂದು ಅರವಿಂದ ದಳವಾಯಿ ಹೇಳಿದರು.
ತೈಲ ಬೆಲೆ ಏರಿಕೆ ವಿರೋಧಿಸಿ ತಪಸಿ-ಉದಗಟ್ಟಿ ಕ್ರಾಸ್ ನಲ್ಲಿ ಜನ ಟಯರಗೆ ಬೆಂಕಿ ಹಚ್ಚಿ ಕಲ್ಲು ಒಲೆ ಹೂಡಿ ಚಹಾ ಕುದಿಸುª ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಸುರೇಶ ಮಗದುಮ, ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಇಮಾಮ್ಸಾಬ ಹುನ್ನೂರ, ಮಲಿಕ್ ಲಾಡಖಾನ್, ಸಲೀಮ ಇನಾಮ್ದಾರ, ಅಬ್ಬಯ್ಯ ಹೊಸಮನಿ, ಇμರ್Áದ್ ಪೈಲ್ವಾನ್, ಲಕ್ಷ್ಮಣ ಮಂಗಿ, ರಾಜು ನಾಯಕ, ಗುರುಸಿದ್ಧ ಹಳ್ಳೂರ, ದಶರಥ ಸಂಗಾನಟ್ಟಿ, ಮುತ್ತೆಪ್ಪ ದೇಮಣ್ಣವರ, ಲಕ್ಷ್ಮಣ್ ಹಳ್ಳಿಕೇರಿ, ಸಿದ್ದಪ್ಪ ಸಣ್ಣಕ್ಕಿ, ಹನುಮಂತ ಭಜಂತ್ರಿ, ಮಹಾವೀರ ಹೊಸಮನಿ ಮತ್ತು ಶಿವಾಪುರದ ಹಲಗೆ ಮೇಳದವರು ಭಾಗವಹಿಸಿದ್ದರು.