RNI NO. KARKAN/2006/27779|Sunday, June 15, 2025
You are here: Home » ಬೆಳಗಾವಿ ಗ್ರಾಮೀಣ » ಗೋಕಾಕ:ರಾಜ್ಯದ ಬಿಜೆಪಿ ಸರಕಾರ ಸುಭದ್ರವಾಗಿದ್ದು, ಒಳ್ಳೆಯ ಆಡಳಿತ ನೀಡುತ್ತಿದೆ : ಅರಣ್ಯ ಸಚಿವ ಕತ್ತಿ

ಗೋಕಾಕ:ರಾಜ್ಯದ ಬಿಜೆಪಿ ಸರಕಾರ ಸುಭದ್ರವಾಗಿದ್ದು, ಒಳ್ಳೆಯ ಆಡಳಿತ ನೀಡುತ್ತಿದೆ : ಅರಣ್ಯ ಸಚಿವ ಕತ್ತಿ 

ರಾಜ್ಯದ ಬಿಜೆಪಿ ಸರಕಾರ ಸುಭದ್ರವಾಗಿದ್ದು, ಒಳ್ಳೆಯ ಆಡಳಿತ ನೀಡುತ್ತಿದೆ : ಅರಣ್ಯ ಸಚಿವ ಕತ್ತಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 17 :
ರಾಜ್ಯದ ಬಿಜೆಪಿ ಸರಕಾರ ಸುಭದ್ರವಾಗಿದ್ದು, ಒಳ್ಳೆಯ ಆಡಳಿತ ನೀಡುತ್ತಿದೆ ಎಂದು ಅರಣ್ಯ ಹಾಗೂ ಪರಿಸರ ಸಚಿವ ಉಮೇಶ ಕತ್ತಿ ಹೇಳಿದರು.

ಸೋಮವಾರದಂದು ನಗರದಲ್ಲಿ ಯೋಗಿಕೋಳ್ಳ ರಸ್ತೆ ಪಕ್ಕದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಸತಿ ಗೃಹಗಳ ಶಂಕುಸ್ಥಾಪನೆ ನೆರವೇರಿಸಿ ತಮ್ಮನ್ನು ಬೇಟಿಯಾದ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು

ಬಿಜೆಪಿ ಪಕ್ಷದ ಸರಕಾರ ಬಂದಾಗಿನಿಂದ ಜನಪರ ಕಾರ್ಯಗಳೊಂದಿಗೆ ಒಳ್ಳೆಯ ಆಡಳಿತ ನೀಡುತ್ತಿದದು , ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸರಕಾರ ಸುಭದ್ರವಾಗಿದೆ. ಪಕ್ಷ ಯಾವ ನಾಯಕರಿಗೆ ಕೊಕ್ ಕೊಡುತ್ತದೆ, ಯಾವ ನಾಯಕರಿಗೆ ಏನು ಜವಾಬ್ದಾರಿ ನೀಡುತ್ತದೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪಕ್ಷ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದು, ಪಕ್ಷ ಯಾವದೇ ಜವಾಬ್ದಾರಿ ನೀಡಿದರು ಅದನ್ನು ನಿರ್ವಹಿಸಲು ಸಿದ್ದ ಎಂದ ಅವರು ಕಳೆದ ಹಲವು ದಿನಗಳಿಂದ ಅತಿಥಿ ಉಪನ್ಯಾಸಕರು ನಡೆಸುತ್ತಿದ್ದ ಹೋರಾಟಕ್ಕೆ ಸರಕಾರ ಸ್ವಂದಿಸಿ, ವೇತನ ದುಪ್ಪಟ್ಟು ಮಾಡಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಜನರಿಗೆ ಒಳ್ಳೆಯ ಆಡಳಿತ ನೀಡುತ್ತಿದೆ.

ಸರಕಾರದ ಕೊವಿಡ ನಿಯಮ ಪಾಲಿಸಿ : ಕೊವಿಡ ಮೂರನು ಅಲೆ ಒಮಿಕ್ರೋನ ಅಷ್ಟೊಂದು ಗಂಭೀರ ಸ್ವರೂಪ ಪಡೆದಿಲ್ಲ, ಜನರು ಭಯ ಪಡದೆ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು, ನೈಟ್ ಕರ್ಪ್ಯೂವಾಗಲಿ , ವಿಕೆಂಡ ಕರ್ಪ್ಯೂವಾಗಲಿ ಜನರಿಗೆ ತೊಂದರೆ ಕೊಡುವ ದೃಷ್ಟಿಯಲ್ಲಿ ಮಾಡಿಲ್ಲ ಕೊವಿಡ ಸರಪಳಿ ಮುರಿಯಲು ಸರಕಾರ ಜನರ ಹಿತದೃಷ್ಟಿಯಿಂದ ನಿಯಮಗಳನ್ನು ಮಾಡಿದೆ ಅದನ್ನು ಪಾಲಿಸಿ ಕೊರೋನಾ ಮುಕ್ತ ರಾಜ್ಯ ಮಾಡಲು ಎಲ್ಲರು ಸಹಕರಿಸಬೇಕು ಎಂದು ಮನವಿ ಮಾಡಿದರು.

Related posts: