ಗೋಕಾಕ:ಸಚಿವ ಅಶ್ವಥ್ ನಾರಾಯಣ ವರ್ತನೆ ಖಂಡನೀಯ : ಅಶೋಕ ಪೂಜಾರಿ ಆರೋಪ
ಸಚಿವ ಅಶ್ವಥ್ ನಾರಾಯಣ ವರ್ತನೆ ಖಂಡನೀಯ : ಅಶೋಕ ಪೂಜಾರಿ ಆರೋಪ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 5 :
ಬಿಜೆಪಿ ಸರಕಾರ ಮೇಕದಾಟು ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು, ಮೊನ್ನೆ ನಡೆದ ಸರಕಾರಿ ಸಮಾರಂಭದಲ್ಲಿ ಸಚಿವ ಅಶ್ವಥ್ ನಾರಾಯಣ ವರ್ತನೆ ಖಂಡನೀಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಆರೋಪಿಸಿದರು
ಬುಧವಾರದಂದು ನಗದ ಅವರ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಒಬ್ಬ ಜವಾಬ್ದಾರಿಯುತ್ತ ಸ್ಥಾನದಲ್ಲಿರುವ ಸಚಿವ ಅಶ್ವಥ್ ನಾರಾಯಣ ಅವರು ವೇದಿಕೆಯಲ್ಲಿ ಗಂಡಸುತನ ಪ್ರಶ್ನೆಸುವದು ತರವಲ್ಲ ಇದು ಅವರ ಅಸಭ್ಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಸಚಿವರ ತಪ್ಪಿದರು ಸಹ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಾಯಕ ಡಿ.ಕೆ ಸುರೇಶ ಅವರ ವಿರುದ್ಧ ಹೋರಾಟ ಮಾಡುತ್ತಿರುವದು ಸರಿಯಲ್ಲ ಬಿಜೆಪಿ ಪಕ್ಷದವರಿಗೆ ಪಕ್ಷ ಬದ್ದತೆ ಇದ್ದರೆ ಮೊನ್ನೆಯಷ್ಟೇ ನಡೆದ ಬೆಳಗಾವಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲುತ್ತಿರಲ್ಲಿ ಬಿಜೆಪಿ ಕಾರ್ಯಕರ್ತರ ಹೋರಾಟ ಯಾವುದೇ ಒಬ್ಬ ವ್ಯಕ್ತಿಯನ್ನು ಓಲೈಸುವ ಮತ್ತು ಒಬ್ಬ ವ್ಯಕ್ತಿಯನ್ನು ಟೀಕಿಸುವ ಹೋರಾಟವಾಗಿದೆ ಎಂದು ಆರೋಪಿಸಿದ ಅವರು ಕಾಂಗ್ರೆಸ್ ಪಕ್ಷ ಜನೇವರಿ 9 ರಿಂದ ಕೈಗೊಳ್ಳುವ ಮೇಕಾದಾಟು ಪಾದಯಾತ್ರೆ ಪೂರ್ವ ನಿಯೋಜಿತವಾಗಿದ್ದು, ಈ ಹೋರಾಟವನ್ನು ತಡೆಯಲು ಸರಕಾರ ರಾಜ್ಯದಲ್ಲಿ ವಿಕೆಂಡ ಲಾಕಡೌನ ಮತ್ತು ಪ್ರತಿಭಟನೆಗಳನ್ನು ನಿಷೇಧಿಸಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಜೆ.ಆರ್.ಪೂಜೇರಿ, ಜಾಕೀರ ನಧಾಪ, ಮುಸ್ತಾಕ ಪುಲತಾಂಬೆ, ಅಸದಖಾನ ಜಗದಾಳ, ಚನ್ನಬಸು ರುದ್ರಾಪೂರ, ಲಗಮ್ಮನ ಕಳಸಣ್ಣವರ ಉಪಸ್ಥಿತರಿದ್ದರು.