ಗೋಕಾಕ:ಹೊಸೂರು ಪಂಚಾಯಿತಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ ಜಾರಕಿಹೊಳಿ ಅವರ ಪರ ಮತಯಾಚನೆ
ಹೊಸೂರು ಪಂಚಾಯಿತಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ ಜಾರಕಿಹೊಳಿ ಅವರ ಪರ ಮತಯಾಚನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ. 3 :
ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಶುಕ್ರವಾರದಂದು ಸವದತ್ತಿ ತಾಲೂಕಿನ ಬೈಲಹೊಂಗಲ ಮತಕ್ಷೇತ್ರದ ಹೊಸೂರು ಪಂಚಾಯಿತಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ ಜಾರಕಿಹೊಳಿ ಅವರ ಪರ ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಸಾದಿಕ ಹಲ್ಯಾಳ ಸ್ಥಳೀಯ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗಾಗಿ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸಿರುವ ಯುವ ನಾಯಕ ಲಖನ ಜಾರಕಿಹೊಳಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿ ಅತ್ಯಧಿಕ ಮತಗಳಿಂದ ಆಯ್ಕೆ ಮಾಡಬೇಕು. ಯುವಕರಾಗಿರುವ ಲಖನ ಜಾರಕಿಹೊಳಿ ಅವರು ಸ್ಥಳಿಯ ಸಂಸ್ಥೆಗಳ ಅಭಿವೃದ್ಧಿಗೆ ಹಲವಾರು ಕ್ರೀಯಾತ್ಮಕ ವಿಚಾರಗಳನ್ನು ಹಮ್ಮಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ. ಡಿಸೆಂಬರ್ 10 ರಂದು ಜರಗುವ ವಿಧಾನ ಪರಿಷತ್ ಚುನಾವಣೆಯಲ್ಲಿ ಹೊಸೂರು ಗ್ರಾಮ ಪಂಚಾಯಿತಿ ಸದಸ್ಯರೆಲ್ಲರೂ ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ಲಖನ್ ಜಾರಕಿಹೊಳಿ ಅವರಿಗೆ ನೀಡಿ ಆರ್ಶಿವದಿಸಬೇಕೆಂದು ಸಾದಿಕ ಹಲ್ಯಾಳ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಹೊಸೂರು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸರೋಜನಿ ಬಾಳೆಕುಂದ್ರಿ , ಉಪಾಧ್ಯಕ್ಷೆ ಶ್ರೀಮತಿ ರುದ್ರವ್ವ ಮರಶೆಟ್ಟಿ , ಸದ್ಯಸರುಗಳಾದ ದರೆಪ್ಪ ಜೋತಗನವರ , ಈರಪ್ಪ ಸಂಪಗಾವ , ಮಲ್ಲಪ್ಪ ಯರಡಾಲ ,ಸೋಮಲಿಂಗಪ್ಪ ಮನ್ನಿಕೇರಿ, ಮಡಿವಾಳಪ್ಪ ಜಾಧವ, ಬಸವರಾಜ ವಿವೇಕಿ, ಮುನೀರ ಶೇಖ್, ದಿಲಾವರ ದುಪದಾಳ, ಗಂಗಪ್ಪ ಗುಮ್ಮಗೊಳ, ಮೊಹನ ವಕ್ಕುಂದ, ಶ್ರೀಮತಿ ಪ್ರೇಮಾಬಾಯಿ ಪಾಟೀಲ, ಶ್ರೀಮತಿ ಬಸವ್ವ ದುಗ್ಗಾನಿ, ಶ್ರೀಮತಿ ಮಲ್ಲವ ನಾಗನೂರ, ಶ್ರೀಮತಿ ಮಲ್ಲವ ಸುತಗಟ್ಟಿ , ಶ್ರೀಮತಿ ಪಾರ್ವತೆವ್ವ ಮೂಗಬಸವ, ಶ್ರೀಮತಿ ಜೈರಾಬಿ ಶೇಖ್, ಶ್ರೀಮತಿ ಸುನಂದಾ ಗಡ್ಡಿ, ಶ್ರೀಮತಿ ರೇಣುಕಾ ಚಿಕ್ಕೋಪ್ಪ, ಮುಖಂಡರಾದ, ಐ.ಬಿ.ಇಂಗಳಗಿ, ಉದಯ ಬೂದಿಹಾಳ, ಸಾದಿಕ ಹಲ್ಯಾಳ, ಸಂತೋಷ ಖಂಡ್ರಿ, ಮುಗುಟ ಪೈಲವಾನ ಉಪಸ್ಥಿತರಿದ್ದರು .