RNI NO. KARKAN/2006/27779|Friday, August 1, 2025
You are here: Home » breaking news » ಘಟಪ್ರಭಾ:ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ : ಅರಬಾಂವಿ ಗ್ರಾಮದಲ್ಲಿ ಘಟನೆ

ಘಟಪ್ರಭಾ:ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ : ಅರಬಾಂವಿ ಗ್ರಾಮದಲ್ಲಿ ಘಟನೆ 

ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ : ಅರಬಾಂವಿ ಗ್ರಾಮದಲ್ಲಿ ಘಟನೆ 

ಘಟಪ್ರಭಾ ಸೆ 19: ಗೋಕಾಕ ತಾಲೂಕಿನ ಅರಭಾಂವಿ ಗ್ರಾಮದ ಸತ್ತಗೇರಿ ತೋಟದ ರೈತ ಪ್ರಭಾಕರ ಚನ್ನಪ್ಪ ಬಡಲಕ್ಕನವರ (60) ಇವರು ಸಾಲಬಾಧೆಯಿಂದ ಕಳೆದ ಎರಡು ದಿನದ ಹಿಂದೆ ಕ್ರಿಮಿನಾಶಕ ವಿಷ ಔಷದ ಸೇವಿಸಿ ಆತ್ಮಹತ್ಯೆ ಯತ್ನಿಸಿ ಆಸ್ಪತ್ರೆಗೆ ಸೇರಿಸಿದರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಾವನ್ನಪ್ಪಿದರು.

ಇವರು ಜಮೀನಲ್ಲಿ ಬೋರವೆಲ್ ಹಾಗೂ ಬಾವಿ ರಿಪೇರಿ ಮತ್ತು ತನ್ನ ಎರಡು ಹೆಣ್ಣು ಮಕ್ಕಳ ಮದುವೆಗಾಗಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಅರಿಹಂತ ಬ್ಯಾಂಕ್ ಹಾಗೂ ಬಸವೇಶ್ವರ ಬ್ಯಾಂಕ್‍ಗಳಲ್ಲಿ 4 ಲಕ್ಷ ಸಾಲ ಮಾಡಿಕೊಂಡಿದ್ದರು. ಬರಗಾಲದಿಂದ ಜಮೀನಲ್ಲಿ ಬೆಳೆ ಬಾರದೆ ನಷ್ಟ ಅನುಭವಿಸದ್ದರಿಂದ ಸಾಲಬಾಧೆ ಮತ್ತು ತೀರಿಸುವ ಚಿಂತೆಯಲ್ಲಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರೆಂದು ದೂರಿನಲ್ಲಿ ದಾಖಲಾಗಿದೆ.

ಈ ಬಗ್ಗೆ ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ನಡೆಸಿದ್ದಾರೆ.

Related posts: