ಖಾನಾಪುರ : ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ಹೆಚ್ಚಿದ ಕಾಡುಹಂದಿಗಳ ಹಾವಳಿ ಹೈರಾಣಾದ ನಾಗರಗಾಳಿ ಅರಣ್ಯ ಪ್ರದೇಶದ ಗ್ರಾಮಸ್ಥರು
ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ಹೆಚ್ಚಿದ ಕಾಡುಹಂದಿಗಳ ಹಾವಳಿ ಹೈರಾಣಾದ ನಾಗರಗಾಳಿ ಅರಣ್ಯ ಪ್ರದೇಶದ ಗ್ರಾಮಸ್ಥರು
ಕಾಶೀಮ ಹಟ್ಟಿಹೊಳಿ,ಖಾನಾಪುರ
ಯಾನ್ ಮಾಡೊದ್ರಿ, ನಾವ್ ಜಂಗಲ್ ಬಾಜು ಇರಬೇಕ್ರಿ, ಯಾಕಂದ್ರ ಇರೋ ಚೋಟ್ ಜಾಗಾದಾಗ ಎನ್ರ ಪಿಕ ತಗದ ಜೀವನ ನಡೆಸಬೇಕ ಅಂದ್ರ, ಇವ್ ನಮ್ಮನ್ನ ಬಿಡವಾಲ್ರಿ. ಪರತಿ ವರಸ ಎಕರೆ ಗಟ್ಟಲೆ ಬೆಳೆ ನಾಶ ಮಾಡಕತಾವ್ರಿ. ಇದಕ್ಕ ಮುಂದ ಪರಿಹಾರ ಯಾನಂತ ತಿಳಿವಾತ್ರಿ.
ಈ ಕಥೆ ನಡೆಯುತ್ತಿರುವುದು ಬೇರೆಲ್ಲೂ ಅಲ್ಲ, ಇದು ನಡೆಯುತ್ತಿರುವುದು ಖಾನಾಪೂರ ತಾಲೂಕಿನ ನಾಗರಗಾಳಿ ಅರಣ್ಯ ವಲಯ ಪ್ರದೇಶದಲ್ಲಿ ಬರುವ ಗೊಧೊಳ್ಳಿ, ಲಿಂಗನಮಠ, ಕಕ್ಕೇರಿ, ಭೂರಣಕಿ, ನಾಗರಗಾಳಿ ಇನ್ನೂ ಹಲವಾರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶದ ಸುತ್ತಲೂ ಇರುವ ರೈತರ ಹೊಲ-ಗದ್ದೆಗಳಲ್ಲಿ ಹೆಚ್ಚಿದ ಕಾಡಹಂದಿ ಹಾವಳಿಯಿಂದ ಹೈರಾಣಾದ ರೈತರು.
ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ:
ಕಾಡಿನಲ್ಲಿ ತಿನ್ನಲು ಆಹಾರ ಹಾಗೂ ಕುಡಿಯುವ ನೀರು ಇಲ್ಲದ್ದರಿಂದ, ರೈತರ ಗದ್ದೆಗಳಲ್ಲಿ ಬೆಳೆದು ನಿಂತ ಪೈರುಗಳನ್ನು ತಿಂದು, ಬೆಳೆಗಳಲ್ಲಿ ಒಡಾಡಿ, ಬೆಳೆಯನ್ನು ನಾಶ ಮಾಡುವ ಚಿಂತೆ ಇವರನ್ನು ಇನ್ನಷ್ಟು ಹೈರಾಣಗೊಳಿಸಿದೆ. ಜೋತೆಗೆ ಬೆಳೆಯನ್ನು ತಿನ್ನುವುದಕ್ಕಿಂತ ಹೆಚ್ಚು ಹಾಳು ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿವೆ. ಇದು ಗೊಧೋಳ್ಳಿ, ಗುಂಡೋಳ್ಳಿ, ಲಿಂಗನಮಠ, ಕರಿಕಟ್ಟಿ, ಚುಂಚವಾಡ, ಭೂರಣಕಿ, ತಾವರಗಟ್ಟಿ, ಕಕ್ಕೇರಿ ಇನ್ನೂ ಹಲವಾರು ಗ್ರಾಮಗಳ ಸುತ್ತಲೂ ಇರುವ ಅರಣ್ಯ ಪ್ರದೇಶದಲ್ಲಿನ ಜನರು ಪೈರುಗಳು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ತೊಳಲಾಡುತ್ತಿದ್ದಾರೆ.
ಇನ್ನೆಷ್ಟು ದಿನ ಈ ನರಕ:
ಕಳೆದ ಹಲವಾರು ವರ್ಷಗಳಿಂದ ರೈತರ ನಿದ್ದೆಗೆಡಿಸುತ್ತಿರುವ ಕಾಡುಹಂದಿಗಳು ಈಗ ಕಾಡಿನ ಸುತ್ತಲೂ ಇರುವ ಹೊಲ-ಗದ್ದೆಗಳಲ್ಲಿ ಬೆಳೆಯು ಬಂದಿರುವುದರಿಂದ, ನಿತ್ಯ ಒಡಾಡುವ ಜನರ ಸಂಪರ್ಕ ಕಡಿಮೆ ಆಗಿದೆ. ಆದ್ದರಿಂದ ಸಂಜೆ ಆಗುತ್ತಲೆ ರೈತರು ಮನೆ ಕಡೆ ಹೋಗುತ್ತಿರುವಾಗ ಗದ್ದೆಗಳಲ್ಲಿ ಕಾಡುಹಂದಿಗಳು ತಂಡೋಪತಂಡವಾಗಿ ಕಂಡುಬರುತ್ತಿವೆ. ಹೀಗೆ ಬೇಟೆ ಮುಂದುವರಿದರೆ ಕಾಡುಹಂದಿಗಳ ಹಾವಳಿಗೆ ಕೊನೆ ಎಂದು..? ಎಂಬುದು ಜನರ ಯಕ್ಷ ಪ್ರಶ್ನೇಯಾಗಿದೆ.
ನಾಮ್ ಕೆ ವಾಸ್ತೆ ಸೋಲಾರ ತಂತಿ ಬೇಲಿ: ಗುಂಡೊಳ್ಳಿ ವ್ಯಾಪ್ತಿಯ ಅರಣ್ಯದ ಸುತ್ತಲೂ ಸುಮಾರು 250 ಕ್ಕೂ ಅಧಿಕ ಎಕರೆ ಕೃಷಿ ಭೂಮಿ ಇದ್ದು, ಇದರ ಸುತ್ತಲೂ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಸೋಲಾರ್ ತಂತಿಯನ್ನು ಅರಣ್ಯ ಇಲಾಖೆಯವರು ಅಳವಡಿಸಿದ್ದಾರೆ. ಆದರೆ ಈ ಸೋಲಾರ ತಂತಿ ಬೇಲಿ ನಾಮ್ ಕೆ ವಾಸ್ತೆ ಎಂಬಂತಾಗಿದೆ. ಕಳೆದ 6 ತಿಂಗಳಿನಿಂದ ಈ ಸೋಲಾರ ತಂತಿ ಕಾರ್ಯ ನಿರ್ವಹಿಸುತ್ತಿಲ್ಲ, ಹೀಗಾಗಿರುವುದರಿಂದ ಕಾಡಿನಿಂದ ರಾಜಾರೋಷವಾಗಿ ಕಾಡುಹಂದಿಗಳು ರೈತರ ಗದ್ದೆಗಳತ್ತ ಮುಖಮಾಡಿವೆ.
ಶಿವಾನಂದ.ಕ. ಸಂಗೋಳ್ಳಿ, : ರೈತ
ನಾವು ಕಷ್ಟಪಟ್ಟು ಬೆಳೆದ ಬೆಳೆಗಳು ಪ್ರತಿ ವರ್ಷ ಕಾಡಹಂದಿಗಳ ಪಾಲಾಗುತ್ತಿವೆ. ಅದಕ್ಕಾಗಿ ಸಂಭಂಧಪಟ್ಟವರು ಬೆಳೆ ನಾಶದ ಮಾಹಿತಿಯನ್ನು ಪಡೆದುಕೊಂಡು ಪರಿಹಾರ ಒದಗಿಸಬೇಕು. ಜೋತೆಗೆ ಕಾಡುಹಂದಿಗಳ ಹಾವಳಿಯನ್ನು ತಡೆಗಟ್ಟಬೇಕು.
ಪ್ರಕಾಶ ಮರೆಪ್ಪನ್ನವರ, ಉಪವಲಯ ಅರಣ್ಯ ಅಧಿಕಾರಿ
ಕಲ್ಲಪ್ಪ ಸಂಗೋಳ್ಳಿ ಯವರ ಹೊಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೇಳೆ ನಾಶವಾಗಿರುವುದರಿಂದ ಸ್ಥಳಕ್ಕೆ ಹೋಗಿ ಭೇಟಿ ನೀಡಿ ನಾಶವಾದ ಬೇಳೆಯ ಪ್ರಮಾಣದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿರುತ್ತೆನೆ. ನಾನು ಈ ಭಾಗದ ಅರಣ್ಯ ಪ್ರದೇಶದಲ್ಲಿ ಅಧಿಕಾರ ವಹಿಸಿ ಒಂದು ವರ್ಷವಾಯಿತು. ನಾನು ಇಲ್ಲಿ ಬಂದ ಮೆಲೆ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಗುಂಡೊಳ್ಳಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸೋಲಾರ ನಿರ್ಮಿತ ತಂತಿಬೇಲಿಯನ್ನು ಅಳವಡಿಸಿದ್ದೆವೆ. ಆದರೆ ಕೆಡಿಗೆಡಿಗಳು ಕೆಲವು ಕಡೆಗಳಲ್ಲಿ ತಂತಿಯನ್ನು ಕಟ್ಟು ಮಾಡಿ ಕಳುವು ಮಾಡಿರುತ್ತಾರೆ. ಹೀಗೆ ಮಾಡುವುದರಿಂದ gರೈತರಿಗೆ ಹಾನಿಯಾಗುತ್ತದೆ, ಅದಕ್ಕೆ ಎಲ್ಲರೂ ಸಹನೀಡಬೇಕೆಂದು ಹೇಳೂತ್ತಾರೆ.