ಗೋಕಾಕ : ಕರದಂಟು ನಗರಿಗೆ ಮತ್ತೆ ಕಟಂಕ : ಜಲಾವೃತ್ತಗೊಂಡ ಗೋಕಾಕ : ಕಾಳಜಿ ಕೇಂದ್ರಗಳ ಮೊರೆಹೋದ ಜನತೆ
ಕರದಂಟು ನಗರಿಗೆ ಮತ್ತೆ ಕಟಂಕ : ಜಲಾವೃತ್ತಗೊಂಡ ಗೋಕಾಕ : ಕಾಳಜಿ ಕೇಂದ್ರಗಳ ಮೊರೆಹೋದ ಜನತೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 24 :
ಕಳೆದ ಮೂರುದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಾಹಾ ಮಳೆಯಿಂದ ಮಾರ್ಕೆಂಡೆಯ ,ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಪ್ರವಾಹ ಉಂಟಾದ ನಿಮಿತ್ತ ಗೋಕಾಕ ನಗರ ಹಾಗೂ ತಾಲೂಕಿನ ಭಾಗಶಃ ಹಳ್ಳಿಗಳು ಮುಳುಗಡೆಯಾಗಿವೆ.
ಶನಿವಾರ ಮುಂಜಾನೆ ಹಿಡಕಲ್ ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ ನೀರು ಹರಿಬಿಡಲಾಗಿದಾದು, ಶಿರೂರ ಜಲಾಶಯದಿಂದ ಸುಮಾರು 25 ಸಾವಿರ ನೀರು ಹರಿಬಿಡಲಾಗಿದೆ ಎಂದು ನೀರಾವರಿ ಇಲಾಖೆಯ ಮೂಲಗಳಿಂದ ತಿಳಿದು ಬಂದಿದ್ದು, ಗೋಕಾಕ ನಗರದ ಕುಂಬಾರ ಗಲ್ಲಿ, ಡೋರಗಲ್ಲಿ, ದಾಳಂಬ್ರಿ ತೋಟ, ಲಕ್ಕಡಗಲ್ಲಿ , ಉಪ್ಪಾರ ಗಲ್ಲಿ , ಕಿಲ್ಲಾ , ಬೋಜಗರ ಗಲ್ಲಿ, ಮಾಲದಾರ ಗಲ್ಲಿ, ನಾಕಾ ನಂ 1 ಸೇರಿದಂತೆ ಇತರ ನದಿ ತಿರದ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿವೆ.
ಶನಿವಾರ ಬೆಳ್ಳಂಬೆಳಿಗ್ಗೆ ನಗರದಲ್ಲಿ ಮುಳುಗಡೆಯಾದ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆಗೆ ಇಳಿದ ಪೊಲೀಸ ಇಲಾಖೆ, ನಗರಸಭೆ , ಎನ್.ಡಿ.ಆರ್.ಎಫ್ ತಂಡ ದಾಳಂಬ್ರಿ ತೋಟ ಮತ್ತು ಡೋರಗಲ್ಲಿಯಲ್ಲಿ ಸಿಲುಕ್ಕಿದ 9 ಜನರನ್ನು ರಕ್ಷಣೆ ಮಾಡಿದ್ದಾರೆ.
ಕಾಳಜಿ ಕೇಂದ್ರಕ್ಕೆ ಸ್ಥಳಾಂತರ : ಘಟಪ್ರಭಾ, ಮಾರ್ಕಂಡೇಯ ಮತ್ತು ಹಿರಣ್ಯಕೇಶಿ ನದಿಗಳಿಗೆ ಪ್ರವಾಹ ಉಂಟಾದ ಪರಿಣಾಮ ಗೋಕಾಕ ನಗರ ಭಾಗಶಃ ಓಣಿಗಳು ಮುಳುಗಡೆಯಾಗಿದ್ದು, ಈ ಪ್ರದೇಶದಲ್ಲಿ ವಾಸಿಸುವ ಜನರನ್ನು ಸುಮಾರು 500 ಕ್ಕೂ ಹೆಚ್ಚು ಸಂತ್ರಸ್ತರನ್ನು ನಗರದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಗಳಾದ ಎಪಿಎಂಸಿ, ಎಂ ಎಚ್.ಹೈಸ್ಕೂಲ್ ಹಾಗೂ ರಾಘವೇಂದ್ರ ದೇವಸ್ಥಾನದಲ್ಲಿ ಸ್ಥಳಾಂತರಿಲಾಗಿದ್ದು, ಇನ್ನೂ ಹೆಚ್ಚಿನ ಅವಶ್ಯಕತೆ ಬಿದ್ದರೆ ನಗದ ನ್ಯೂ ಇಂಗ್ಲೀಷ್ ಸ್ಕೂಲ್ ಹಾಗೂ ಸರಕಾರಿ ಕಟ್ಟಡಗಳಿಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಹಸೀಲ್ದಾರ್ ಪ್ರಕಾಶ ಹೋಳೆಪ್ಪಗೋಳ ಪತ್ರಿಕೆ ತಿಳಿಸಿದ್ದಾರೆ.
ಒಟ್ಟಾರೆ ಕಳೆದ ಮೂರುದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಜನರ ಮುಖದಲ್ಲಿ ಕರಿಛಾಯೆ ಆವರಿಸಿದೆ. ಕೊರೋನಾದಿಂದ ಈಗಷ್ಟೇ ಸುಧಾರಿಸಿಕೊಂಡಿದ್ದ ಗೋಕಾಕ ಜನತೆಗೆ ಪ್ರವಾಹ ಮತ್ತೆ ಬ್ರೇಕ ಹಾಕಿರುವ ಪರಿಣಾಮ ಕರದಂಟು ನಗರಿ ಮತ್ತೆ ಜಲಾವೃತ್ತ ಗೊಂಡು ಜನತೆ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ.