RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ : ಪ್ರವಾಹ ಸಂತ್ರಸ್ತರಿಗೆ ಮಂಗಳೂರಿನ ಮಸ್ದರ್ ಎಜುಕೇಶನ್ ಆಂಡ್ ಚಾರಿಟಿ ಸಂಸ್ಥೆಯಿಂದ ದಿನ ಬಳಕೆ ವಸ್ತು ವಿತರಣೆ

ಗೋಕಾಕ : ಪ್ರವಾಹ ಸಂತ್ರಸ್ತರಿಗೆ ಮಂಗಳೂರಿನ ಮಸ್ದರ್ ಎಜುಕೇಶನ್ ಆಂಡ್ ಚಾರಿಟಿ ಸಂಸ್ಥೆಯಿಂದ ದಿನ ಬಳಕೆ ವಸ್ತು ವಿತರಣೆ 

ಪ್ರವಾಹ ಸಂತ್ರಸ್ತರಿಗೆ ಮಂಗಳೂರಿನ ಮಸ್ದರ್ ಎಜುಕೇಶನ್ ಆಂಡ್ ಚಾರಿಟಿ ಸಂಸ್ಥೆಯಿಂದ ದಿನ ಬಳಕೆ ವಸ್ತು ವಿತರಣೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 26 :

 

ಸಂಕಷ್ಟದಲ್ಲಿರುವ ಜನರ ಸೇವೆ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಮಂಗಳೂರಿನ ಮಸ್ದರ್ ಎಜುಕೇಶನ್ ಆಂಡ್ ಚಾರಿಟಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಫಿಜ್ ಸುಫೀಯಾನ್ ಸಖಾಫಿ ಹೇಳಿದರು
ಸೋಮವಾರದಂದು ನಗರದ ಸರಕಾರಿ ಕನ್ನಡ ಹಿರಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರ ಗಳಲ್ಲಿ ವಾಸವಿರುವ ಸಂತ್ರಸ್ತರಿಗೆ ದಿನಬಳಕೆಯ ಕಿಟಗಳನ್ನು ವಿತರಿಸಿ ಅವರು ಮಾತನಾಡಿದರು .
ಕೊರೋನಾ ಹಾಗೂ ಪ್ರವಾಹದಿಂದ ನಾಡಿನ ಜನತೆ ಸಂಕಷ್ಟಕ್ಕೆ ಸಿಲುಕ್ಕಿದ್ದು, ರಾಜ್ಯಾದ್ಯಂತ ಪ್ರವಾಸ ಮಾಡಿ
ಮಸ್ದರ್ ಸಂಘಟನೆಯಿಂದ ಬಡವರಿಗೆ ಕೈಲಾದಷ್ಟು ಸಹಾಯ ಮಾಡಲಾಗುತ್ತಿದ್ದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಮಂಗಳೂರಿನ ಮಸ್ದರ್ ಸಂಘಟನೆಯ ಅನಸ ಅಹ್ಸಾನಿ, ಶಾಕೀರ ಸಖಾಫಿ , ನೌಫಲ್ ಮರ್ಝೂಖಿ,ಮುಸ್ತಫಾ ಮುಈನಿ, ಅಬ್ದುರ್ರಹ್ಮಾನ್ ಮುಸ್ಲಿಯಾರ್ , ಸೊಹೇಬರಜಾ ಹಾಫಿಜ ಉಪಸ್ಥಿತರಿದ್ದರು

Related posts: