RNI NO. KARKAN/2006/27779|Monday, August 4, 2025
You are here: Home » breaking news » ಕಾಗವಾಡ:ಕೃಷ್ಣಾ ನದಿಯಿಂದ ಕಾಲುವೆಗೆ ನೀರು ಹರಿಸಿರುವು ಸಂತಸ ತಂದಿದೆ : ಡಾ.ಆನಂದ ಮುತಾಲಿಕ್

ಕಾಗವಾಡ:ಕೃಷ್ಣಾ ನದಿಯಿಂದ ಕಾಲುವೆಗೆ ನೀರು ಹರಿಸಿರುವು ಸಂತಸ ತಂದಿದೆ : ಡಾ.ಆನಂದ ಮುತಾಲಿಕ್ 

ಕೃಷ್ಣಾ ನದಿಯಿಂದ ಕಾಲುವೆಗೆ ನೀರು ಹರಿಸಿರುವು ಸಂತಸ ತಂದಿದೆ : ಡಾ.ಆನಂದ ಮುತಾಲಿಕ್

 

ನಮ್ಮ ಬೆಳಗಾವಿ ಇ – ವಾರ್ತೆ, ಕಾಗವಾಡ ಮೇ 29 :

 

ಬೇಸಿಗೆಯ ಕಾಲದಲ್ಲಿ ಜನ ಹಾಗೂ ಜಾನುವಾರುಗಳಿಗೆ ಮತ್ತು ರೈತರ ಬೆಳೆಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸಚಿವ ಶ್ರೀಮಂತ ಪಾಟೀಲರು ರೈತಪರ ಕಾಳಜಿಯನ್ನಿಟ್ಟುಕೊಂಡು ಅವಧಿ ಪೂರ್ವದಲ್ಲಿಯೇ ಕೃಷ್ಣಾ ನದಿಯಿಂದ ಕಾಲುವೆಗೆ ನೀರು ಹರಿಸಿರುವು ಸಂತಸ ತಂದಿದೆ ಎಂದು ಡಾ. ಆನಂದ ಮುತಾಲಿಕ ಹೇಳಿದರು.
ಶುಕ್ರವಾರದಂದು ನೀರು ಬಿಡುಗಡೆಗೆ ಗುಂಡಿ ಒತ್ತುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪ್ರತಿ ವರ್ಷ ಜೂನ ಇಲ್ಲವೇ ಜುಲೈ ತಿಂಗಳಲ್ಲಿ ಪ್ರಾರಂಭವಾಗುತ್ತಿದ್ದ ನೀರು ಬಿಡುಗಡೆ ಈ ವರ್ಷ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಖಾತೆಯ ಸಚಿವರಾದ ಶ್ರೀಮಂತ ಪಾಟೀಲರು ಜನಪರ ಕಾಳಜಿಯನ್ನಿಟ್ಟುಕೊಂಡು ಅವಧಿ ಪೂರ್ವದಲ್ಲಿ ನೀರು ಬಿಡುಗಡೆಗೊಳಿಸಿರುವುದು ಸಂತಸ ತಂದಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೇಂದು ಡಾ, ಆನಂದ ಮುತಾಲಿಕ ಹೇಳಿದರು.
ಸಚಿವರ ವಿಶೇಷ ಪ್ರಯತ್ನದಿಂದ ಬಸವೇಶ್ವರ ಏತ ನೀರಾವರಿ ಯೋಜನೆ ಮುಕ್ತಾಯದ ಹಂತಕ್ಕೆ ಬಂದಿದ್ದು ಬರುವ ಕೆಲ ದಿನಗಳಲ್ಲಿ ಪ್ರಾರಂಬವಾಗಲಿದೆ. ಇದರಿಂದ ಉತ್ತರ ಭಾಗದ 22 ಹಳ್ಳಿಗಳಿಗೆ 27,462 ಹೆಕ್ಟರ್ ಪ್ರದೇಶ ನೀರಾವರಿಗೆ ಒಳಪಡಲಿದೆ. ಇದರಿಂದ ರೈತ ಸಮುದಾಯಕ್ಕೆ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ ಕೆ.ರವಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ ಹುಣಸಿಕಟ್ಟಿ, ಪ್ರಶಾಂತ ಪೊದ್ದಾರ, ಪಟ್ಟಣ ಪಂಚಾಯತ್ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ರೈತಪರ ಮುಖಂಡರಾದ ದಾದಾ ಪಾಟೀಲ ಮೋಹನ ಮುತಾಲಿಕ, ಡಾ.ಮೋಹನರಾವ್ ಕಾರ್ಚಿ, ಸುನೀಲ ಮಾಳಿ ಸಚಿವರ ಆಪ್ತ ಸಹಾಯಕರಾದ ಪ್ರಶಾಂತ ಅಪರಾಜ, ಸಚೀನ ದೇಶಾಯಿ, ರಾಜು ಮಾನೆ ಮುಖಂಡರಾದ ಮುರಗುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಸು ಪಾಟೀಲ, ಶಿದರಾಯ ಕಾಳೇಲಿ, ರಾಜು ಮದನೆ, ರತನ ಪಾಟೀಲ, ಶಾಂತಿನಾಥ ಮಾಲಗಾಂವೆ, ದುಂಡಪ್ಪ ತುಗಶೆಟ್ಟಿ, ಪಿಂಟು ಮುಂಜೆ, ಏಕನಾಥ ಕಾಳೇಲಿ, ಅಜೀತ ಚಿಪ್ಪರಗಿ, ಸೇರಿದಂತೆ ಅನೇಕರು ಇದ್ದರು.

Related posts: