ಮೂಡಲಗಿ:ಲಂಚ ಸ್ವೀಕಾರದ ವೇಳೆ ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ ಅಶೋಕ ತಳವಾರ
ಲಂಚ ಸ್ವೀಕಾರದ ವೇಳೆ ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ ಅಶೋಕ ತಳವಾರ ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ನ 30 : ಮಳೆಗೆ ಕುಸಿದಿದ್ದ ಮನೆಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ಪರಿಹಾರಕ್ಕೆ ಶಿಫಾರಸು ಮಾಡಲು ಸಂತ್ರಸ್ತ ಅರಬಾಂವಿ ಗ್ರಾಮದ ಆನಂದ ಧರ್ಮಟ್ಟಿ ಅವರಿಂದ ₹15 ಸಾವಿರ ಲಂಚ ಪಡೆಯುತ್ತಿದ್ದ ಮುಸಗುಪ್ಪಿ ಗ್ರಾಮ ಲೆಕ್ಕಾಧಿಕಾರಿ ಅಶೋಕ ತಳವಾರ ಎಂಬಾತನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಿಬ್ಬಂದಿ ಸೋಮವಾರದಂದು ಮೂಡಲಗಿ ತಹಶೀಲ್ದಾರ ಕಛೇರಿಯಲ್ಲಿ ಬಂಧಿಸಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಆನಂದ ಅವರ ಮನೆ ಕುಸಿದಿತ್ತು. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ₹40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ಕೊನೆಗೆ ₹ 30 ಸಾವಿರಕ್ಕೆ ಒಪ್ಪಿಕೊಂಡಿದ್ದ. ಮೊದಲ ಹಂತವಾಗಿ ₹ 15 ಸಾವಿರ ಕೊಡಲು ಒಪ್ಪಿಕೊಂಡಿದ್ದ ಈ ಬಗ್ಗೆ ಎಸಿಬಿಗೆ ಆನಂದ ದೂರು ನೀಡಿದ್ದರು. ಎಸಿಬಿ ಉತ್ತರವಲಯದ ಎಸ್ಪಿ ಬಿ.ಎಸ್. ನೇಮಗೌಡ ಅವರ ಮಾರ್ಗದರ್ಶನದಲ್ಲಿ ಎಸಿಬಿಯ ಡಿವೈಎಸ್ಪಿ ಎಲ್. ವೇಣುಗೋಪಾಲ್ , ಇನ್ಸ್ಪೆಕ್ಟರಗಳಾದ ಅಡಿವೆಪ್ಪ ಗುದಿಗೋಪ್ಪ , ಸುನೀಲಕುಮಾರ ಅವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಪ್ರಕಣದ ಹಿನ್ನೆಲೆ : ಅರಬಾಂವಿ ಗ್ರಾಮದ ಆನಂದ ಧರ್ಮಟ್ಟಿ ಎಂಬವವರ ಮನೆಯನ್ನು ಸಿ ಕೆಟಗೇರಿ ಯಿಂದ ಬಿ ಕೆಟಗೇರಿಗೆ ಸೇರಿಸಲು ಮುಸಗುಪ್ಪಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಆಗಿರುವ ಅಶೋಕ ತಳವಾರ ಇತನು ಮೂಡಲಗಿ ತಹಶೀಲ್ದಾರ ಕಾರ್ಯಾಲದಲ್ಲಿ ಹೆಚ್ಚುವರಿ ಕಾರ್ಯನಿರ್ವಹಿಸುತ್ತಿರುವ ಸಂಧರ್ಭದಲ್ಲಿ ಆನಂದ ಧರ್ಮಟ್ಟಿ ಎಂಬುವವರಿಗೆ 40 ರೂ ಬೇಡಿಕೆ ಇಟ್ಟಿದ್ದು, ಆನಂದ 30 ಸಾವಿರ ಕೊಡುವುದಾಗಿ ಒಪ್ಪಿಕೊಂಡು ಮೊದಲ ಹಂತವಾಗಿ 15 ಸಾವಿರ ರೂ ಕೊಡಲು ಇಂದು ಮೂಡಲಗಿ ತಹಶೀಲ್ದಾರ ಕಾರ್ಯಾಲಯದಲ್ಲಿ ಬಂದು ಹಣ ಕೊಡುವ ಸಂಧರ್ಭದಲ್ಲಿ ಎಸಿಬಿ ಅಧಿಕಾರಿಗಳು ಅಶೋಕ ತಳವಾರನನ್ನು ರೆಡ್ಡಹ್ಯಾಂಡಾಗಿ ಹಿಡಿದ್ದು , ಆರೋಪಿಯಿಂದ 15 ಸಾವಿರ ರೂ ನಗದು ಮತ್ತು ಆತ ಬಳಸಿದ ಲ್ಯಾಪಟಾಫ್ ಮತ್ತು ಇತರ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.