RNI NO. KARKAN/2006/27779|Wednesday, August 6, 2025
You are here: Home » breaking news » ಗೋಕಾಕ:ನಗರದ ಸರ್ವಾಂಗೀಣ ಬೆಳೆವಣಿಗೆ ಶ್ರಮ : ಅಧ್ಯಕ್ಷ ಜಯಾನಂದ ಹುಣಚ್ಯಾಳಿ

ಗೋಕಾಕ:ನಗರದ ಸರ್ವಾಂಗೀಣ ಬೆಳೆವಣಿಗೆ ಶ್ರಮ : ಅಧ್ಯಕ್ಷ ಜಯಾನಂದ ಹುಣಚ್ಯಾಳಿ 

ನಗರದ ಸರ್ವಾಂಗೀಣ ಬೆಳೆವಣಿಗೆ ಶ್ರಮ : ಅಧ್ಯಕ್ಷ ಜಯಾನಂದ ಹುಣಚ್ಯಾಳಿ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 3 :

 
ಸಚಿವರಾದ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ನಗರದ ಸರ್ವಾಂಗೀಣ ಬೆಳೆವಣಿಗೆ ಶ್ರಮಿಸುವುದಾಗಿ ನೂತನ ನಗರಸಭೆ ಅಧ್ಯಕ್ಷ ಜಯಾನಂದ ಹಣಚ್ಯಾಳಿ ಹೇಳಿದರು

ಮಂಗಳವಾರದಂದು ನಗರದ ವಾರ್ಡ್ 29 ರಲ್ಲಿ ನಗರಸಭೆಯ 14ನೇ ಹಣಕಾಸು ಯೋಜನೆ ಅಡಿಯಲ್ಲಿ 36 ಲಕ್ಷ ರೂಗಳ ವೆಚ್ಚದ ಫೇವರ ಬ್ಲಾಕ್ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಸಚಿವರು ಹಲವಾರು ಬೃಹತ್ ಯೋಜನೆಗಳ ಅನುಷ್ಠಾನದೊಂದಿಗೆ ನಗರದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ಅವುಗಳ ಸದುಪಯೋಗದೊಂದಿಗೆ ಸಚಿವರಿಗೆ ಸಹಕಾರ ನೀಡಿ ಇನ್ನು ಹೆಚ್ಚಿನ ಅಭಿವೃದ್ಧಿಗೆ ಸಹರಿಸೋಣಾ ಎಂದು ಹೇಳಿದರು

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಬಸವರಾಜ ಅರೆನ್ನವರ , ಸದಸ್ಯರುಗಳಾದ ಅಬ್ದುಲರಹೇಮಾನ ದೇಸಾಯಿ ,ಲಕ್ಷ್ಮೀ ದೇಶನೂರ , ಪೌರಾಯುಕ್ತ ಶಿವಾನಂದ ಹಿರೇಮಠ, ಮುಖಂಡರುಗಳಾದ ಜ್ಯೋತಿಭಾ ಸುಭಂಜಿ , ದುರ್ಗಪ್ಪಶಾಸ್ತ್ರಿ ಗೋಲ್ಲರ , ವಿಜೇಯ ಜತ್ತಿ, ಬಸವರಾಜ ಮಾಳಗಿ, ಮಲ್ಲಿಕಾರ್ಜುನ ಹೊಸಪೇಠ, ಪ್ರವೀಣ್ ಚುನಮರಿ, ರಾಜು ಜೊರಾಪೂರ , ಬಸವರಾಜ ಶೆಗುಣಶಿ , ಸುರೇಶ ಜೊರಾಪೂರ , ದರಿಶ ಕಲಾಗಣಾ, ಅಶೋಕ ತುಕ್ಕಾರ , ಯಶವಂತ ಸುಭಂಜಿ , ಮಾರ್ತಾಂಡ ಕುರಬೇಟ್ , ನಿಗಂಪ್ಪ ಸನದಿ, ಬಸವರಾಜ ಕ್ಯಾಸ್ತಿ, ಶ್ರೀಕಾಂತ ತುಕ್ಕಾರ, ನಾಗಪ್ಪ ತುಕ್ಕಾರ, ಪಾಂಡುರಂಗ ಕದಮ್ , ಜ್ಯೋತಿಭಾ ಮಿಲ್ಕಿ, ದೇವಾನಂದ ಕಂಬಾರ , ನರ್ಸಪ್ಪ ಚಿಕ್ಕದೋಳಿ ಸೇರಿದಂತೆ ಅನೇಕರು ಇದ್ದರು.

Related posts: