ಬೆಳಗಾವಿ:ರಸ್ತೆ ಅತಿಕ್ರಮಣ ತೆರವು ಮಾಡಿ : ಅಧಿಕಾರಿಗಳಿಗೆ ಸಚಿವ ಜಾರಕಿಹೊಳಿ ಖಡಕ್ ಎಚ್ಚರಿಕೆ
ರಸ್ತೆ ಅತಿಕ್ರಮಣ ತೆರವು ಮಾಡಿ : ಅಧಿಕಾರಿಗಳಿಗೆ ಸಚಿವ ಜಾರಕಿಹೊಳಿ ಖಡಕ್ ಎಚ್ಚರಿಕೆ
ಬೆಳಗಾವಿ ಅ 15: ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಂಡು ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಪ್ರಚಾರ ಮಾಡಬೇಕು. ಮೋದಿ ಸರಕಾರದ ಸುಳ್ಳು ಪ್ರಚಾರದ ವರದಿಗಳೇ ಈಗ ಎಲ್ಲೆಡೆ ಸದ್ದು ಮಾಡುತ್ತಿವೆ. ರಾಜ್ಯ ಕಾಂಗ್ರೆಸ್ ಸರಕಾರದ ಜನಪರ, ದೀನದಲಿತರ ಪರವಾಗಿರುವ ಯೋಜನೆಗಳ ಬಗ್ಗೆ ಪ್ರಚಾರ ಮಾಡಿದರೆ ಮಾತ್ರ ನಮ್ಮ ಸರಕಾರದ ಆದ್ಯತೆ ಬೆಳಕಿಗೆ ಬರಲಿದೆ ಎಂದು ಮಾಧ್ಯಮಗಳಿಗೆ ರಮೇಶ್ ಜಾರಕಿಹೊಳಿ ಸಲಹೆ ನೀಡಿದರು.
ಅವರು ಧ್ವಜಾರೋಹಣ ನೇರವೆರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು
ಬರೀ ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ಮಾಡುವ ಬದಲು ಬಿಜೆಪಿ ನಾಯಕರ ಮನೆಗಳ ಮೇಲೆ ದಾಳಿ ಮಾಡಲಿ. ಏನಿದು ಕೇಂದ್ರದ ಏಜೆಂಡಾ? ಇಂಥ ಹತ್ತಾರು ದಾಳಿ ಮಾಡಿದರೂ ನಾವು ಹೆದರುವುದಿಲ್ಲ ಎಂದು ರಮೇಶ ಜಾರಕಿಹೊಳಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ಸಾಕಷ್ಟು ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಾನೂನು ಎಲ್ಲರಿಗೂ ಒಂದು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತ ಯಾರ ಮಾತೂ ಕೇಳದೆ ಕಾನೂನಾತ್ಮಕವಾಗಿ ಅಕ್ರಮಗಳನ್ನು ತೆರವು ಮಾಡಲಿ ಎಂದು ರಮೇಶ ಜಾರಕಿಹೊಳಿ ತಿಳಿಸಿದರು.
ಖಾನಾಪುರ ರಸ್ತೆಯ ರಸ್ತೆ ಅಗಲೀಕರಣ ಆದ್ಯತೆ ಮೇರೆಗೆ ಕೈಗೊಳ್ಳುವಂತೆ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು. ಶಾಸಕರು, ಮಾಜಿ ಮಹಾಪೌರರು ಇಲ್ಲವೇ ಸಂಘ ಸಂಸ್ಥೆಗಳ ಯಾರೇ ಪ್ರಭಾವಿಗಳಿದ್ದರೂ ರಸ್ತೆ ಅತಿಕ್ರಮಣ ತೆರವು ಮಾಡಿಕೊಳ್ಳಬೇಕು ಎಂದು ರಮೇಶ ಎಚ್ಚರಿಸಿದ್ದಾರೆ