RNI NO. KARKAN/2006/27779|Sunday, June 1, 2025
You are here: Home » breaking news » ಗೋಕಾಕ:ಪಂ.ದೀನದಯಾಳ ಉಪಾಧ್ಯಾಯ ಅವರ ಸಂಸ್ಮರಣ ಕಾರ್ಯಕ್ರಮ

ಗೋಕಾಕ:ಪಂ.ದೀನದಯಾಳ ಉಪಾಧ್ಯಾಯ ಅವರ ಸಂಸ್ಮರಣ ಕಾರ್ಯಕ್ರಮ 

ಪಂ.ದೀನದಯಾಳ ಉಪಾಧ್ಯಾಯ ಅವರ ಸಂಸ್ಮರಣ ಕಾರ್ಯಕ್ರಮ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 11 :

 

 
ಪಂ.ದೀನದಯಾಳ ಉಪಾಧ್ಯಾಯ ಅವರ ತತ್ವ-ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಸಿದ್ಧಾಂತಗಳು ಇಂದಿಗೂ ಆದರ್ಶ ಪ್ರಾಯವಾಗಿವೆ ಎಂದು ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಅರಭಾವಿ ಮಂಡಲದಿಂದ ಮಂಗಳವಾರದಂದು ಹಮ್ಮಿಕೊಂಡಿದ್ದ ಪಂ.ದೀನದಯಾಳ ಉಪಾಧ್ಯಾಯ ಅವರ ಸಂಸ್ಮರಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಬಿಜೆಪಿ ರಾಷ್ಟ್ರಾಧ್ಯಂತ ಹೆಮ್ಮರವಾಗಿ ಬೆಳೆಯಲು ದೀನದಯಾಳ ಉಪಾಧ್ಯಾಯರ ತ್ಯಾಗ ಹಾಗೂ ಹೋರಾಟಗಳೇ ಕಾರಣವೆಂದು ಹೇಳಿದರು.
ಯುವ ಮುಖಂಡ ನಾಗಪ್ಪ ಶೇಖರಗೋಳ ಅವರು ಪಂ. ದೀನದಯಾಳ ಉಪಾಧ್ಯಾಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಮಾದರ, ಪಾಂಡು ಮಹೇಂದ್ರಕರ, ಅಡಿವೆಪ್ಪ ಕಂಕಾಳಿ, ನಾಗಪ್ಪ ಕುದರಿ, ಅಮೃತ ದಪ್ಪಿನವರ, ಕುಮಾರ ಪೂಜೇರಿ, ಬಾಳಪ್ಪ ಮೆಳವಂಕಿ, ಪ್ರಮೋದ ನುಗ್ಗಾನಟ್ಟಿ, ಕರೆಪ್ಪ ಬಿ.ಪಾಟೀಲ, ಶಂಕರ ಸುತಾರ, ಅಬ್ದುಲ್ ಮಿರ್ಜಾನಾಯ್ಕ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts: