ಗೋಕಾಕ:ಬ್ಯಾನರ್ ಹಾಗೂ ರಸ್ತೆ ಮೇಲೆ ಚಿತ್ರಗಳನ್ನು ಬರೆಯಿಸುವ ಮೂಲಕ ಕೊರೋನಾ ವೈರಸ್ ಕುರಿತು ಜಾಗೃತಿ

ಬ್ಯಾನರ್ ಹಾಗೂ ರಸ್ತೆ ಮೇಲೆ ಚಿತ್ರಗಳನ್ನು ಬರೆಯಿಸುವ ಮೂಲಕ ಕೊರೋನಾ ವೈರಸ್ ಕುರಿತು ಜಾಗೃತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 30 :
ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಇಲ್ಲಿಯ ನಗರಸಭೆ ಹಾಗೂ ಪೋಲಿಸ್ ಇಲಾಖೆ ಸತತವಾಗಿ ಪ್ರಯತ್ನಿಸುತ್ತಿದ್ದು ಈ ನಿಟ್ಟಿನಲ್ಲಿ ಸೋಮವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಬ್ಯಾನರ್ ಹಾಗೂ ರಸ್ತೆ ಮೇಲೆ ಚಿತ್ರಗಳನ್ನು ಬರೆಯಿಸುವ ಮೂಲಕ ಜಾಗೃತಿಯನ್ನು ಮೂಡಿಸಿದರು.
ಈ ಸಂದರ್ಭದಲ್ಲಿ ಡಿವಾಯ್ಎಸ್ಪಿ ಪ್ರಭು ಡಿ.ಟಿ., ಪೌರಾಯುಕ್ತ ಶಿವಾನಂದ ಹಿರೇಮಠ, ಸಿಪಿಐ ಗೋಪಾಲ ರಾಥೋಡ, ಪಿಎಸ್ಐಗಳಾದ ನಾಗರಾಜ ಖಿಲಾರೆ, ಎ.ಟಿ.ಅಮ್ಮಣಗಿ, ಪರಿಸರ ಅಭಿಯಂತರ ಎಮ್.ಎಚ್.ಗಜಾಕೋಶ, ಸೋಮಶೇಖರ ಮಗದುಮ್ಮ ಸೇರಿದಂತೆ ಅನೇಕರು ಇದ್ದರು.