ಗೋಕಾಕ:ಶರಣ ಸಂಸ್ಕೃತಿ ಉತ್ಸವದ ಪ್ರಚಾರ ಪತ್ರಿಕೆ ಬಿಡುಗಡೆ
ಶರಣ ಸಂಸ್ಕೃತಿ ಉತ್ಸವದ ಪ್ರಚಾರ ಪತ್ರಿಕೆ ಬಿಡುಗಡೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 30 :
ಪೆಬ್ರುವರಿ 1 ರಿಂದ ನಾಲ್ಕು ದಿನಗಳ ಕಾಲ ಜರುಗಲಿರುವ ಶರಣ ಸಂಸ್ಕೃತಿ ಉತ್ಸವದ ಪ್ರಚಾರ ಪತ್ರಿಕೆಗಳನ್ನು ಸೋಮವಾರದಂದು ಇಲ್ಲಿಯ ಶೂನ್ಯ ಸಂಪಾದನ ಮಠದಲ್ಲಿ ಗಣ್ಯರು ಬಿಡುಗಡೆ ಗೋಳಿಸಿದರು
ಪತ್ರಿಕೆ ಬಿಡುಗಡೆ ಗೋಳಿಸಿ ಮಾತನಾಡಿದ ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಈರಣ್ಣಾ ಕಡಾಡಿ ಮಾತನಾಡಿ ಕಳೆದ 15 ವರ್ಷಗಳಿಂದ ಶೂನ್ಯ ಸಂಪಾದನ ಮಠದ ನೇತೃತ್ವದಲ್ಲಿ ಶರಣ ಸಂಸ್ಕೃತಿ ಉತ್ಸವ ಜರುಗುತ್ತಿದ್ದು ಈ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಮುತ್ಸದ್ದಿಗಳು, ವಿಚಾರವಾದಿಗಳು, ವಿದ್ವಾಂಸರು ಭಾಗವಹಿಸುತಾ ಬಂದಿದ್ದಾರೆ ಈ ಬಾರಿಯು ಸಹ ಭಾರತದ ಕ್ಷೀಪಣಿ ಮಹಿಳೆ ವಿಜ್ಞಾನಿ ಡಾ. ತೇಸಿ ಥಾಮಸ್ ಮತ್ತು ಖ್ಯಾತ ಹಿನ್ನೆಲೆ ಗಾಯಕ ಭಾಗವಹಿಸಿ ಕಾಯಕ ಶ್ರೀ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ತಾಲೂಕಿನ ಎಲ್ಲ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೋಳಿಸಬೇಕೆಂದು ಈರಣ್ಣಾ ಕಡಾಡಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಈಟಿ, ಬಸನಗೌಡ ಪಾಟೀಲ, ಬಸವರಾಜ ಹಿರೇಮಠ, ಮಹಾಂತೇಶ ವಾಲಿ, ವಿವೇಕ ಜತ್ತಿ, ಶ್ರೀಮತಿ ರಾಜೇಶ್ವರಿ ಬೆಟ್ಟದಗೌಡ, ಬೋರಮ್ಮ ಗವಿಮಠ, ನಿರ್ಮಲಾ ಮುನವಳ್ಳಿ ಸೇರಿದಂತೆ ಅನೇಕರು ಇದ್ದರು.