RNI NO. KARKAN/2006/27779|Monday, April 29, 2024
You are here: Home » breaking news » ಬೆಳಗಾವಿ:ಮಾಜಿ ಸಿಎಂ ಧರ್ಮಸಿಂಗ್ ನಿಧನಕ್ಕೆ ಸಚಿವ ಜಾರಕಿಹೊಳಿ ಸಂತಾಪ

ಬೆಳಗಾವಿ:ಮಾಜಿ ಸಿಎಂ ಧರ್ಮಸಿಂಗ್ ನಿಧನಕ್ಕೆ ಸಚಿವ ಜಾರಕಿಹೊಳಿ ಸಂತಾಪ 

ಮಾಜಿ ಸಿಎಂ ಧರ್ಮಸಿಂಗ್ ನಿಧನಕ್ಕೆ ಸಚಿವ ಜಾರಕಿಹೊಳಿ ಸಂತಾಪ

ಬೆಳಗಾವಿ ಜು 27 :  ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ನಿಧನಕ್ಕೆ  ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 ಈ ಕುರಿತು ಪತ್ರಿಕೆ ಯೊಂದಿಗೆ ಮಾತನಾಡಿರುವ ಸಚಿವರು  ಪಕ್ಷದ ಹಿರಿಯ ಧುರೀಣರು , ನಿಷ್ಠ ನಾಯಕರಾಗಿದ್ದ ಧರ್ಮಸಿಂಗ್, ವಿಧಾನಸಭೆ, ಲೋಕಸಭೆಗೆ ಅತ್ಯಾಧಿಕ ಮತಗಳಿಂದ ಆಯ್ಕೆಯಾಗುತ್ತಿದ್ದರು. ಪಕ್ಷದಲ್ಲಿಯ ಎಲ್ಲರನ್ನು ವಿಶ್ವಾಸದಿಂದ ಮತ್ತು ಪ್ರೀತಿಯಿಂದ ಮಾತನಾಡಿಸುತ್ತಿದ್ದ ಧರ್ಮಸಿಂಗ್, ಅಪಾರ ಜನ ಬೆಂಬಲವನ್ನು ಗಳಿಸಿಕೊಂಡಿದ್ದರು ತಮ್ಮ ಸುದೀರ್ಘ 50 ವರ್ಷದ ರಾಜಕಾರಣದಲ್ಲಿ  ಎಂದು ಅವರು ವಿರೋಧಿಗಳನ್ನು ಕಟ್ಟಿಕೊಂಡವರಲ್ಲ. ಅವರೊಬ್ಬ ಅಜಾತ ಶತ್ರು. ಹಿಂದುಳಿದ, ದಿನ ದಲಿತರ, ಶೋಷಿತರ ಪರ ಕಳ್ಳಕಳಿಯುಳ್ಳ ಮಾನವೀಯ ಹೃದಯದ ವ್ಯಕ್ತಿ ಎಂದು ಸಚಿವ ಜಾರಕಿಹೊಳಿ ಅವರು ಶೋಕ ವ್ಯಕ್ತಪಡಿಸಿದ್ದಾರೆ

ಮಾಜಿ ಸಿಎಂ ಧರ್ಮಸಿಂಗ್ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದು:ಖವನ್ನು ಸಹಿಸುವ ಶಕ್ತಿ ಅವರ ಕುಟುಂಬದವರಿಗೆ ದೇವರು ದಯಪಾಲಿಸಲಿ ಎಂದು ಸಚಿವ ರಮೇಶ ಪ್ರಾರ್ಥಿಸಿದ್ದಾರೆ

Related posts: