ಗೋಕಾಕ:ಮಾಜಿ ಸಿ.ಎಂ ಸಿದ್ದರಾಮಯ್ಯ ಅವರಿಂದ 28 ರಂದು ಗೋಕಾಕ ತಾಲೂಕಿನ ಪ್ರವಾಹ ಪಿಡಿತ ಪ್ರದೇಶಗಳ ವಿಕ್ಷಣೆ
ಮಾಜಿ ಸಿ.ಎಂ ಸಿದ್ದರಾಮಯ್ಯ ಅವರಿಂದ 28 ರಂದು ಗೋಕಾಕ ತಾಲೂಕಿನ ಪ್ರವಾಹ ಪಿಡಿತ ಪ್ರದೇಶಗಳ ವಿಕ್ಷಣೆ
ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಅ 26 :
ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೇಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯನವರು ದಿ.28 ರಂದು ಬೆಳಗಾವಿ ಜಿಲ್ಲೆಯ ಪ್ರವಾಹ ಪಿಡಿತ ಪ್ರದೇಶಗಳ ವಿಕ್ಷಣೆ ಮಾಡಲಿದ್ದಾರೆ.
ಬುಧವಾರ ದಿ.28 ರಂದು 10ಗಂಟೆಗೆ ಗೋಕಾಕ, 11ಗಂಟೆಗೆ ಲೋಳಸೂರ ಹಳೆ ಗ್ರಾಮ ಪಂಚಾಯತ ಕಟ್ಟಡದ ಆವರಣ ಹಾಗೂ 12ಗಂಟೆಗೆ ಮೆಳವಂಕಿ ಗ್ರಾಮದ ವಿಠ್ಠಲ ದೇವರ ಗುಡಿ ಆವರಣದಲ್ಲಿ ನೆರೆ ಸಂತ್ರಸ್ತರನ್ನು ಉದ್ಧೇಶಿಸಿ ಮಾತನಾಡಲಿದ್ದಾರೆ.
ನಂತರ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ನೆರೆಯಿಂದ ಹಾನಿಗೊಳಗಾದ ಎಲ್ಲ ಗ್ರಾಮಗಳ ವಿವಿರ ಪಡೆಯಲಿದ್ದಾರೆ ಎಂದು ಅರಭಾವಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರುರಾಜ ಪೂಜೇರ ತಿಳಿಸಿದ್ದಾರೆ.