RNI NO. KARKAN/2006/27779|Saturday, June 14, 2025
You are here: Home » breaking news » ಗೋಕಾಕ:ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಪತಿ : ಹೊಸೂರ (ಕೈತನಾಳ) ಗ್ರಾಮದಲ್ಲಿ ಘಟನೆ

ಗೋಕಾಕ:ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಪತಿ : ಹೊಸೂರ (ಕೈತನಾಳ) ಗ್ರಾಮದಲ್ಲಿ ಘಟನೆ 

ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಪತಿ : ಹೊಸೂರ (ಕೈತನಾಳ) ಗ್ರಾಮದಲ್ಲಿ ಘಟನೆ

 

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ.25

 

 
ಪತ್ನಿಯ ಶೀಲ ಶಂಕಿಸಿದ ಓರ್ವನು ಕಲ್ಲಿನಿಂದ ಹೊಡೆದು ಕೆರೆಗೆ ನೂಕಿದ ಘಟನೆ ತಾಲೂಕಿನ ಹೊಸೂರ(ಕೈತನಾಳ) ಗ್ರಾಮದಲ್ಲಿ ಜರುಗಿದೆ.
ಸಿದ್ಧಾರೂಢ ರಾಮಸಿದ್ದಪ್ಪ ಮಿಡಕನಟ್ಟಿ ಎಂಬುವನು ತನ್ನ ಪತ್ನಿ ನಾಗವ್ವ(25) ಇವಳ ಶೀಲ ಶಂಕಿಸಿ ದಿ.22ರಂದು ಮಧ್ಯಾನ್ಹ ಗ್ರಾಮದ ಬಳಿಯ ಕೆರೆಗೆ ಕರೆದೊಯ್ದು ಕಲ್ಲಿನಿಂದ ತಲೆಗೆ ಹೊಡೆದು ಕೆರೆಗೆ ನೂಕಿ ಕೊಲೆ ಮಾಡಿದ್ದಾನೆ.
ಈ ಬಗ್ಗೆ ಗೋಕಾಕ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಸಿದ್ಧಾರೂಢ ಮಿಡಕನಟ್ಟಿನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Related posts: