ಗೋಕಾಕ:ಪ್ರವಾಹ ಹಿನ್ನೆಲೆ : ನಡುಗಡ್ಡೆಯಲ್ಲಿ ಸಿಲುಕಿದ ಯುವಕ

ಪ್ರವಾಹ ಹಿನ್ನೆಲೆ : ನಡುಗಡ್ಡೆಯಲ್ಲಿ ಸಿಲುಕಿದ ಯುವಕ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 6 :
ನಗರದ ಹೊರವಲಯದಲ್ಲಿರುವ ಯೋಗಿಕೊಳ್ಳ ರಸ್ತೆಯ ಘಟ್ಟಿ ಬಸವಣ್ಣ ದೇವಸ್ಥಾನ ಹತ್ತಿರವಿರುವ ಹೆಜ್ಜೆಗಾರ ಅವರ ತೋಟದ(ನಡುಗಡ್ಡೆ) ಮಾರ್ಕಂಡೇಯ ನದಿಯ ನೀರಿನಿಂದ ಹೊರ ಬರಲಾಗದೆ ಯುವನೊರ್ವ ಸಿಲುಕಿಕೊಂಡು ಸಹಾಯಕ್ಕಾಗಿ ಹಾತೋರೆಯುತ್ತಿದ್ದಾನೆ. ನಗರದ ಮಾಧವಾನಂದ(ನಂದು) ದೊಡಮನಿ(23) ಎಂಬ ಯುವಕನು ಕಳೆದ 4ದಿನಗಳ ಹಿಂದೆ ದನಗಳಿಗೆ ಮೇವುನ್ನು ಹಾಕಲು ಹೋಗಿ ಪ್ರವಾಹ ಹೆಚ್ಚಾಗಿ ತೋಟದ ಮನೆಯಲ್ಲಿ ಉಳಿದಿದ್ದಾನೆ. ಯುವಕನ ಸಂಬಂಧಿಕರು ಯುವಕನ ಹೊರ ತರಲು ತಾಲೂಕಾಡಳಿತ ಮೊರೆ ಹೋಗಿದ್ದಾರೆ.
ಯುವಕರನ್ನು ರಕ್ಷಿಸುವ ಕಾರ್ಯಕ್ಕೆ ತಾಲೂಕಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೋಳ್ಳುತ್ತಿದೆ ಎಂದು ತಿಳಿದು ಬಂದಿದೆ .