ಗೋಕಾಕ:ಕಲಾವಿದರನ್ನು ಹಾಗೂ ಕಲೆಯನ್ನು ಉಳಿಸಿ ಬೆಳೆಸ ಬೇಕಾಗಿದೆ : ಡಾ. ಬೆಣಚಿನಮರಡಿ
ಕಲಾವಿದರನ್ನು ಹಾಗೂ ಕಲೆಯನ್ನು ಉಳಿಸಿ ಬೆಳೆಸ ಬೇಕಾಗಿದೆ : ಡಾ. ಬೆಣಚಿನಮರಡಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 8 :
ಸಾಮಾಜಿಕ ಕಳಕಳಿಯ ಹಾಗೂ ಕಲೆ ಸಂಸ್ಕøತಿಯನ್ನು ಬೆಳೆಸುವಂತ ಕಾರ್ಯಗಳನ್ನು ಪ್ರೋತ್ಸಾಹಿಸುವ ಮೂಲಕ ಹುಟ್ಟು ಹಬ್ಬಗಳನ್ನು ಆಚರಿಸಿದರೆ ಅರ್ಥಪೂರ್ಣವಾಗಿರುತ್ತವೆ ಎಂದು ತಾಲೂಕ ವೈದ್ಯಾಧಿಕಾರಿ ಡಾ|| ಆರ್ ಎಸ್ ಬೆಣಚಿನಮರಡಿ ಹೇಳಿದರು.
ಅವರು, ಶುಕ್ರವಾರದಂದು ರಾತ್ರಿ ನಗರದ ಅಮ್ಮಾಜಿ ನೃತ್ಯ ಶಾಲೆಯಲ್ಲಿ ಸಿರಿಗನ್ನಡ ವೇದಿಕೆ ಮಹಿಳಾ ಘಟಕದವರು ಡಾ|| ಜಿರಗ್ಯಾಳರವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ದಾಸ ಸಾಹಿತ್ಯ ಭಜನೆ ಸ್ಫರ್ಧೆಯನ್ನು ಉದ್ಘಾಟನೆ ನೆರವೆರಿಸಿ ಮಾತನಾಡಿದರು.
ಎಲ್ಲರೂ ಕಲಾ ಪೋಷಕರಾಗಿ ಕಲಾವಿದರನ್ನು ಹಾಗೂ ಕಲೆಯನ್ನು ಉಳಿಸಿ ಬೆಳೆಸ ಬೇಕಾಗಿದೆ. ಡಾ|| ಜಿರಗ್ಯಾಳರವರ ತಮ್ಮ ವೈದ್ಯಕೀಯ ಸೇವೆಯೊಂದಿಗೆ ತಮ್ಮ ಪತ್ನಿ ಅಮ್ಮಾಜಿ ನೃತ್ಯಶಾಲೆಯ ಮುಖ್ಯಸ್ಥೆ ರಜನಿ ಜಿರಗ್ಯಾಳ ರವರಿಗೆ ಪ್ರೋತ್ಸಾಹ ನೀಡುತ್ತಿರುವದರಿಂದ ನಗರದ ಪ್ರತಿಭೆಗಳು ಇಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗೋಕಾಕಿನ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆಂದರು.
ದಾಸ ಸಾಹಿತ್ಯ ಭಜನ ಸ್ಫರ್ಧೆಯಲ್ಲಿ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಕಲಾವಿದರನ್ನು ಹಾಗೂ ಸಾಹಿತಿಗಳನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯ ಉಪಾಧ್ಯಕ್ಷೆ ರಜನಿ ಜಿರಗ್ಯಾಳ, ಡಾ|| ಅಶೋಕ ಜಿರಗ್ಯಾಳ, ಜಾನಪದ ಸಾಹಿತಿ ಸಿ ಕೆ ನಾವಲಗಿ, ಪ್ರೋ ಚಂದ್ರಶೇಖರ ಅಕ್ಕಿ, ಮಹಾಲಿಂಗ ಮಂಗಿ, ಸಂಗೀತಾ ಬನ್ನೂರ, ಈಶ್ವರ ಮಮದಾಪೂರ, ವಿರೇಂದ್ರ ಪತಕಿ, ಶೈಲಾ ಕೊಕ್ಕರಿ, ಜಯಾನಂದ ಮಾದರ, ಜಿ ಕೆ ಕಾಡೇಶ, ಅಪ್ಪುರಾಜ ಗುಡಕನವರ ಸೇರಿದಂತೆ ಇತರರು ಇದ್ದರು.