ಗೋಕಾಕ:ಚಿಂತನೆಯು ಮನುಷ್ಯನಿಗೆ ಚೈತನ್ಯವನ್ನು ಕೊಡುತ್ತದೆ : ಡಾ. ಕಾಡಯ್ಯ ಸ್ವಾಮೀಜಿ

ಚಿಂತನೆಯು ಮನುಷ್ಯನಿಗೆ ಚೈತನ್ಯವನ್ನು ಕೊಡುತ್ತದೆ : ಡಾ. ಕಾಡಯ್ಯ ಸ್ವಾಮೀಜಿ
ಗೋಕಾಕ ಫೆ 7 : ಚಿಂತೆಯು ಮನುಷ್ಯನನ್ನು ಚಿತೆಯ ಕಡೆಗೆ ಕರೆದೊಯ್ದರೆ, ಚಿಂತನೆಯು ಮನುಷ್ಯನಿಗೆ ಚೈತನ್ಯವನ್ನು ಕೊಡುತ್ತದೆ ಎಂದು ಅಥಣಿಯ ಕಾಡಸಿದ್ದೇಶ್ವರ ಮಠದ ಡಾ. ಕಾಡಯ್ಯ ಸ್ವಾಮೀಜಿಯವರು ಹೇಳಿದರು.
ರವಿವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಹಾಗೂ ಲಿಂಗಾಯತ ಮಹಿಳಾ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ 162 ನೆಯ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಭಾರತವು ಒಂದು ಶ್ರೇಷ್ಠ ಚಿಂತಕರನ್ನು ಒಳಗೊಂಡ ದೇಶವಾಗಿದೆ ಅದು ಹಿಂದೆಯೂ, ಇಂದು ಮತ್ತು ಮುಂದೆಯೂ ಸಹ ಜಗತ್ತಿಗೆ ಮಾರ್ಗದರ್ಶನವನ್ನು ನೀಡಬಲ್ಲ ಶ್ರೇಷ್ಠ ಚಿಂತಕರನ್ನು ಹೊಂದಿದೆ ಎಂದು ಹೇಳಿದರು .
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುರುಘರಾಜೇಂದ್ರ ಮಹಾಸ್ವಾಮೀಜಿಗಳು ವಹಿಸಿ ಆರ್ಶಿವರ್ಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವೇಶ್ವರ ಧರ್ಮಪ್ರಚಾರಕ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ವಹಿಸಿದ್ದರು.
ವೇದಿಕೆಯ ಮೇಲೆ ಶಿವಾನಿ ದುಂಡಪ್ಪ ಬಿದರಿ, ಪ್ರಶಾಂತ ಕುರುಬೆಟ್, ಲಿಂಗಾಯತ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ್ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆಯ ಅಧ್ಯಕ್ಷ ಡಾ. ಸಿ. ಕೆ. ನಾವಲಗಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಆರ್. ಎಲ್. ಮಿರ್ಜಿ ನಿರೂಪಿಸಿದರು. ಎಸ್ ಕೆ ಮಠದ ವಂದಿಸಿದರು.