ಮೂಡಲಗಿ:ಮಲ್ಲಿಕಸಾಬ ಚಾಂದಖಾನ ಸಾರ್ವಜನಿಕರಿಗೆ ಶುದ್ಧ ಕುಡಿಯು ನೀರಿನ ಘಟಕಗಳನ್ನು ನಿರ್ಮಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ : ಶಾಸಕ ಬಾಲಚಂದ್ರ
ಮಲ್ಲಿಕಸಾಬ ಚಾಂದಖಾನ ಸಾರ್ವಜನಿಕರಿಗೆ ಶುದ್ಧ ಕುಡಿಯು ನೀರಿನ ಘಟಕಗಳನ್ನು ನಿರ್ಮಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ : ಶಾಸಕ ಬಾಲಚಂದ್ರ
ಮೂಡಲಗಿ ಡಿ 4: ಮಗಳು ಅಗಲಿದ ನೋವಿನ ಮಧ್ಯೆಯೂ ಅವಳು ಚಿರಸ್ಥಾಯಿಯಾಗಿ ಉಳಿಯಲು ಮಲ್ಲಿಕಸಾಬ ಚಾಂದಖಾನ ಅವರು ಪಟ್ಟಣದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯು ನೀರಿನ ಘಟಕಗಳನ್ನು ನಿರ್ಮಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಚಾಂದಖಾನ ಸೇವೆಯನ್ನು ಶ್ಲಾಘಿಸಿದರು.
ಸೋಮವಾರದಂದು ದಿ:ತಸ್ಮೀಯಾ ಮಲಿಕಸಾಬ ಚಾಂದಖಾನ ಇವಳ ಸ್ಮರಣಾರ್ಥ ಪುರಸಭೆ ಮತ್ತು ಭಾಜಿ ಮಾರ್ಕೆಟ ಹತ್ತಿರ ಹೊಸದಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಮೂಡಲಗಿ ಪುರಸಭೆಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಣಕ್ಕಾಗಿ ಹೊಡೆದಾಡುತ್ತಾ ವೈಶ್ಯಮ್ಯ ಕಟ್ಟಿಕೊಂಡು ಸಂಬಂದಗಳನ್ನು ಮುರಿದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಚಾಂದಖಾನ ತನ್ನ ಮಗಳಿಗೆ ಬಂದ ಪರಿಹಾರ ಧನದಲ್ಲಿ ಒಂದು ರೂಪಾಯಿ ಬಳಸಿಕೊಳ್ಳದೆ ಎಲ್ಲ ಹಣವನ್ನು ಸಾರ್ವಜನಿಕರಿಗಾಗಿ ಶುದ್ಧ ಕುಡಿಯು ನೀರಿನ ಘಟಕಗಳನ್ನು ಸ್ಥಾಪಿಸಿ ಅದನ್ನು ಪುರಸಭೆಗೆ ಹಸ್ತಾಂತರಿಸಿದ್ದಾರೆ. ಶ್ರೀಮಂತರು ತಾವು ಗಳಿಸಿರುವ ಸಂಪತ್ತಿನಲ್ಲಿ ಸ್ವಲ್ಲವನ್ನಾದರೂ ನಿರ್ಗತಿಕರಿಗೆ ಸಹಾಯ ಹಸ್ತ ಚಾಚಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ತಲಾ 3.80 ಲಕ್ಷ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪುರಸಭೆಯಿಂದ 2014-15 ನೇ ಸಾಲಿನ ಎಸ್.ಎಫ್.ಸಿ ಘನ ತ್ಯಾಜ್ಯ ವಸ್ತು ನಿರ್ವಹಣಾ ಅನುದಾನದಲ್ಲಿ ಮನೆ ಮನೆಗೆ ಹಂಚ್ಚಲು ಹಸಿ ಕಸ ಸಂಗ್ರಹಿಸಲು 10 ಲೀಟರ ಬಿನ್ಸ್ಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿತರಿಸಿದರು.
ಸಾನಿಧ್ಯವನ್ನು ಶ್ರೀ ಶ್ರೀಪಾದಬೋಧ ಸ್ವಾಮಿಜಿ ಅವರು ವಹಿಸಿ ಚಾಂದಖಾನ ಅವರ ಸಮಾಜ ಮುಖಿ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ದಾನಿ ಮಲ್ಲಿಕಸಾಬ ಚಾಂದಖಾನ ಅವರನ್ನು ಶ್ರೀಗಳು ಮತ್ತು ಶಾಸಕರು ಸತ್ಕರಿಸಿ ಗೌರವಿಸಿದರು.
ಪುರಸಭೆ ಅಧ್ಯಕ್ಷೆ ಕಮಲವ್ವಾ ಹಳಬರ, ಉಪಾಧ್ಯಕ್ಷ ರವಿ ಸೋನವಾಲ್ಕರ, ಮುಖಂಡರಾದ ವೀರಣ್ಣಾ ಹೊಸುರ, ನಿಂಗಪ್ಪ ಪಿರೋಜಿ, ಜಯಾನಂದ ಪಾಟೀಲ, ಅಜೀಜ ಡಾಂಗೆ, ಗಿರೀಶ ಢವಳೇಶ್ವರ, ಬಸಪ್ರಭು ನಿಡಗುಂದಿ, ರುದ್ರಪ್ಪ ವಾಲಿ, ಪ್ರಭು ಬಂಗೆನ್ನವರ, ರಾಜು ನಾಶಿ, ಮಲ್ಲಿಕ ಕಳಿಮನ್ನಿ, ಪುರಸಭೆ ಸದಸ್ಯರಾದ ರವಿ ಸಣ್ಣಕ್ಕಿ, ರಾಮಣ್ಣಾ ಹಂದಿಗುಂದ, ಡಾ: ಎಸ್.ಎಸ್.ಪಾಟೀಲ, ಮಲ್ಲು ಢವಳೇಶ್ವರ, ರಮೇಶ ಸಣ್ಣಕ್ಕಿ, ಸಂತೋಷ ಸೋನವಾಲ್ಕರ, ರವಿ ನೇಸೂರ, ಮರೆಪ್ಪ ಮರೆಪ್ಪಗೋಳ, ಹುಸೇನಸಾಬ ಶೇಖ, ಶಾಬವ್ವಾ ಪಾಟೀಲ, ಪ್ರಕಾಶ ಈರಪ್ಪನ್ನವರ, ಈರಣ್ಣಾ ಬನ್ನೂರ, ಶ್ರೀಶೈಲ ಗಾಣಿಗೇರ ಮತ್ತು ಮುಂತಾದವರು ಉಪಸ್ಥಿತರಿದ್ದರು.