RNI NO. KARKAN/2006/27779|Wednesday, August 26, 2026
You are here: Home » breaking news » ಗೋಕಾಕ:ಎಮ್-ಸ್ಯಾಂಡ ಅಸೋಸಿಯೇಶನ್ ಜಿಲ್ಲಾಧ್ಯಕ್ಷರಾಗಿ ಚಂದ್ರಶೇಖರ ಕೊಣ್ಣೂರ ಆಯ್ಕೆ

ಗೋಕಾಕ:ಎಮ್-ಸ್ಯಾಂಡ ಅಸೋಸಿಯೇಶನ್ ಜಿಲ್ಲಾಧ್ಯಕ್ಷರಾಗಿ ಚಂದ್ರಶೇಖರ ಕೊಣ್ಣೂರ ಆಯ್ಕೆ 

ಎಮ್-ಸ್ಯಾಂಡ ಅಸೋಸಿಯೇಶನ್ ಜಿಲ್ಲಾಧ್ಯಕ್ಷರಾಗಿ ಚಂದ್ರಶೇಖರ ಕೊಣ್ಣೂರ ಆಯ್ಕೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ.21 :

 

ಕರ್ನಾಟಕ ಎಮ್-ಸ್ಯಾಂಡ ಅಸೋಸಿಯೇಶನ್ ಕ್ಷೇಮಾಭಿವೃದ್ಧಿ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಚಂದ್ರಶೇಖರ ಕೊಣ್ಣೂರ ಅವರು ಆಯ್ಕೆಗೊಂಡಿದ್ದಾರೆ.
ಇತ್ತೀಚೆಗೆ ಸವದತ್ತಿ ತಾಲೂಕಿನ ಯರಗಟ್ಟಿ ಪಟ್ಟಣದ ಖಾಸಗಿ ಹಾಟೇಲ್‍ದಲ್ಲಿ ನಡೆದ ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾಗಿ ಅವರನ್ನು ಆಯ್ಕೆ ಮಾಡಲಾಗಿದ್ದು ಉಪಾಧ್ಯಕ್ಷರಾಗಿ ಸಂಜುಗೌಡ ಕುಪ್ಪಸಗೌಡರ, ಕಾರ್ಯದರ್ಶಿಯಾಗಿ ಪಾಂಡುರಂಗ ರಡ್ಡಿ, ಖಜಾಂಚಿಯಾಗಿ ಶ್ರೀಶೈಲ ವರ್ಜಿ ಅವರು ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಪ್ರಮೋದ ರಡ್ಡಿ, ರಂಗನಾಥ ಭಜಂತ್ರಿ, ನವೀನಕುಮಾರ ಮಗದುಮ್ಮ, ಸುರೇಶ ಸಂಗೊಳ್ಳಿ, ಗೋಪಾಲ ಮಗದುಮ್ಮ, ಟಿ.ಸಿ.ಬಂಡಿವಡ್ಡರ, ಕಿಶೋರಕುಮಾರ ರಾಟಿ, ಪಿ.ಜಿ ಚೌಗುಲೆ,ಎಚ್.ಜಿ.ಗಾಡಿವಡ್ಡರ ಸೇರಿದಂತೆ ಅನೇಕರು ಇದ್ದರು.

Related posts: