ಗೋಕಾಕ:ಮಾನವಕೂಲಕ್ಕಾಗಿ ದೊಡ್ಡ ತ್ಯಾಗಮಾಡಿದಂತವರು ಆದಿಕವಿ ಮಹರ್ಷಿ ವಾಲ್ಮೀಕಿ : ಸಚಿವ ರಮೇಶ ಜಾರಕಿಹೊಳಿ
ಮಾನವಕೂಲಕ್ಕಾಗಿ ದೊಡ್ಡ ತ್ಯಾಗಮಾಡಿದಂತವರು ಆದಿಕವಿ ಮಹರ್ಷಿ ವಾಲ್ಮೀಕಿ : ಸಚಿವ ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 31 :
ಮಾನವಕೂಲಕ್ಕಾಗಿ ದೊಡ್ಡ ತ್ಯಾಗಮಾಡಿದಂತ ಆದಿಕವಿ ಮಹರ್ಷಿ ವಾಲ್ಮೀಕಿ ತತ್ವ ಆದರ್ಶಗಳನ್ನು ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಜೀವನವನ್ನು ಪಾವನಗೋಳಿಸಿಕೊಳ್ಳಬೇಕು ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು
ಪ್ರತಿ ವರ್ಷ ವಿಜಂಭ್ರಣೆಯಿಂದ ಆಚರಣೆ ಮಾಡುತ್ತಿದ್ದ ಈ ಜಯಂತಿಯನ್ನು ಸರಕಾರದ ಮಾರ್ಗಸೂಚಿಯಂತೆ ಸರಳವಾಗಿ ಆಚರಣೆ ಮಾಡಲಾಗಿದ್ದು,ಮನುಷ್ಯ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಇದ್ದರೆ, ಅವನ ಮನಸ್ಸು ಮಹರ್ಷಿ ವಾಲ್ಮೀಕಿಯಂತೆ ಪರಿವರ್ತನೆಯಾಗಬೇಕು
ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯರುಗಳಾದ ಟಿ.ಆರ್.ಕಾಗಲ, ಮಡೆಪ್ಪ ತೋಳಿನವರ, ಮುಖಂಡರುಗಳಾದ ಸುರೇಶ ಪಾಟೀಲ , ಭೀಮಶಿ ಭರಮನ್ನವರ, ಎಸ್.ವ್ಹಿ ದೇಮಶೆಟ್ಟಿ , ಜಯಾನಂದ ಹುಣಚ್ಯಾಳಿ, ಅಬ್ದುಲ್ ರಹೇಮಾನ ದೇಸಾಯಿ, ಮಹ್ಮದ ಶಫೀ ಜಮಾದಾರ, ಬಿಜೆಪಿ ನಗರ ಘಟಕದ ಪದಾಧಿಕಾರಿಗಳು, ನಗರಸಭೆ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು