RNI NO. KARKAN/2006/27779|Thursday, April 30, 2026
You are here: Home » breaking news » ಖಾನಾಪುರ:ಸಾಲಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ : ಖಾನಾಪುರಿನ ದೇವಲತ್ತಿ ಗ್ರಾಮದಲ್ಲಿ ಘಟನೆ

ಖಾನಾಪುರ:ಸಾಲಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ : ಖಾನಾಪುರಿನ ದೇವಲತ್ತಿ ಗ್ರಾಮದಲ್ಲಿ ಘಟನೆ 

ಸಾಲಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ : ಖಾನಾಪುರಿನ ದೇವಲತ್ತಿ ಗ್ರಾಮದಲ್ಲಿ ಘಟನೆ
ಖಾನಾಪುರ ಜು 17: ಸಾಲಬಾದೆ ತಾಳಲಾರದೆ ರೈತನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದೆ.

ಖಾನಾಪೂರ ತಾಲೂಕಿನ ದೇವಲತ್ತಿ ಗ್ರಾಮದ ಬಸವರಾಜ್ ದೇಶನೂರ(44) ಆತ್ಮಹತ್ಯೆ ಮಾಡಿಕೊಂಡ ರೈತ. ಇಲ್ಲಿನ ಜಾಂಬೋಟಿ ಸೇತುವೆ ಕೆಳಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈತ ವಿವಿಧ ಬ್ಯಾಂಕುಗಳಲ್ಲಿ ಹತ್ತು ಲಕ್ಷ ಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: