RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ;ಸತೀಶ ಜಾರಕಿಹೊಳಿ ತೆಲೆ ಕೆಟ್ಟಿದೆ , ಇಬ್ಬರು ಸಹೋದರರನ್ನು ಹಾಳು ಮಾಡಿದ್ದಾರೆ : ರೆಬಲ್ ಶಾಸಕ ರಮೇಶ ಗಂಭೀರ ಆರೋಪ

ಗೋಕಾಕ;ಸತೀಶ ಜಾರಕಿಹೊಳಿ ತೆಲೆ ಕೆಟ್ಟಿದೆ , ಇಬ್ಬರು ಸಹೋದರರನ್ನು ಹಾಳು ಮಾಡಿದ್ದಾರೆ : ರೆಬಲ್ ಶಾಸಕ ರಮೇಶ ಗಂಭೀರ ಆರೋಪ 

ಸತೀಶ ಜಾರಕಿಹೊಳಿ ತೆಲೆ ಕೆಟ್ಟಿದೆ , ಇಬ್ಬರು ಸಹೋದರರನ್ನು ಹಾಳು ಮಾಡಿದ್ದಾರೆ : ರೆಬಲ್ ಶಾಸಕ ರಮೇಶ ಗಂಭೀರ ಆರೋಪ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 23 :

 
ಸಚಿವ ಸತೀಶ ಜಾರಕಿಹೊಳಿ ಅವರ ತೆಲೆಕೆಟ್ಟಿದೆ ಈಗಾಗಲೇ ಅವರು ಇಬ್ಬರು ಸಹೋದರರನ್ನು ಹಾಳು ಮಾಡಿದ್ದಾರೆ ಎಂದು ಮಾಜಿ ಸಚಿವ ಗೋಕಾಕಿನ ರೆಬಲ್ ಶಾಸಕ ರಮೇಶ ಜಾರಕಿಹೊಳಿ ಆರೋಪಿಸಿದ್ದಾರೆ
ಮಂಗಳವಾರದಂದು ಮುಂಜಾನೆ ನಗರದ ನ್ಯೂ ಇಂಗ್ಲಿಷ್ ಶಾಲೆಯ ಮತಗಟ್ಟೆ ಸಂಖ್ಯೆ 136 ರಲ್ಲಿ ತಮ್ಮ ಹಕ್ಕು ಚಲಾಯಿಸಿ ಪತ್ರಕರ್ತರೊಂದಿಗೆ ಮಾತನಾಡಿದರು

ನಾನು ಇನ್ನೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದನೆ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲಾ , ರಾಜೀನಾಮೆ ನೀಡಿದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ . ಒಬ್ಬ ಶಾಸಕನಾಗಿ , ಸಚಿವನಾಗಿ ಜವಾಬ್ದಾರಿಯತ್ತ ಸ್ಥಾನದಲ್ಲಿರುವ ಸತೀಶ ಜಾರಕಿಹೊಳಿ ಅವರು ಹತಾಶೆಗೊಂಡು ತೆಲೆಕಟ್ಟವರ ಹಾಗೇ ಮಾತನಾಡುತ್ತಿರುವದು ಅವರ ಘನತೆಗೆ ಶೋಭೆ ತರುವಂತದಲ್ಲ ಎಂದು ಅವರು ನಾನು ಕಳೆದ ಐದು ಅವಧಿಯಿಂದ ಶಾಸಕನಾಗಿ , ಸಚಿವನಾಗಿ ಕೆಲಸ ಮಾಡಿದ್ದೇನೆ ನನಗೂ ಜವಾಬ್ದಾರಿ ಇದೆ ಪಕ್ಷದಲ್ಲಿ ಇದು ಬೇರೆಯವರ ಪ್ರಚಾರ ಮಾಡುವುದಿಲ್ಲ , ಪಕ್ಷ ವಿರೋಧಿ ಕಾರ್ಯ ಮಾಡಿದರೆ ರಾಜೀನಾಮೆ ನೀಡಿಯೇ ಬಹಿರಂಗವಾಗಿ ಕೆಲಸ ಮಾಡುತ್ತೇನೆ ಎಂದು ಖಾರವಾಗಿ ಹೇಳಿದರು .

ಲಖನ್ ಜಾರಕಿಹೊಳಿ ಶಾಸಕನಾದರೆ ಮೊದಲು ಖುಷಿ ಪಡುವ ಮನುಷ್ಯ ನಾನೇ : ಕಿರಿಯ ಸಹೋದರ ಲಖನ್ ಶಾಸಕನಾಗುತ್ತಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿ ಶಾಸಕ ರಮೇಶ ಲಖನ್ ಜಾರಕಿಹೊಳಿ ಶಾಸಕನಾದರೆ ಮೊದಲು ಖುಷಿ ಪಡುವವನ್ನು ನಾನೇ , ಅವರು ಯಾವ ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೆ ಎಂಬುದನ್ನು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೆನೆ . ನನಗೆ ಗೋಕಾಕ ಕ್ಷೇತ್ರ ಒಂದೇ ಇಲ್ಲ ರಾಜ್ಯದ ಯಾವ ಕ್ಷೇತ್ರದಿಂದಲೂ ನಾನು ಚುನಾವಣೆ ಎದುರಿಸತ್ತೇನೆಂದು ಹೇಳಿದರು.

ಇಲ್ಲಿಯವರೆಗೆ ನನ್ನನ್ನು ಯಾರು ಸಂರ್ಪಕಿಸಿಲ್ಲಾ :

ಅತೃಪ್ತ ಶಮನಕ್ಕೆ ರಾಜ್ಯ ನಾಯಕರು ಪ್ರಯತ್ನಿಸಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸದ ಅವರು ಇಲ್ಲಿಯ ವರೆಗೆ ರಾಜ್ಯ ಕಾಂಗ್ರೆಸ್ ನಾಯಕರು ನನನ್ನು ಸಂರ್ಪಕಿಸಿಲ್ಲಾ ಎಂದ ಶಾಸಕರು ಮೊನ್ನೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ರಮೇಶ ಕತ್ತಿ ಅವರಿಗೆ ಟಿಕೆಟ್ ತಪ್ಪಿ ಬಂಡಾಯ ಸಾರುವ ಸಂದರ್ಭದಲ್ಲಿ ಅವರ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಕೆವಲ ಐದೇ ತಾಸಿನಲ್ಲಿ ಬಂದು ಬಂಡಾಯ ಶಮನ ಮಾಡಿ ಪಕ್ಪದ ಪರವಾಗಿ ಕೆಲಸ ಮಾಡಲು ಸೂಚಿಸದ್ದಾರೆ ಆದರೆ ಇನ್ನೂ ವರೆಗೂ ನನ್ನನ್ನು ನಮ್ಮ ನಾಯಕರು ಸಂರ್ಪಕಿಸಲ್ಲಾ ಎಂದು ಯಡಿಯೂರಪ್ಪ ಅವರ ನಡೆಯನ್ನು ಶ್ಲಾಘಿಸಿದರು . ನನಗೆ ಪಕ್ಷದಿಂದ ತುಂಬಾ ಅನ್ಯಾಯವಾಗಿದೆ 1999 ರಿಂದ ಈಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಸಂಸ್ಕೃತಿ ನೆಲೆ ಉರಿದೆ ಈಗ ಅದು ಕೈ ಮೀರಿ ಹೋಗಿದೆ ಎಂದು ಮಾಜಿ ಸಚಿವ ರಮೇಶ್ ಹೇಳಿದರು .

 

ಇದಕ್ಕೂ ಮುಂಚೆ ತನ್ನ ಕಿರಿಯ ಸುಪುತ್ರ ಅಮರನಾಥ್ ಜಾರಕಿಹೊಳಿ ಅವರೊಂದಿಗೆ ಬೈಕ್ ಮೇಲೆ ಬಂದ ಶಾಸಕರು ತಮ್ಮ ಹಕ್ಕು ಚಲಾಯಿಸಿ ಎಲ್ಲರ ಗಮನ ಸೆಳೆದರು .

 

Related posts: