ಗೋಕಾಕ:ಪ್ರಕೃತಿ ವಿಕೋಪಗಳು ಮಾನವನಿಗೆ ಬದುಕುವ ಕಲೆಯನ್ನು ಕಲಿಸುತ್ತವೆ : ಡಾ|| ಪುರುಷೊತ್ತಮಾನಂದಪುರಿ ಮಹಾಸ್ವಾಮಿಜಿ

ಪ್ರಕೃತಿ ವಿಕೋಪಗಳು ಮಾನವನಿಗೆ ಬದುಕುವ ಕಲೆಯನ್ನು ಕಲಿಸುತ್ತವೆ : ಡಾ|| ಪುರುಷೊತ್ತಮಾನಂದಪುರಿ ಮಹಾಸ್ವಾಮಿಜಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 17 :
ಜಲಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೊಸದುರ್ಗದ ಚಿನ್ಮೂಲಾದ್ರಿ ಶ್ರೀ ಭಗೀರಥ ಪೀಠದ ಡಾ|| ಪುರುಷೊತ್ತಮಾನಂದಪುರಿ ಮಹಾಸ್ವಾಮಿಜಿ ಹೇಳಿದರು.
ಶನಿವಾರದಂದು ನಗರದ ಉಪ್ಪಾರ ಗಲ್ಲಿಯಲ್ಲಿ ನೆರೆ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಜಗತ್ತು ವಿಜ್ಞಾನದಲ್ಲಿ ಏಷ್ಟೂ ಮುಂದುವರೆದರೂ ಪ್ರಕೃತಿ ವಿಕೋಪದಿಂದ ಅನಾಹುತಗಳು ಆಗುವುದು ಸಹಜ ಕ್ರೀಯೆಯಾಗಿದ್ದು, ಆದ ಹಾನಿಗೆ ಹೆದರದೇ ಧೈರ್ಯದಿಂದ ಎದುರಿಸಬೇಕೆಂದು ತಿಳಿಸಿದರು.
ಪ್ರಕೃತಿ ವಿಕೋಪಗಳು ಮಾನವನಿಗೆ ಬದುಕುವ ಕಲೆಯನ್ನು ಕಲಿಸುತ್ತವೆ. ಜಲ ಪ್ರಳಯದಲ್ಲಿ ಎಲ್ಲವನ್ನು ಕಳೆದುಕೊಂಡರೂ ಸಹ ಮನುಷ್ಯತ್ವ ಮತ್ತು ಮಾನವೀಯ ಮೌಲ್ಯಗಳು ಇಂದಿಗೂ ಸ್ವತ್ವ ಭರಿತವಾಗಿವೆ. ನಿಮಗೆ ನೆರವು ನೀಡಲು ಇಡಿ ಮನುಕುಲವೇ ಮುಂದೆ ಬರುತ್ತಿದೆ. ನಿಮ್ಮ ಬದುಕನ್ನು ಹೊಸದಾಗಿ ಕಟ್ಟಲು ನಾವು ಜೋಳಿಗೆಯನ್ನು ಹಿಡಿದು ಭಕ್ತಾಧಿಗಳು ಸಹಕಾರದೊಂದಿಗೆ ಶ್ರಮಿಸಲು ಸಿದ್ದವಿರುದಾಗಿ ತಿಳಿಸಿದ ಅವರು ಶಾಶ್ವತ ಪರಿಹಾರಕ್ಕಾಗಿ ಸರ್ಕಾರಗಳ ಗಮನ ಸೆಳೆಯುದಾಗಿ ತಿಳಿಸಿ ಯಾವುದಕ್ಕೂ ಧೈರ್ಯವಾಗಿರಿ ಎಂದು ಸಂತ್ರಸ್ತರಿಗೆ ಧೈರ್ಯವನ್ನು ತುಂಬಿದರು.
ಇದಕ್ಕೂ ಮೊದಲು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶ್ರೀ ಭಗೀರಥ ಉಪ್ಪಾರ ಸಮಾಜದ ಜನತೆಯ ಸಹಯೋಗದಲ್ಲಿ ಗೋಕಾಕ ತಾಲೂಕಿನ ಲೋಳಸೂರ, ನಲ್ಲಾನಟ್ಟಿ, ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ನೆರೆ ಸಂತ್ರಸ್ತರಿಗೆ ಆಹಾರ ಧಾನ್ಯಗಳನ್ನು, ಬಟ್ಟೆ, ಮಕ್ಕಳಿಗೆ ನೋಟ್ಬುಕ್ ಹಾಗೂ ಪೆನ್ನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಉಪ್ಪಾರ, ವೆಂಕಟೇಶ, ಬಸವರಾಜ, ಕೋಟ್ರೇಶ, ರಾಜೇಂದ್ರ, ಮೂರ್ತಿ, ಮಂಜುನಾಥ, ಅಡಿವೆಪ್ಪ ಕಿತ್ತೂರ, ರಾಮಣ್ಣ ತೋಳಿ, ಭರಮಣ್ಣ ಉಪ್ಪಾರ, ಮಲ್ಲಿಕಾರ್ಜುನ ಚೌಕಶಿ, ಶಂಬುಲಿಂಗ ಮುಕ್ಕಣ್ಣವರ, ಶಂಕರ ಧರೆನ್ನವರ, ಎಸ್.ಎಮ್.ಹತ್ತಿಕಟಗಿ, ಪರಸಪ್ಪ ಚೂನನ್ನವರ, ಶಿವಪುತ್ರ ಜಕಬಾಳ, ನಾಗರತ್ನ ದಂಡಿನ ಸೇರಿದಂತೆ ಅನೇಕರು ಇದ್ದರು.