ಖಾನಾಪುರ:ಕಬ್ಬಿನ ಬಾಕಿ ಬಿಲ್ಲು ಕೊಡಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ
ಕಬ್ಬಿನ ಬಾಕಿ ಬಿಲ್ಲು ಕೊಡಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ
ನಮ್ಮ ಬೆಳಗಾವಿ ಸುದ್ದಿ , ಖಾನಾಪುರ ಮಾ 15:
ಸರಕಾರಿ ಆದೇಶದ ಪ್ರಕಾರ 14ದಿನಕ್ಕೋಮ್ಮೆ ಕಬ್ಬಿನ ಬಿಲ್ಲನ್ನು ನೀಡಬೇಕು. ಆದರೆ ಖಾನಾಪುರದ ಲೈಲಾ ಶುಗರ ಇದರ ತದ್ವಿರುದ್ದವಾಗಿ ನಡೆದುಕೊಂಡಿದೆ ಏಕೆಂದರೆ ಈ ವರ್ಷದಲ್ಲಿ ಕಬ್ಬು ಕಳುಹಿಸಿದ ರೈತರ ಬಿಲ್ಲನ್ನು ನೀಡದೆ ಸತಾಯಿಸುತ್ತಿದೆ ಎಂದು ಆಗ್ರಹಿಸಿ ಲಿಂಗನಮಠ ಹಾಗೂ ಸುತ್ತಮುತ್ತಲಿನ ರೈತರು ತಹಶಿಲ್ದಾರ ಕಚೇರಿ ಎದುರುಗಡೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಪಟ್ಟಣದ ಶಿವಸ್ಮಾರಕ ವೃತ್ತದಿಂದ ಹಲಗೆ ಬಾರಿಸುವುದರ ಮೂಲಕ ತಹಶಿಲ್ದಾರ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಲೈಲಾ ಶುಗರ ಕಬ್ಬಿನ ಬಾಕಿ ಬಿಲ್ಲು ಕೊಡಿಸುವಂತೆ ತಹಶಿಲ್ದಾರ ವಿದ್ಯಾಧರ ಗುಳಗುಳಿ ಅವರಿಗೆ ಮನವಿ ಸಲ್ಲಿಸಿದರು.
ಪ್ರಸಕ್ತ ಈ ವರ್ಷದ ಹಂಗಾಮಿನಿಲ್ಲಿ ಲೈಲಾ ಶುಗರ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಡಿಸೆಂಬರ 1ರಿಂದ 7ರವರೆಗೆ ಅಂದರೆ ಕೇವಲ 7ದಿನಗಳ ಮಾತ್ರ ಬಿಲ್ಲನ್ನು ನೀಡಿ, ಉಳಿದ ಬಿಲ್ಲನ್ನು ಬಾಕಿ ಉಳಿಸಿಕೊಂಡು ಸತಾಯಿಸುತ್ತಿದೆ. ಈ ವರ್ಷ ಕಾರ್ಖಾನೆ ಆರಂಬಿಸುವ ಮುನ್ನ “ಮಹಾಲಕ್ಷ್ಮೀ ಗ್ರುಪ್ ಸಂಸ್ಥಾಪಕ ವಿಠ್ಠಲ ಹಲಗೇಕರ” ಕಾರ್ಖಾನೆಯನ್ನು ಮುನ್ನೆಡೆಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದರು. ಅದೇ ಪ್ರಕಾರ ಮಹಾಲಕ್ಷ್ಮೀ ಗ್ರುಪ್ ಸಿಬ್ಬಂದಿಗಳು ಖಾನಾಪುರದ ನಮ್ಮ ಕಾರ್ಖಾನೆಗೆ ಕಬ್ಬನ್ನು ಕಳುಹಿಸಿ ನಿಮಗೆ ವಾರಕ್ಕೊಮ್ಮೆ ಕಬ್ಬಿನ ಬಿಲ್ಲನ್ನು ನೀಡುತ್ತೆವೆಂದು ಹೇಳಿ ಈಗ ಬಿಲ್ಲನ್ನು ನೀಡದೆ ಕಬ್ಬು ಬೆಳಖೆಗಾರರಿಗೆ ಮೋಸ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ತದನಂತರ ಕಬ್ಬಿನ ಬಾಕಿ ಬಿಲ್ಲನ್ನು ನೀಡಿ ಎಂದು ಕೇಳಿದರೆ ಸಕ್ಕರೆ ಮಾರಲು ಟೆಂಡರ ಕರೆದಿದ್ದೆವೆ, ಇನ್ನೂವರೆಗೆ ಸಕ್ಕರೆ ಮಾರಾಟ ಆಗಿಲ್ಲ ಮಾರಾಟ ಆದ ನಂತರ ಬಿಲ್ಲನ್ನು ಕೊಡತಿವಿ ಎಂದು ಹಾರಿಕೆ ಉತ್ತರ ನೀಡಿ ಸತಾಯಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ
ಈ ಸಂದರ್ಭದಲ್ಲಿ ಪಾಂಡುರಂಗ ಮಿಟಗಾರ, ರಾಜು ರಪಾಟಿ, ಬಸವರಾಜ ಮುಗಳಿಹಾಳ, ಬಸಲಿಂಗಪ್ಪ ಬಿಜಾಪುರ, ಯಲ್ಲಾರಿ ನಿಲಜಕರ, ಮಾರುತಿ ಸತ್ತೆನ್ನವರ, ಸಂಜು ಪಾರಿಶ್ವಾಡ, ಶಿವರಾಜ ಬಿಜಾಪೂರ, ನಾಗನಗೌಡ ಪಾಟೀಲ, ಕಲ್ಲಪ್ಪ ಸಂಗೊಳ್ಳಿ ಮತ್ತಿತರರು ಇದ್ದರು.