RNI NO. KARKAN/2006/27779|Monday, June 16, 2025
You are here: Home » breaking news » ಖಾನಾಪುರ: ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರೇ ಸ್ಟ್ರಾಂಗು

ಖಾನಾಪುರ: ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರೇ ಸ್ಟ್ರಾಂಗು 

ಖಾನಾಪೂರ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರೇ ಸ್ಟ್ರಾಂಗು

*ವರದಿ: ಕಾಶೀಮ

ಹೌದು ಇಂದು ವಿಶ್ವ ಮಹಿಳಾ ದಿನಾಚರಣೆ ನಿಮಿತ್ಯ ಜಗತ್ತಿನಾದ್ಯಂತ ಈ ದಿನ ವಿಶೇಷವಾಗಿ ಆಚರಿಸುತ್ತಾರೆ. ಅದರಲ್ಲಿ ಗಡಿಭಾಗ ಮತ್ತು ತುಂಬಾ ಹಿಂದುಳಿದ ತಾಲೂಕಾ ಎಂದು ಗುರುತಿಸಲ್ಪಡುವ ಖಾನಾಪೂರ ತಾಲೂಕ ಈಗ ಮಹಿಳೆಯರಿಂದ ಅಭಿವೃದ್ಧಿ ಮಾರ್ಗದತ್ತ ಸಾಗಿದೆ. ಹೌದು ಖಾನಾಪೂರ ತಾಲೂಕಿನ ಸರಕಾರಿ ಇಲಾಖೆಗಳು ಸೇರಿ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರಾಗಿಯೂ ಮಹಿಳೆಯರು ಪುರುಷರಿಗೆ ಸಮಾನವಾಗಿ ನಿಂತು ಸ್ತ್ರೀ ಪ್ರಾಬಲ್ಯದಿಂದ ನಾವೆನ್ನು ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಡಾ.ಅಂಜಲಿ ನಿಂಬಾಳ್ಕರ್ ಅವರು ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗಿ, ಮೊಟ್ಟ ಮೊದಲ ಮಹಿಳಾ ಶಾಸಕಿಯಾಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅವರಂತೆಯೇ ರಾಜಕೀಯ ಕ್ಷೇತ್ರದಲ್ಲಿ ಬೆಳಗಾವಿ ಜಿಲ್ಲಾ ಜೆಡಿಎಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಯಾಗಿರುವ ಖಾನಾಪೂರ ಪಟ್ಟಣದ ನಿವಾಸಿ *ಮೇಘಾ ಕುಂದರಗಿ* ಅವರು ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಇತ್ತೀಚೆಗೆ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಸತತ ಐದನೇಯ ಬಾರಿ ಜಯಸಾಧಿಸುವ ಮೂಲಕ ಪುರುಷರಿಗಿಂತ ಮಹಿಳೆಯರು ಕಡಿಮೆಯಿಲ್ಲ ಎಂದು ತೋರಿಸಿಕೊಡುವುದರ ಜೋತೆಗೆ ಒಂದು ಬಾರಿ ಪ.ಪಂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಅದರಂತೆ ಭಾರತೀಯ ಜನತಾಪಕ್ಷದ ಮುಖಂಡರಾದ ತಾಲೂಕಿನ ಜಾಂಬೋಟಿ ಗ್ರಾಮದ *ಧನಶ್ರೀ ಸರ್ ದೇಸಾಯಿ* ಅವರು ಕೂಡಾ ಒಂದು ಬಾರಿ ತಾಲೂಕಾಪಂಚಾಯತಿ ಸದಸ್ಯೆಯಾಗಿ ಸೇವೆ ಸಲ್ಲಿಸಿ, ಹಾಲಿ ರಾಜ್ಯ ಮಹಿಳಾ ಕಾರ್ಯಕಾರಿಣಿ ಸದಸ್ಯೆಯಾಗಿರುವ ಧನಶ್ರೀ ತಾಲೂಕಿನ ರಾಜಕಾರಣದ ಜೊತೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇನ್ನು ಕ್ರೀಡಾ ಕ್ಷೇತ್ರದಲ್ಲಿ ಕಕ್ಕೇರಿ ಗ್ರಾಮದ ಮಹಿಳಾ ಯುವಕುಸ್ತಿಪಟ್ಟು *ಲಕ್ಷ್ಮೀ ಬಸವರಾಜ ರೆಡೇಕರ* ೫೦ಕ್ಕೂ ಅಧಿಕ ಬಾರಿ ರಾಜ್ಯ ಮಟ್ಟ, ೨೦ಕ್ಕೂ ಅಧಿಕ ಬಾರಿ ರಾಷ್ಟ್ರಮಟ್ಟದಲ್ಲಿ ಕುಸ್ತಿ ಸ್ಫರ್ಧೆಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಕೊರಲಿಗೆರಿಸಿಕೊಂಡು ತಾಲೂಕಿನ ಹೆಸರು ಅಜರಾಮರಗೋಳಿಸಿದ್ದಾರೆ. ಹೀಗೆ ತಾಲೂಕಿನ ವಿವಿಧ ಇಲಾಖೆಯಲ್ಲಿಯೂ ನಾವೆನೂ ಕಮ್ಮಿಯಿಲ್ಲ ಎನ್ನುವ ಹಾಗೇ *ಶಿಕ್ಷಣ ಕ್ಷೇತ್ರದ ಬಿಇಓ ಉಮಾ ಬರಗೇರ* ಒಂದು ವರ್ಷ ದಿಂದ ಶಿಕ್ಷಣ ಇಲಾಖೆಯ ಮುಖ್ಯಸ್ಥೆಯಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಪೊಲೀಸ ಇಲಾಖೆಯಲ್ಲಿ ನಂದಗಡದ ಪೊಲೀಸ್ ಠಾಣೆಯ *ಪಿಎಸ್ಐ ಸುಮಾ ನಾಯಕ* ೧೦೧ ಹಳ್ಳಿಗಳನ್ನು ಹೊಂದಿರುವ ಪೊಲೀಸ್ ಠಾಣೆಯ ಮುಖ್ಯಸ್ಥೆಯಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಕಂದಾಯ , ಮೀನುಗಾರಿಕೆ , ಆರೋಗ್ಯ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದು ಕಾರ್ಯನಿರ್ವಹಿಸುತ್ತಿದ್ದಾರೆ . ಈ ದಿಶೆಯಲ್ಲಿ ಗಡಿಭಾಗ ಖಾನಾಪೂರದ ಅಭಿವೃದ್ಧಿಗೆ ತನ್ನದೇಯಾದ ಶೈಲಿಯಲ್ಲಿ ಶ್ರಮಿಸುತ್ತಿರುವ ಮಹಿಳೆಯರಿಗೆ ಮಹಿಳಾ ದಿನದಂದು ಸಲಾಂ

Related posts: