RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಮಾ 3 ಮತ್ತು 4 ರಂದು ಸಿದ್ಧಾರ್ಥ ಕಾಲೇಜಿನ ವರ್ಣೋತ್ಸವ ಸಂಭ್ರಮ

ಗೋಕಾಕ:ಮಾ 3 ಮತ್ತು 4 ರಂದು ಸಿದ್ಧಾರ್ಥ ಕಾಲೇಜಿನ ವರ್ಣೋತ್ಸವ ಸಂಭ್ರಮ 

ಮಾ 3 ಮತ್ತು 4 ರಂದು ಸಿದ್ಧಾರ್ಥ ಕಾಲೇಜಿನ ವರ್ಣೋತ್ಸವ ಸಂಭ್ರಮ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 2 :

 
ಸ್ಥಳೀಯ ಸಿದ್ಧಾರ್ಥ ಲಲಿತ ಕಲಾ ಮಹಾವಿದ್ಯಾಲಯ ಪ್ರತಿವರ್ಷವೂ ವರ್ಣೋತ್ಸವ ಸಂಭ್ರಮವನ್ನು ಆಚರಿಸುತ್ತಿದ್ದು, ಬರುವ ಮಾರ್ಚ 3 ಹಾಗೂ 4 ನೇ ತಾರೀಖಿನಂದು ಜರುಗುವ ಈ ಸಮಾರಂಭದಲ್ಲಿ ‘ಗೋಕಾವಿ ವರ್ಣಸಿರಿ ರಾಜ್ಯ ಪ್ರಶಸ್ತಿ’ ಪ್ರದಾನ ಜರುಗಲಿದೆ. ಬೆಂಗಳೂರಿನ ಯುವ ಚಿತ್ರಕಲಾವಿದರಾದ ಎ.ಎಸ್. ಕಂಬಾರ, ಹುಮನಾಬಾದನ ಸಂಗೀತಾ ಕಾಳಗಿ ಹಾಗೂ ಗೋಕಾಕದ ಮೋನಿಕಾ ಹಲವಾಯಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎರಡು ದಿನಗಳ ಕಾಲ ವರ್ಣಚಿತ್ರಗಳ ಪ್ರದರ್ಶನ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ. ‘ಬಡವ ಬದುಕಲೇಬೇಕು’ ಎಂಬ ನಾಟಕ ಜರುಗಲಿದೆ. ಗಣ್ಯ ಉದ್ಯಮಿ, ಯುವಧುರೀಣ ಲಖನ ಜಾರಕಿಹೊಳಿ ವರ್ಣೋತ್ಸವವನ್ನು ಉದ್ಘಾಟಿಸಲಿದ್ದು, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯ ಡಾ. ಸುಭಾಷ ಕಮ್ಮಾರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಗೋಕಾಕ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ ಕ್ಯಾಟಲಾಗ್ ಬಿಡುಗಡೆ ಮಾಡಲಿದ್ದು, ಇದೇ ಸಂದರ್ಭದಲ್ಲಿ ‘ಚಿತ್ರ-ಕಾವ್ಯ ದರ್ಶನ’ ವಿನೂತನ ಕಾರ್ಯಕ್ರಮದಲ್ಲಿ ಕವಿಗಳಾದ ಪುಷ್ಪಾ ಮುರಗೋಡ, ಲಕ್ಷ್ಮಣ ಚೌರಿ, ಮಹಾನಂದಾ ಪಾಟೀಲ, ಸೋಮಶೇಖರ ಬಾಳೋಜಿ, ರಜನಿ ಜೀರಗ್ಯಾಳ ಹಾಗೂ ಸುರೇಶ ಮುದ್ದಾರ ಸ್ಥಳದಲ್ಲಿಯೇ ಕಾವ್ಯಕಟ್ಟಿ ವಾಚಿಸಲಿದ್ದಾರೆ. ಸಂಸ್ಥೆಯ ಚೇರಮನ್ ಬಸವರಾಜ ಕಡಖಬಾವಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಾಚಾರ್ಯ ಜಯಾನಂದ ಮಾದರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts: