ಗೋಕಾಕ:ಕುಡಿಯುವ ನೀರಿನ ಯೋಜನೆ ಹಾಗೂ ಹೈಮಾಸ್ಕ್ ಎಲ್ಇಡಿ ವಿದ್ಯುತ್ ಬಲ್ಬ ಅಳವಡಿಕೆ ಕಾಮಗಾರಿಗೆ ಚಾಲನೆ
ಕುಡಿಯುವ ನೀರಿನ ಯೋಜನೆ ಹಾಗೂ ಹೈಮಾಸ್ಕ್ ಎಲ್ಇಡಿ ವಿದ್ಯುತ್ ಬಲ್ಬ ಅಳವಡಿಕೆ ಕಾಮಗಾರಿಗೆ ಚಾಲನೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಪೆ 21 :
ತಾಲೂಕಿನ ಹೊನಕುಪ್ಪಿ ಗ್ರಾಮದಲ್ಲಿ ಜಿ.ಪಂ. ಅನುದಾನದಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಹಾಗೂ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶಾಸಕರ ಅನುದಾನದಲ್ಲಿ 2ಲಕ್ಷ ರೂ. ವೆಚ್ಚದ ಹೈಮಾಸ್ಕ್ ಎಲ್ಇಡಿ ವಿದ್ಯುತ್ ಬಲ್ಬ ಅಳವಡಿಕೆ ಕಾಮಗಾರಿಗೆ ಸುಣಧೋಳಿ ತಾ.ಪಂ. ಸದಸ್ಯ ರಮೇಶ ಗಡಗಿ ಹಾಗೂ ಗ್ರಾ.ಪಂ. ಸದಸ್ಯ ಸುರೇಶ ಸಣ್ಣಕ್ಕಿ ಜಂಟೀಯಾಗಿ ಚಾಲನೆ ನೀಡಿದರು.
ನಂತರ ಮಾತನಾಡಿದ ಗ್ರಾ.ಪಂ. ಸದಸ್ಯ ಸುರೇಶ ಸಣ್ಣಕ್ಕಿ ಅವರು ಬೇಸಿಗೆ ಕಾಲ ಬಂತೆಂದರೆ ಕುಡಿಯುವ ನೀರಿಗಾಗಿ ಹಾಹಾಕಾರ ಏಳುತ್ತಿತ್ತು, ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಇದ್ದ ಕುಡಿಯುವ ನೀರಿನ ಸಮಸ್ಯೆಯನ್ನು ಮನಗಂಡು ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ವಿಶೇಷವಾದ ಕಾಳಜಿಯನ್ನು ವಹಿಸಿ ಈ ಅನುದಾನವನ್ನು ಮಂಜೂರು ಮಾಡಿಸಿದ್ದು, ನೀರಿನ ಜ್ವಲಂತ ಸಮಸ್ಯೆಯನ್ನು ಬಗೆಹರಿಸಲು 12 ತಿಂಗಳು ಅಂತರ್ಜಲವಿರುವ ಸ್ಥಳವನ್ನು ಗುರುತಿಸಲು ಚಿಕ್ಕೋಡಿಯ ಜಲ ತಜ್ಞರನ್ನು ಸ್ವತಃ ಶಾಸಕರೇ ಕರೆಯಿಸಿ ಹೊನಕುಪ್ಪಿ ಗ್ರಾಮದ ಮೇರಾಳ ತೋಟದಲ್ಲಿ ಜಲವಿರುವ ಸ್ಥಳವನ್ನು ಗುರುತಿಸಿ ಈ ಸ್ಥಳದಲ್ಲಿಯೇ ಭಾಂವಿಯನ್ನು ತೋಡಿಸಲು ಶಾಶ್ವತವಾದ ನೀರಿನ ವ್ಯವಸ್ಥೆಯನ್ನು ಮಾಡಿಸಿ ಆಧುನಿಕ ಭಗೀರಥರೆನಿಸಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದೇವತೆಗಳ ಆರ್ಚಕರಾದ ಮಹಾಂತಯ್ಯ ಮಠದ, ಹಣಮಂತ ಚನ್ನಾಳ, ಎನ್ಎಸ್ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ, ರವಿ ಪರುಶೆಟ್ಟಿ, ಶಿವಲಿಂಗಪ್ಪ ಬಳಿಗಾರ, ಬಸಪ್ಪ ಸಿದ್ದಾಪೂರ, ಮುದಕಪ್ಪ ದೊಡ್ಡಗೌಡರ, ಗುತ್ತಿಗೆದಾರರಾದ ಬಸವರಾಜ ಗಂಗರೆಡ್ಡಿ, ಹಣಮಂತ ಹೆಗಡೆ, ಯಲ್ಲಪ್ಪ ಆಲಕನೂರ, ಯಲ್ಲಪ್ಪ ದೊಡ್ಡಗೌಡರ, ಚತುರಪ್ಪ ಲಗಳಿ, ನಿಂಗಪ್ಪ ಹೆಗಡೆ, ಮಹಾದೇವ ಹುಲಗನ್ನವರ, ಭೀಮಪ್ಪ ಹೆಗಡೆ, ಶಂಕರ ನಾವಿ, ಈರಪ್ಪ ಲಗಳಿ ಸೇರಿದಂತೆ ಊರಿನ ಮುಖಂಡರು, ಗ್ರಾಮಸ್ಥರು ಇದ್ದರು.