ಗೋಕಾಕ:ಸರ್ಕಾರ ವಿಜ್ಞಾನ ಮತ್ತು ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ : ಭಾರತ ರತ್ನ ಪ್ರೊ : ಸಿ.ಎನ್.ಆರ್ ರಾವ್
ಸರ್ಕಾರ ವಿಜ್ಞಾನ ಮತ್ತು ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ : ಭಾರತ ರತ್ನ ಪ್ರೊ : ಸಿ.ಎನ್.ಆರ್ ರಾವ್
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 2 :
ಸರ್ಕಾರ ವಿಜ್ಞಾನ ಮತ್ತು ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಖ್ಯಾತ ವಿಜ್ಞಾನಿ, ಭಾರತ ರತ್ನ ಪ್ರೋ: ಸಿ.ಎನ್.ಆರ್ ರಾವ್ ಹೇಳಿದರು.
ಅವರು ಶನಿವಾರದಂದು ಸಂಜೆ ನಗರದ ಶೂನ್ಯ ಸಂಪಾದನಾ ಮಠದ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ 14ನೇ ಪುಣ್ಯಸ್ಮರಣೋತ್ಸವ ಹಾಗೂ ಶರಣ ಸಂಸ್ಕøತಿ ಉತ್ಸವ ಮತ್ತು ಶಿಕ್ಷಕರ ಸಮಾವೇಶ ಹಾಗೂ ಶ್ರೀಮಠದಿಂದ ನೀಡುವ 2019ನೇ ಸಾಲಿನ ಕಾಯಕಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಇಂದು ನಮ್ಮ ಭಾರತ ದೇಶವು ವಿಜ್ಞಾನದಲ್ಲಿ ಪ್ರಥಮ ಶ್ರೇಣಿಯಲ್ಲಿ ಬರಬೇಕು. ವಿಜ್ಞಾನ ಮತ್ತು ವಿದ್ಯೆಯ ಬಗ್ಗೆ ಪಾಲಕರು ಮಕ್ಕಳ ಕಾಳಜಿ ವಹಿಸಿ ಮತ್ತು ಶಿಕ್ಷಕರು ಉತ್ತೇಜನ ನೀಡಬೇಕು. ಮುಂಬರುವ 15 ವರ್ಷಗಳಲ್ಲಿ ಭಾರತ ದೇಶವು ವಿಜ್ಞಾನದಲ್ಲಿ ಮುಂದೆ ಬರುತ್ತದೆ. ಅದನ್ನು ನಾವು ನೋಡುತ್ತೇವೆ. ನಮ್ಮ ದೇಶದಲ್ಲಿ ಬುದ್ದಿವಂತರು ಇದ್ದಾರೆ. ಅದರ ಸರಿಯಾದ ಸದ್ಬಳಕೆಯಾಗಬೇಕು. ಕಷ್ಟ ಪಟ್ಟು ಮುಂದೆ ಬರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಮ್ಮ ದೇಶದಲ್ಲಿ ಭವಿಷ್ಯ ಇದೆ. ಆ ಭವಿಷ್ಯದಲ್ಲಿ ವಿಜ್ಞಾನ ಅಡಗಿದೆ. ವಿಜ್ಞಾನ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು. ಹಣಕಾಸಿನಲ್ಲಿ ನಮ್ಮ ದೇಶ ಮುಂದೆ ಇದೆ ಆದರೆ ಅದನ್ನು ಬುದ್ದಿವಂತಿಕೆಯಿಂದ ಬಳಸಬೇಕು. ನಾನು ಮೊಬೈಲ್ ಉಪಯೋಗಿಸುವುದಿಲ್ಲ. ವಿದ್ಯಾರ್ಥಿಗಳು ಮೊಬೈಲದಿಂದ ದೂರುಳಿದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರಲ್ಲದೇ ನಾಡಿನ ಹಿರಿಯ ಸಾಧಕರನ್ನು ಗುರುತಿಸಿ ಅವರಿಗೆ ಕಾಯಕಶ್ರೀ ಪ್ರಶಸ್ತಿ ನೀಡುತ್ತಿರುವ ಶ್ರೀಮಠದ ಕಾರ್ಯ ಶ್ಲಾಘನೀಯವಾಗಿದೆ. ವಿಜ್ಞಾನ ಅರಿವು ಮೂಡಿಸುವಂತಹ ಕಾರ್ಯ ಮಾಡಿದಾಗ ಮಾತ್ರ ದೇಶವು ಸದೃಢವಾಗುತ್ತದೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹಾಗೂ ದಿವ್ಯ ಸಾನಿಧ್ಯವನ್ನು ಮೂರು ಸಾವಿರ ಮಠ ಹುಬ್ಬಳ್ಳಿ-ಹಾನಗಲ್ಲದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ವಹಿಸಿದ್ದರು. ನೇತೃತವವನ್ನು ಶಿಗ್ಗಾಂವ ವಿರಕ್ತಮಠದ ಶ್ರೀ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು.
ವೇದಿಕೆ ಮೇಲೆ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ (ಮೌಲ್ಯಮಾಪನ) ಕುಲಸಚಿವ ರಂಗರಾಜ ವನದುರ್ಗ, ಬೆಂಗಳೂರಿನ ವಿಪ್ರೊದ ವ್ಯವಸ್ಥಾಪಕ ನಿರ್ದೇಶಕ ಪ್ರಭುನಂದಯ್ಯ ಕೋಟುರ, ಡಾ. ರವಿ ಪಾಟೀಲ, ಬಿಇಒಗಳಾದ ಜಿ.ಬಿ.ಬಳಗಾರ, ಅಜೀತ ಮನ್ನಿಕೇರಿ, ಅಶೋಕ ಪೂಜಾರಿ, ಮಲ್ಲಿಕಾರ್ಜುನ ಚುನಮರಿ, ಈರಣ್ಣ ಕಡಾಡಿ ರುದ್ರಗೌಡ ಪಾಟೀಲ, ಮಲ್ಲಿಕಾರ್ಜುನ ಕಲ್ಲೋಳ್ಳಿ, ಪ್ರವೀಣ ಚುನಮರಿ, ವಿವೇಕ ಜತ್ತಿ ಉಪಸ್ಥಿತರಿದ್ದರು.
ಶಿಕ್ಷಕರುಗಳಾದ ಎನ್.ಟಿ.ಬಡವಣ್ಣಿ, ಬಸವರಾಜ ಕಡಕೋಳ, ಆರ್.ಎಮ್.ಅಳಗಣ್ಣವರ, ಯಲ್ಲಪ್ಪ ಕುರಬಗಟ್ಟಿ, ಬಸವರಾಜ ಮುರಗೋಡ, ಎಸ್.ಎಮ್.ಮುಲ್ಲಾ, ಬಸವರಾಜ ಸನದಿ, ಮಹಾದೇವಿ ದಯಣ್ಣವರ, ಮಂಜುಳಾ ಬಡ್ಡೂರ, ಶೋಭಾ ನೇಗಳಿ, ಆರೀಫಹುಸೇನ ಟೋಪಿಚಾಂದ, ಕೃಷ್ಣಪ್ಪ ಯಡಹಳ್ಳಿ, ಅಂಜನಾ ಚಂದರಗಿ, ಶುಭಾ ಬಿ., ಜ್ಯೋತಿ ಕೊಳವಿ, ಬಸವರಾಜ ವಗ್ಗನವರ, ಮಹಾವೀರ ಸಲ್ಲಾಗೋಳ, ಶೋಭಾರಾಣಿ ಕೊತ್ತಲ, ಭಾಗ್ಯವತಿ ರಜಪೂತ, ಶಶಿಕಲಾ ಉಪ್ಪಾರ, ಲಕ್ಕಪ್ಪ ಕೊಳವಿ ಅವರನ್ನು ಸತ್ಕರಿಸಲಾಯಿತು.
ಡಾ| ಸಿ.ಕೆ.ನಾವಲಗಿ ಕಾಯಕಶ್ರೀ ಪ್ರಶಸ್ತಿಯ ಬಿತ್ತಳಿಕೆಯನ್ನು ಓದಿದರು. ಆರ್.ಎಲ್.ಮಿರ್ಜಿ ಸ್ವಾಗತಿಸಿದರು. ಎಸ್.ಕೆ.ಮಠದ ನಿರೂಪಿಸಿದರು. ಅಡಿವೇಶ ಗವಿಮಠ ವಂದಿಸಿದರು.