RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಮನವಿ

ಗೋಕಾಕ:ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಮನವಿ 

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಮನವಿ

ಗೋಕಾಕ ಜ 23 : ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಕರವೇ(ಸ್ವಾಭಿಮಾನಿ ಬಣ)ದ ತಾಲೂಕಾ ಘಟಕದ ಕಾರ್ಯಕರ್ತರು ಬುಧವಾರದಂದು ನಗರದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಕೊನೆಯ ಗ್ರಾಮವಾದ ಈರಲಟ್ಟಿ ಗ್ರಾಮಕ್ಕೆ ಸುಮಾರು ವರ್ಷಗಳಿಂದ ಬಸ್ ವ್ಯವಸ್ಥೆ ಇರುವದಿಲ್ಲ, ಈ ಗ್ರಾಮದ ಮಾರ್ಗವಾಗಿ ಬರುವ ಪಾಮಲದಿನ್ನಿ, ಗಣಪತಿ ಗುಡಿ, ಪಾಮಲದಿನ್ನಿ ಕ್ರಾಸ್‍ಗಳಿಂದ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್‍ಗಳ ಸೌಲಭ್ಯವನ್ನು ಒದಗಿಸಬೇಕು. ಇಲ್ಲವಾದಲ್ಲಿ ಕರವೇಯಿಂದ ಉಗ್ರ ಹೋರಾಟವನ್ನು ಮಾಡಲಾಗುವುದೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ತಾಲೂಕಾಧ್ಯಕ್ಷ ಸಂತೋಷ ಕಂಡ್ರಿ, ಲಗಮಣ್ಣ ನಾಯಿಕ, ಪ್ರವೀಣ ಗುಡ್ಡಕಾಯು, ಸುನೀಲ ಬೇಡರಟ್ಟಿ, ನಾಗಪ್ಪ ಬಡೆಸಗೋಳ, ಇಮ್ರಾನ ಜಕಾತಿ, ಮಾರುತಿ ಚೌಕಾಶಿ, ಮಹಾಂತೇಶ ಗದಿಗನ್ನವರ, ಬಸವರಾಜ ಹುಬ್ಬಳ್ಳಿ, ಮಹಾಂತೇಶ ಕುಂಬಾರ, ರಮೇಶ ನಾವಿ, ಶ್ರೀಶೈಲ ಕುಂಬಾರ, ಅಮಿತ ಲೋಕುಂಡಿ, ಸಂಜಯ ಕೊಳವಿ ಸೇರಿದಂತೆ ಅನೇಕರು ಇದ್ದರು.

Related posts: